ತಾನು ತಾನಾರೆಂದು ಅರಿದೊಡೆ ತಾನೇ ದೇವರು

ತಾನು ತಾನಾರೆಂದು ಅರಿದೊಡೆ ತಾನೇ ದೇವರು
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಏಳನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ ,
ಈ ಜಗತ್ತಿನ ಇತಿಹಾಸದಲ್ಲಿ ಆಸ್ತಿ ಅಂತಸ್ತಿಗಾಗಿ ನಡೆದ ಯುದ್ಧಗಳಿಗಿಂತ ದೇವರು ಧರ್ಮದ ಮೇಲೆ ನಡೆದ ಯುದ್ಧಗಳೇ ಹೆಚ್ಚಾಗಿವೆ .ದೇವರ ಹೆಸರಿನ ಮೇಲೆ ಶೋಷಣೆಗಳೇ ಹೆಚ್ಚಾಗಿ ನಡೆದಿವೆ .ವೇದಗಳು ದೇವರಿಂದ ಹೇಳಲ್ಪಟ್ಟವು ಅವು ಪ್ರಶ್ನಾತೀತವೆಂದು ವೈದಿಕರು ಹೇಳುತ್ತಾರೆ .ಅವು ದೇವರ ಸೃಷ್ಟಿಯಾದರೆ ಅವು ಪ್ರಾಣಿವಧೆಯನ್ನು ಹೇಳುತ್ತಿರಲಿಲ್ಲ .ದೇವರನ್ನು ನಂಬುವನಿರಲಿ ನಂಬದವನಿರಲಿ ಅವರಲ್ಲಿ ಸದ್ಗುಣಗಳಿರಬೇಕು ಮನುಷ್ಯತ್ವ ಇರಬೇಕು ಅದೇ ಶ್ರೇಷ್ಠವಾದದು .ತಾನು ತಾನಾರೆಂದು ಅರಿದಡಿ ತಾನೇ ದೇವರು ಎಂದು ನುಡಿದರು .
ಇಡೀ ಭಾರತದಾದ್ಯಂತ ದ್ರಾವಿಡ ಶೈವ ಸಂಸ್ಕೃತಿ ಇತ್ತು . ಉತ್ತರ ಭಾರತದಲ್ಲಿ ಪ್ರವೇಶಿಸಿದ ಆರ್ಯವೈಷ್ಣವ ಸಂಸ್ಕೃತಿ ದ್ರಾವಿಡರನ್ನು ತಳ್ಳುತ್ತಾ ಭಾರತದ ದಕ್ಷಿಣದಡೆಗೆ ಸಾಗಿಸಿತು .ಕ್ರಮೇಣ ದ್ರಾವಿಡ ಸಂಸ್ಕೃತಿಯ ಮೇಲೆ ಆರ್ಯ ಸಂಸ್ಕೃತಿ ಪ್ರಭಾವ ಬೀರಿತು .ವೈದಿಕರಲ್ಲಿ ಸ್ತ್ರೀಗೆ ಸ್ವಾತಂತ್ರ್ಯವಿಲ್ಲ .ಜೈನರಲ್ಲಿಯೂ ಸ್ತ್ರೀ ಕನಿಷ್ಠ ವಾಗಿದ್ದಾಳೆ . ಶರಣ ಸಂಸ್ಕೃತಿಯಲ್ಲಿ ಮಾತ್ರ ಸ್ತ್ರೀ ಪುರುಷರು ಸಮಾನರಾಗಿದ್ದಾರೆ .ವೈದಿಕ ಧರ್ಮವನ್ನು ತಿರಸ್ಕರಿಸಿ ಹುಟ್ಟಿದ ಅವೈದಿಕ ಧರ್ಮವೇ ಲಿಂಗಾಯಿತ ಧರ್ಮ .ಶರಣ ಧರ್ಮವಾಗಿದೆ .ಗೌತಮ ಬುದ್ಧನು ಸಹ ವೇದಗಳನ್ನು ತಿರಸ್ಕರಿಸಿದ್ದಾನೆ .
ಜೈನರು ವೈದಿಕವನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಂಡಿದ್ದಾರೆ .ಆದರೂ ಅದಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನವಿದೆ .ಆದರೆ ವೈದಿಕರನ್ನು ಸಂಪೂರ್ಣ ತಿರಸ್ಕರಿಸಿದ ಲಿಂಗಾಯಿತ ಧರ್ಮವೇಕೆ ಸ್ವತಂತ್ರ ಧರ್ಮವಾಗಬಾರದೆಂದು ಮಾರ್ಮಿಕವಾಗಿ ನುಡಿದರು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖುಬಾ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಡಾ . ಕೆ ಎಸ್ ವಾಲಿ , ಡಾ. ಎ. ಎಸ್ ಪಾಟೀಲ್ ,ಬಂಡಪ್ಪ ಕೇಸುರ್ ಅವರುಹಾಜರಿದ್ದರು .