ವಾರ್ಡ ನಂ.37ರ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಮಗಾರಿ ಮಾಡಬೆಕೇಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

ವಾರ್ಡ ನಂ.37ರ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಮಗಾರಿ ಮಾಡಬೆಕೇಂದು  ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

ವಾರ್ಡ ನಂ.37ರ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಮಗಾರಿ ಮಾಡಬೆಕೇಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ

ಕಲಬುರಗಿ: ವಾರ್ಡ ನಂ.37ರ ವ್ಯಾಪ್ತಿಯಲ್ಲಿ ಬರುವ ರಸ್ತೆ ಸುಧಾರಣೆ ಮಾಡಬೇಕೆಂದು ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ನಗರದ ವಾರ್ಡ್ ನಂ.37ರ ವ್ಯಾಪ್ತಿಯಲ್ಲಿ ಬರುವ ಕ್ರಾಸ್‌ದಿಂದ ಆನಂದ ಹೋಟೇಲವರೆಗೆ ರಸ್ತೆಯಲ್ಲಿರುವ ತೆಗ್ಗು/ಗುಂಡಿಗಳನ್ನು ಮುಚ್ಚಿಸಬೇಕು, ಘನಶ್ಯಾಮ ಅಪಾರ್ಟಮೆಂಟದಿAದ ಲಾಳಗಿರಿ ಕ್ರಾಸ್ ವರೆಗೆ ಹೊಸದಾಗಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಮಾಚ್ 10.ರ ವರೆಗೆ ಪೂರ್ಣಗೊಳಿಸಬೇಕು ಇಲ್ಲವೆ ಶರಣಬಸವೇಶ್ವರ ಜಾತ್ರಾ ಮುಗಿಯುವವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು.  

ಘನಶ್ಯಾಮ ಅಪಾರ್ಟಮೆಂಟದಿAದ ಫೈರಸ್ಟೇಷನ ಒಳಗಡೆಯಿಂದ ಹಾಯ್ದು ಹೋಗಿರುವ ಕಿಲ್ಲಾವರೆಗೆ ಮಾಡಿದ ಹಳೆ ಡ್ರೈನ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು, ಸ್ವಚ್ಛಗೊಳಿಸಿದ ನಂತರ ಶಾಸಕರು ಬಂದು ಪರಿಶೀಲಿಸಬೇಕು. ಕಲ್ಯಾಣ ನಗರದಲ್ಲಿ ಹಳೆ ಯು.ಜಿ.ಡಿ. ಲೈನ ಇದ್ದು ಹೊಸದಾಗಿ ಪೈಪಲೈನನ್ನು ಹಾಕಿಸಬೇಕು. ಕಲ್ಯಾಣ ನಗರದ ರವಿ ಇವರ ಮನೆಯಿಂದ ವೆಂಕಟೇಶ ಕುಂಡಾ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ ಮಾಡಬೇಕು, ಘನಶ್ಯಾಮ ಅಪಾರ್ಟಮೆಂಟದಿAದ ಲಾಳಗಿರಿ ಕ್ರಾಸ ವರೆಗೆ ಯಾತ್ರಾರ್ಥಿಗಳಿಗೆ ಫುಟಪಾತ ನಿರ್ಮಾಣ ಮಾಡಬೆಕೇಂದು ಮನವಿಯಲ್ಲಿ ತಿಳಿಸಿದ್ದಾರೆ. ಗೌರವ ಅಧ್ಯಕ್ಷ ಶಿವಕುಮಾರ ಬಾಳಿ, ಅಧ್ಯಕ್ಷ ಲೂಯಿಸ ಕೋರಿ, ಉಪಾಧ್ಯಕ್ಷೆ ಮಧುಮತಿ ಕೈಲಾಸಪತಿ, ಕಾರ್ಯದರ್ಶಿಗಳಾದ ತುಕಾರಾಮ ಕೊಳ್ಳೂರ, ಸಾಜೀದ ಅಹ್ಮದ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ರಾಮಲಿಂಗ ಮಠಪ, ಕೆ.ಮಲ್ಲಿನಾಥ ಸೇರಿದಂತೆ ಇತರರು ಇದ್ದರು.