ಶಶೀಲ್ ಜಿ ನಮೋಶಿಯವರ ಅದ್ಯಕ್ಷತೆಯಲ್ಲಿ ಮೂರೇ ತಿಂಗಳಲ್ಲಿ ಬಸವೇಶ್ವರ ಆಸ್ಪತ್ರೆ ಬಹಳಷ್ಟು ಬದಲಾವಣೆ ಕಂಡಿದೆ - ಪರಮ ಪೂಜ್ಯ ಗಂಗಾದರಯ್ಯ ಮಹಾಸ್ವಾಮೀಜಿ

ಶಶೀಲ್ ಜಿ ನಮೋಶಿಯವರ ಅದ್ಯಕ್ಷತೆಯಲ್ಲಿ ಮೂರೇ ತಿಂಗಳಲ್ಲಿ ಬಸವೇಶ್ವರ ಆಸ್ಪತ್ರೆ ಬಹಳಷ್ಟು ಬದಲಾವಣೆ ಕಂಡಿದೆ - ಪರಮ ಪೂಜ್ಯ ಗಂಗಾದರಯ್ಯ ಮಹಾಸ್ವಾಮೀಜಿ

ಶಶೀಲ್ ಜಿ ನಮೋಶಿಯವರ ಅದ್ಯಕ್ಷತೆಯಲ್ಲಿ ಮೂರೇ ತಿಂಗಳಲ್ಲಿ ಬಸವೇಶ್ವರ ಆಸ್ಪತ್ರೆ ಬಹಳಷ್ಟು ಬದಲಾವಣೆ ಕಂಡಿದೆ - ಪರಮ ಪೂಜ್ಯ ಗಂಗಾದರಯ್ಯ ಮಹಾಸ್ವಾಮೀಜಿ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಟಿತ ಬಸವೇಶ್ವರ ಭೊದನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಅತಿಕಡಿಮೆ ಬೆಲೆಯಲ್ಲಿ ತಯಾರದ ಇತರ ಸಂಸ್ಥಗಳಿಗೆ ಮಾದರಿಯಾಗಿ ನಿರ್ಮಿಸಿದ ಉತ್ಕೃಷ್ಟ ಮಟ್ಟದ ಸುಸಜ್ಜಿತ ಆಪರೇಷನ್ ಥಿಯೇಟರ್ ಹಾಗು ಆಸ್ಪತ್ರೆಯ ರೋಗಿಗಳು ಹಾಗು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೆನರಾಬ್ಯಾಂಕ್ ಎ.ಟಿ.ಎಮ್ ಕೇಂದ್ರ ಮತ್ತು ಆಸ್ಪತ್ರೆಯ ಸ್ವಚ್ಚತೆಗಾಗಿ ತರಿಸಲಾದ ಯಾಂತ್ರಿಕ ಉಪಕರಣÀಗಳನ್ನು ಉದ್ಘಾಟಿಸಿದ ಶ್ರೀಗಳು ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾದ್ಯಾಪಕರಾದ ಶ್ರೀ ಅತ್ತಾರ್ ಅವರ ಸಹಕಾರದಿಂದ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳಿಗೆ ದಾನ್ಯ ವಿತರಣೆ ಮಾಡಿ ಮಾಡಲಾಯಿತು ಹಾಗೂ ಅತ್ಯುತ್ತಮ ಕಾರ್ಯನಿರ್ವಹಿಸಿದ ಪರಿಚಾರಕರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶಶೀಲ್ ನಮೋಶಿಯವರು ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರರು, ಮಹಾದೇವಪ್ಪ ರಾಂಪುರೆ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನಮೋಶಿಯವರ ಪಾತ್ರ ಹೆಚ್ಚಿದೆ, ಇಂದು ಉದ್ಘಾಟಿಸಿದ ಶಸ್ತçಚಿಕಿತ್ಸಾ ಕೇಂದ್ರದಿಮದ ಬಡ ರೋಗಿಗಳು ಕಡಿಮೆ ಬೆಲೆಯಲ್ಲಿ ದೊಡ್ಡ ಮಟ್ಟದ ಶಸ್ತçಚಿಕಿತ್ಸೆ ಹೊಂದಬಹುದಾಗಿದೆ, ಸಂಸ್ಥೆಯ ಅಭಿವೃದ್ಧಿಯ ವೇಗ ಪಡೆದಿರುವು ಅಷ್ಟೇ ಅಲ್ಲದೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಇದರ ಮೂಲಕ ತಿಳಿಯುತ್ತಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಶಶೀಲ್ ಜಿ ನಮೋಶಿಯವರು ಬಸವೆಶ್ವರ ಆಸ್ಪತ್ರೆ ಸಂಸ್ಥಾಪಕರ ಆಶಯದಂತೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿತ್ತು ಈಗ ಅವರ ಆಶಯವನ್ನು ಸಾಕಾರ ಮಾಡಲು ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿಯವರು, ಸದಸ್ಯರು, ಸಿಬ್ಬಂದಿಗಳು, ಹಾಗು ವಿದ್ಯಾರ್ಥಿಗಳು ಒಂದು ಕುಟುಂಬದAತೆ ಎಂದು ಬಾವಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದೇವೆ ಅದರಂತೆ ಈ ಸಂಸ್ಥೆಯನ್ನು ಈ ಭಾಗದಲ್ಲಿಯೇ ದೊಡ್ಡದಾದ ಮಾದರಿ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಯಕ್ರಮಲ್ಲಿ ಸಂಸ್ಥೆಯ ಉಪಾದ್ಯಕ್ಷರಾದ ಶ್ರೀ ರಾಜ ಭಿ ಭೀಮಳ್ಳಿ, ಕಾರ್ಯಧಶಿಗಳಾದ ಶ್ರೀ ಉದಯ ಕುಮಾರ ಚಿಂಚೋಳಿರವರು, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲರವರು, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರಣಗೌಡ ಪಾಟೀಲ್ ಹಾಗು ಮೆಡಿಕಲ್ ಸೂಪರಿಡೆಂಟ್ ಡಾ. ಶರಣ ಬಸಪ್ಪ ಅವಂತಿ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಡಾ. ಅರುಂಧತಿ ಪಾಟೀಲ್ ನಿರೂಪಿಸಿದರೂ.