ಕಲಬುರಗಿ ಬಸವಸಮಿತಿ ವಚನ ಆಷಾಡ ಪ್ರವಚನ "ಮಹಾನ್‌ದಾರ್ಶನಿಕ ಬಸವಣ್ಣ" ಉದ್ಘಾಟನೆ

ಕಲಬುರಗಿ ಬಸವಸಮಿತಿ ವಚನ ಆಷಾಡ ಪ್ರವಚನ "ಮಹಾನ್‌ದಾರ್ಶನಿಕ ಬಸವಣ್ಣ" ಉದ್ಘಾಟನೆ

ಕಲಬುರಗಿ ಬಸವಸಮಿತಿ ವಚನ ಆಷಾಡ ಪ್ರವಚನ "ಮಹಾನ್‌ದಾರ್ಶನಿಕ ಬಸವಣ್ಣ" ಉದ್ಘಾಟನೆ

 22/06/2025 ರಿಂದ 20/07/2025 ರವರೆಗೆ ಒಂದು ತಿಂಗಳ ರ‍್ಯಂತ ಜರಗುವ ವಚನ ಆಷಾಢ ಪ್ರವಚನ ಉದ್ಘಾಟನೆಯನ್ನು ಬೆಂಗಳೂರು ಕೆಂದ್ರ ಬಸವಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿಯವರು ನೆರವೇರಿಸಿದರು, ಉದ್ಘಾಟನ ನುಡಿಗಳನ್ನು ಆಡಿದ ಅವರು ಬಸವಣ್ಣನನ್ನು ಇಂದು ಜತ್ತು ಅರ್ಥಮಾಡಿಕೊಳ್ಳುತ್ತಿದೆ. ದರ್ಶನ ಎಂದರೆ ತತ್ತ÷್ವ ಸಿದ್ಧಾಂತವಾಗಿದೆ. ಬಸವಣ್ಣನವರ ತತ್ತ÷್ವಸಿದ್ದಾಂತ ಇಂದು ಜಗತ್ತಿಗೆ ಅನಿವಾರ್ಯವಾಗಿದೆ. ಬಸವ ತತ್ತ÷್ವದಿಂದ ಮಾತ್ರ ಜಗತ್ತು ಶಾಂತಿ ನೆಮ್ಮದಿಯಿಂದ ಬದುಕ ಬಲದು ಎಂದರು. ಪ್ರಾಸ್ತಾವಿಕ ನುಡಿಗಳನ್ನು ಆಡಿದ ಡಾ. ಜಯಶ್ರೀ ದಂಡೆಯವರು ಬಸವ ತತ್ತ÷್ವವನ್ನು ಜತ್ತಿಗೆ ಸಾರುವ ಕೆಲಸ ಬಸವ ಸಮತಿ ಮಾಡುತ್ತಿದೆ ಎಂದರು. 

 ಮುಖ್ಯ ಅತಿಥಿಗಳಾಗಿ ಆಗಮಿಸಿ ವಚನ ಆಷಾಢ ಪ್ರವಚನ ಮಾಹಾನದಾರ್ಶನಿಕ ಬಸವಣ್ಣ ವಿಷಯದ ಕುರಿತು ಮಾಡನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ವಿರಕ್ತ ಮಠದ ಪೂಜ್ಯರಾದ ಶ್ರೀ ಶರಣಬಸವ ಸ್ವಾಮಿಗಳು ಮಾತನಾಡಿ ಬಸವಣ್ಣನವರ ತತ್ತ÷್ವಸಿದ್ದಾಂತ ಒಪ್ಪಿಕೊಂಡವರೆಲ್ಲ ಲಿಂಗವAತರಾಗಿರುತ್ತಾರೆ. ದೀನ ದಲಿತರನ್ನು ಎಲ್ಲಾಜಾತಿಗಳ ಕಿಳರಿಮೆಯನ್ನು ಬಸವಣ್ಣನವರು ನಿವಾರಿಸಿದರು. ಇಂದು ಭಾರತಿಯ ಜನಾಂಗವಷ್ಟೆ ಅಲ್ಲ ವಿಶ್ವದ ಎಲ್ಲಾ ಜನರು ಬಸವಣ್ಣನವರಿಗೆ ಚಿರಋಣಿಯಾಗಿರಬೇಕೆಂದು ಎಂದು ನುಡಿದರು.

 ಡಾ. ವಿಲಾಸವತಿ ಖೂಬಾ ಅವರು ಅಧ್ಯಕ್ಷತೆ ವಹಿಸಿದರು ಡಾ. ವೀರಣ್ಣ ದಂಡೆ, ಡಾ. ಕೆ. ಎಸ್ ವಾಲಿಯವರು ಸ್ವಾಗತಿಸಿದರು. ಕಲ್ಯಾಣ ಕುಮಾರ ಶಿಲವಂತ, ಶಣ್ಮಮುಖಯ್ಯ ಹೀರೆಮಠ, ರಮೇಶ, ಉಪಸ್ಥತರಿದ್ದರು ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು.