ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದು : ಬಿ.ಫೌಜಿಯಾ ತರನ್ನುಮ್

ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದು : ಬಿ.ಫೌಜಿಯಾ ತರನ್ನುಮ್

ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದು : ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ನೋಡಲ್ ಹಾಗೂ ಕಲಬುರಗಿ ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಕೌಶಲ್ಯ ಸ್ಪರ್ಧೆ ಹಾಗು ಕ್ರೀಡಾಕೂಟಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಉದ್ಘಾಟಿಸಿ ಮಾತನಾಡುತ್ತಾ ಐ.ಟಿ.ಐ.ಕೋರ್ಸುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ನೀವೆಲ್ಲ ಚಿಕ್ಕ ವಯಸ್ಸಿನವರಾಗಿದ್ದು ಉನ್ನತ ಸಾಧನೆಗೆ ಸಾಕಷ್ಟು ನಿಮಗೆ ಕಾಲಾವಕಾಶವಿದೆ ಎನ್ನುವ ಕಿವಿಮಾತನ್ನು ಹೇಳಿದರು. ಸಾಮಾನ್ಯ ಜನರಲ್ಲಿ ಒಬ್ಬಳಾದ ನಾನು ಇಂಥ ಹುದ್ದೆಯನ್ನು ವಹಿಸಿಕೊಂಡಿರಬೇಕಾದರೆ ನೀವ್ಯಾಕೆ ಐ.ಎ.ಎಸ್. ಆಗಬಾರದು? ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ನಾನು ನೋಡಿದಂತೆ ಕಲಬುರಗಿ ಜಿಲ್ಲೆಯ ಜನರು ಶ್ರಮಜೀವಿಗಳು ಹಾಗು ಮುಗ್ಧರು, ನಿಮ್ಮ ಜೊತೆ ಕೆಲಸ ಮಾಡಲು ನನಗೆ ತುಂಬಾ ಹರ್ಷವೆನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಕೌಶಲ್ಯ ಸ್ಪರ್ಧೆ ಹಾಗು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ಪ್ರೋತ್ಸಾಹದೊಂದಿಗೆ ವೇದಿಕೆಯ ಮೇಲಿರುವ ಗಣ್ಯರೊಡಗೂಡಿ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಚಾರ್ಯರರಾದ ಮುರಲಿಧರ ರತ್ನಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಪ್ರತೀ ವರ್ಷ ಜಿಲ್ಲಾ ಮಟ್ಟದ ಕ್ರೀಡೆ ಹಾಗು ಕೌಶಲ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಪಾರಿತೋಷಕ ವಿತರಣೆಗೆ ಕೇಳಿಕೊಂಡಾಗ ತಮ್ಮ ಬಿಡುವಿಲ್ಲದ ಕೆಲಸದ ಜೊತೆಗೂ ನಮ್ಮ ಸಮಾರಂಭಕ್ಕೆ ಆಗಮಿಸಿ ನಮಗೆಲ್ಲರಿಗೂ ಸ್ಪೂರ್ತಿಯಾಗಿ ಐ.ಟಿ.ಐ. ಮಕ್ಕಳಿಗೆ ಹುರಿದುಂಬಿಸಿದ್ದಕ್ಕೆ ಈ ವೇದಿಕೆ ಮೂಲಕ ಅವರನ್ನು ಗೌರವಿಸುತ್ತೇನೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸುರೇಶ ವಗ್ಗೆ ಆಡಳಿತಾಧಿಕಾರಿಗಳು, ಡಾ.ರುಬಿನಾ ಪರ್ವೀನ ಉಪನಿರ್ದೇಶಕರು, ವಿಭಾಗೀಯ ಕಛೇರಿ ಕಲಬುರಗಿ, ಶಕೀಲ ಅನ್ಸಾರಿ ಪ್ರಾಚಾರ್ಯರು ಸರ್ಕಾರಿ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿಯವರು ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಭಾರತಿ ಮಹಾದೇವಪ್ಪ ತರಬೇತಿ ಅಧಿಕಾರಿಗಳು ಎಲ್ಲರನ್ನು ಸ್ವಾಗತಿಸಿದರು. ಪಾರಿತೋಷಕ ವಿತರಣೆಯನ್ನು ಬಸನಗೌಡ ಪಾಟೀಲ ಅವರು ನಡೆಸಿಕೊಟ್ಟರು. ಲೋಕೇಶ ಬೇಲೂರ, ವಂದಿಸಿದರು. ವಿಜಯಕುಮಾರ ಮೇಳಕುಂದಿ ಅವರು ನಿರೂಪಿಸಿದರು.