ರಾಷ್ಟ್ರೀಯ ಲೋಕ್ ಜನಶಕ್ತಿ ಪಾರ್ಟಿಯ ಮಜದೂರ ಸೆಲ್ನ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಕಾಂತ ಕೆ ಪೂಜಾರಿ ಆಯ್ಕೆ

ರಾಷ್ಟ್ರೀಯ ಲೋಕ್ ಜನಶಕ್ತಿ ಪಾರ್ಟಿಯ ಮಜದೂರ ಸೆಲ್ನ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಕಾಂತ ಕೆ ಪೂಜಾರಿ ಆಯ್ಕೆ
ಕಲಬುರಗಿ: ರಾಷ್ಟ್ರೀಯ ಲೋಕ್ ಜನಶಕ್ತಿ ಪಾರ್ಟಿಯ ಮಜದೂರ ಸೆಲ್ ನ ರಾಜ್ಯಾಧ್ಯಕ್ಷ ರಾಜು ಎಸ್ ಲೇಂಗಟಿ ಅವರ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ಚಂದ್ರಕಾಂತ ಕೆ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.
ಜಗತ್ ವೃತ್ತದ ಬಳಿ ಇರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ರಾಜ್ಯಾಧ್ಯಕ್ಷ ರಾಜು ಎಸ್ ಲೇಂಗಟಿ ಅವರು ನೂತನವಾಗಿ ರಾಷ್ಟ್ರೀಯ ಲೋಕ್ ಜನಶಕ್ತಿ ಪಾರ್ಟಿಯ ಮಜದೂರ ಸೆಲ್ ನ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಕಾಂತ ಕೆ ಪೂಜಾರಿ ಅವರಿಗೆ ಪಾರ್ಟಿಯ ಶಾಲು ಹೊದಿಸಿ ಆದೇಶ ಪತ್ರವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ರಾಜ್ಯಾಧ್ಯಕ್ಷ ರಾಜು ಎಸ್ ಲೇಂಗಟಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂತನವಾಗಿ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಚಂದ್ರಕಾಂತ ಕೆ ಪೂಜಾರಿ ಅವರಿಗೆ ಪಕ್ಷದ ಸಿದ್ಧಾಂತಗಳ ಬಗ್ಗೆ ಪಾಲನೆ ಮಾಡಬೇಕು ಹಾಗೂ ಕಾರ್ಮಿಕರ ಪರ ದ್ವನಿ ಎತ್ತಬೇಕು ಎಂದು ಸಲಹೆ ನೀಡಿ ಜಿಲ್ಲಾ ಅಧ್ಯಕ್ಷರಾದ ಚಂದ್ರಕಾಂತ ಕೆ ಪೂಜಾರಿ ಅವರಿಗೆ ರಾಜ್ಯಾಧ್ಯಕ್ಷ ರಾಜು ಎಸ್ ಲೇಂಗಟಿ ಅವರು ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಆರ್ ಬಾಚನಾಳ, ರಾಷ್ಟ್ರೀಯ ಕಾರ್ಯದರ್ಶಿ ಡಾ ಬಿ ಆರ್ ಸಿಂಗ್ ಗುರುಜಿ, ಮಹಿಳಾ ಹೋರಾಟಗಾರ್ತಿ ಮಹಾಲಕ್ಷ್ಮಿ ಆರ್ ಆಲಬಾಯಿ, ದೇವಿಂದ್ರಪ್ಪ ಸಣ್ಣೂರ, ಅರುಣ್ ಕುಮಾರ್, ಬಸವರಾಜ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.