ಚೆಟ್ಟಿನಾಡ ಸಿಮೆಂಟ್ ಕಂಪನಿ ಕಾರ್ಮಿಕನ ಸಾವು

ಚೆಟ್ಟಿನಾಡ ಸಿಮೆಂಟ್ ಕಂಪನಿ ಕಾರ್ಮಿಕನ ಸಾವು 

ಚಿಂಚೋಳಿ : ಕಲ್ಲೂರ ರೋಡ್ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ ತಾಲೂಕಿನ ಗಣಾಪೂರ ಗ್ರಾಮದ ಯುನೂಸ್ ತಂದೆ ಫತ್ರುಸಾಬ್ ಮುಲ್ಲಾ ವಯಸ್ಸು (24) ಎಂಬ ಕಾರ್ಮಿಕ ಮೃತ ಪಟ್ಟಿರಿವ ಪ್ರಕರಣ ಬೆಳಕಿಗೆ ಬಂದಿದೆ.

 ಕೆಲಸ ನಿರ್ವಹಿಸುತ್ತಿದ ಕಾರ್ಮಿಕನಿಗೆ ಕಂಪನಿ ಯಾವುದೇ ಸೇಫ್ಟಿ ಸಲಕರಣೆಗಳು ನೀಡದೇ ಹಾಗೇ ಕೆಲಸ ನಿರ್ವಹಿಸುತ್ತಿರುವುದರಿಂದ ಹೈಡ್ರೋ ಲ್ಯಾಡರ್ ವಿದ್ಯುತ್ ಕಂಬದ ಮೇಲಿನಿಂದ ಬಿದ್ದು ಮೃತ ಪಟ್ಟಿದ್ದಾನೆ ಎನ್ನಲಾಗುತ್ತಿದೆ. ಮೃತ ಕಾರ್ಮಿಕನ ಶವ ಸರಕಾರಿ ಆಸ್ಪತ್ರೆಗೆ ಸಾಗಿಸದೆ ಖಾಸಗಿ ಆಸ್ಪತ್ರೆಗೆ ಸಾಗಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾರ್ಖಾನೆ ಮುಖ್ಯದ್ವಾರದ ಎದುರುಗಡೆ ನ್ಯಾಯಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಆದರೆ ಪೊಲೀಸರು ಕಂಪನಿ ಒಳಗಡೆ ಮಾಧ್ಯಮದವರನ್ನು ಬಿಡದೆ ಮುಖ್ಯದ್ವಾರದಲ್ಲಿಯೇ ತಡೆದು ನಿಲ್ಲಿಸಲಾಗಿದೆ. ಇನೋರ್ವ ಕಾರ್ಮಿಕ ಗಾಯಗೊಂಡು ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೆಡಿಎಸ್ ಪಕ್ಷದ ಮುಖಂಡ ಸಂಜೀವನ ಯಾಕಾಪೂರ್ ಅವರು ಮೃತ ಕುಟುಂಬದ ನೆರವಿಗೆ ಧಾವಿಸಿ ಬಂದರು.