ಸರ್ಕಾರಿ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ

ಸರ್ಕಾರಿ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ
ಇಂದು ದಿನಾಂಕ: 17 /6/ 2025 ರಂದು ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಂತರಿಕ ಭರವಸೆ ಕೋಶ ಅಡಿಯಲ್ಲಿ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನಗಳು ಮತ್ತು ಪ್ರಾಜೆಕ್ಟ್ ಬರವಣಿಗೆ ಕುರಿತು ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ರಾಘವೇಂದ್ರ ಗುಡಗುಂಟಿ ನಿವೃತ್ತ ಪ್ರಾಂಶುಪಾಲರು,ಹಾಗೂ ವಿಶೇಷ ಅಧಿಕಾರಿಗಳು ಕಾಲೇಜು ಶಿಕ್ಷಣ ಇಲಾಖೆ ರವರು ಆಗಮಿಸಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಧ್ಯಯನ ಮಾಡಿ ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಅದೇ ರೀತಿಯಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸುರೇಶ ಜಂಗೆ ಗ್ರಂಥ ಪಾಲಕರು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯವರು ಆಗಮಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಬ್ಬ ಒಳ್ಳೆಯ ಸಂಶೋಧಕ ರಾಗಬೇಕೆಂದು ಮತ್ತು ಅತ್ಯದ್ಭುತವಾದ ಪ್ರಾಜೆಕ್ಟ್ ಬರವಣಿಗೆ ಮಾಡುವ ಕಲೆಯನ್ನು ಬೆಳಸಿಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಪಿಜಿ ವಿಭಾಗದ ಡೀನರಾದ ಡಾ.ಮಲ್ಲೇಶಪ್ಪ ಕುಂಬಾರ, ಯು.ಜಿ ಕಲಾ ವಿಭಾಗದ ಡೀನರಾದ ಡಾ.ವಿಜಯಕುಮಾರ ಸಾಲಿಮನಿ, ಯು.ಜಿ ವಾಣಿಜ್ಯ ವಿಭಾಗದ ಡೀನರಾದ ಡಾ.ರಾಜಕುಮಾರ ಸಲಗರ, ಯು.ಜಿ. ವಿಜ್ಞಾನ ವಿಭಾಗದ ಡೀನರಾದ ಡಾ.ದವಲಪ್ಪ. ಬಿ.ಹೆಚ್, ಡಾ.ಅರುಣ ಕುಮಾರ ಸಲಗರ ಉಪಸ್ಥಿತರಿದ್ದರು.
introduction to research methodology and Project report writing ಸಂಶೋಧನಾ ವ್ಯಕ್ತಿಯಾಗಿ ಡಾ. ವೀರಯ್ಯ ಮುತ್ತಿನಮಠ ಅವರು ಭಾಷಾ ವಿಜ್ಞಾನದ ಕುರಿತು ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು. ಮತ್ತು ಡಾ. ವಿ. ಎಮ್. ಜಾಲಿ ಅವರು ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಭೋಧ ನೆ ಮಾಡಿದರು. ಹಾಗೂ ಸಮಾಜ ವಿಜ್ಞಾನ ವಿಷಯದ ಕುರಿತು ಡಾ. ಎ. ಜೆ. ಖಾನ್ ರವರು ತುಂಬಾ ಅಚ್ಚುಕಟ್ಟಾಗಿ ಮಾತನಾಡಿದರು ಅದೇ ರೀತಿ ವಾಣಿಜ್ಯ ವಿಷಯದ ಕುರಿತು ಡಾ. ಪಾಂಡುರಂಗ. ವಿ ಅವರು ಅಷ್ಟೇ ಸೊಗಸಾಗಿ ವಿವರಿಸಿ ಮಾತನಾಡಿದರು..ಐಕ್ಯೂ ಏ ಸಿ ಸಂಯೋಜಕರಾದ ಡಾ. ರಾಜಶೇಖರ ಮಡಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಡಾ.ಮಹಾಂತೇಶ ಸ್ವಾಮಿ ಸ್ವಾಗತಿಸಿದರು, ಡಾ.ಮೇರಿ ಮ್ಯಾಥ್ಯೂಸ್ ಅಥಿತಿಗಳ ಪರಿಚಯ ನೀಡಿದರು ಕುಮಾರಿ ಸಿದ್ದಮ್ಮ ಸ್ವಾಗತ ಗೀತೆಯನ್ನು ಹಾಡಿದರು. ಡಾ. ಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಡಾ . ಬಲಭೀಮ ಸಾಂಗ್ಲಿ ಅವರು ವಂದಿಸಿದರು.