ಖೇಡ್ ಜಾತ್ರೆ- ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಬಡಿಸಿದ ಶಾಸಕರು

ಖೇಡ್ ಜಾತ್ರೆ- ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಬಡಿಸಿದ ಶಾಸಕರು

ಪೂಜ್ಯ ರೇವಪಯ್ಯಾ ಮಹಿಮೆ ಅಪಾರ: ಶಾಸಕ ಪ್ರಭು ಚವ್ಹಾಣ

ಕಮಲನಗರ ತಾಲ್ಲೂಕಿನ ಖೇಡ್ ಗ್ರಾಮದಲ್ಲಿ ಪೂಜ್ಯ ಶ್ರೀ ರೇವಪ್ಪಯ್ಯಾ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಜೂನ್ 17ರಂದು ಭಾಗವಹಿಸಿ, ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಬಡಿಸಿ ಗಮನ ಸೆಳೆದರು.

ಪೂಜ್ಯ ರೇವಪಯ್ಯಾ ಶಿವಶರಣರ ದರ್ಶನ ಪಡೆದ ಶಾಸಕರು, ರೈತರ ಕಲ್ಯಾಣ, ಕ್ಷೇತ್ರದ ಸಮೃದ್ಧಿಗಾಗಿ ಮತ್ತು ಮತ್ತು ನಾಡಿನಲ್ಲಿ ಸುಖ, ಶಾಂತಿ ನೆಲೆಸಬೇಕೆಂದು ಬೇಡಿಕೊಡರು. ನಂತರ ಪ್ರಸಾದ ಸ್ಥಳಕ್ಕೆ ಹೋಗಿ ಸಾಲು-ಸಾಲಾಗಿ ಕುಳಿತಿದ್ದ ಭಕ್ತರ ಬಳಿಗೆ ಹೋಗಿ ತಮ್ಮ ಕೈಯಿಂದಲೇ ಹೋಳಿಗೆ ತುಪ್ಪ ಬಡಿಸಿ ಗಮನ ಸೆಳೆದರು. ಬಳಿಕ ತಾವೂ ಭಕ್ತರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರು.

ಇದೇ ವೇಳೆ ತೆಡೋಳಾ-ಮೆಹಕರ್ ಮಠದ ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರ ಸ್ವಾಮಿಗಳ ಆಶೀರ್ವಾದ ಪಡೆದರು. ನಂತರ ಮಾತನಾಡಿ, ಖೇಡ್ ಗ್ರಾಮದಲ್ಲಿನ ಪವಾಡಪುರುಷ ಮಹಾಪುರುಷ ರೇವಪ್ಪಯ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಈ ಭಾಗದ ದೊಡ್ಡ ಜಾತ್ರೆಯಾಗಿದೆ. ಹೋಳಿಗೆ ತುಪ್ಪದ ಪ್ರಸಾದಕ್ಕಾಗಿ ಜಾತ್ರೆ ಹೆಸರುವಾಸಿಯಾಗಿದೆ ಎಂದರು.

ಪೂಜ್ಯ ರೇವಪಯ್ಯಾ ಸ್ವಾಮಿಯ ಮಹಿಮೆ ಅಪಾರವಾಗಿದ್ದು, ಇಲ್ಲಿ ಬೇಡಿಕೊಂಡ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕಯಿದೆ. ಕರ್ನಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ, ತೆಲಂಗಾಣಾ ರಾಜ್ಯಗಳಿಂದ ಸಹಸ್ರಾರು ಜನ ಆಗಮಿಸುತ್ತಾರೆ. ಭಕ್ತರ ಸಂಖ್ಯೆ ಪ್ರತಿವರ್ಷ ದ್ವಿಗುಣಗೊಳ್ಳುತ್ತಿರುವುದಕ್ಕೆ ಪೂಜ್ಯರ ಶಕ್ತಿಯೇ ಕಾರಣ ಎಂದು ಹೇಳಿದರು.

ರೇವಪಯ್ಯ ಸ್ವಾಮಿಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗುತ್ತಿದೆ. ನಾನು ಸ್ವಾಮಿಯ ಪರಮ ಭಕ್ತನಾಗಿದ್ದು, ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಪ್ರತಿವರ್ಷ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಮಂದಿರ ಅಭಿವೃದ್ಧಿಯಾಗಬೇಕು. ಶೆಡ್ ನಿರ್ಮಾಣ ಹಾಗೂ ಮತ್ತಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮಂದಿರ ಹಾಗೂ ಖೇಡ್ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಏನೇನು ಮಾಡಬೇಕು ಎನ್ನುವ ಬಗ್ಗೆ ಪಟ್ಟಿ ಮಾಡಿ ಕೊಡಿ ಹಂತ ಹಂತವಾಗಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ಮಲ್ಲಿಕಾರ್ಜುನ ದಾನಾ, ಪ್ರತೀಕ ಚವ್ಹಾಣ, ಸಚಿನ ರಾಠೋಡ, ಪ್ರವೀಣ ಕಾರಬಾರಿ, ನಾಗನಾಥ ಚಿಕ್ಲೆ, ಸಂದೀಪ ಪಾಟೀಲ, ಭರತ ಕದಂ, ನಾಗೇಶ ಪತ್ರೆ, ಮಂಜು ಸ್ವಾಮಿ, ಉದಯ ಸೋಲಾಪೂರೆ, ಗುಂಡಪ್ಪ ನಿಡೋದಾ, ಸುಭಾಷ ಲಕ್ಷ್ಮೀನಗರ, ಎನಿಲ ಹೊಳಸಮುದ್ರ, ಭೀಮರಾವ ಬಚ್ಚಣ್ಣ, ಶಿವಲಿಂಗ ಕಾರಬಾರಿ, ತಾನಾಜಿ ಬೆಳಕಟ್ಟೆ, ಅನೀಲ ಬಿರಾದಾರ, ಅನೀಲ ಸಂಗಣ್ಣ, ಮನ್ಮಥ ದಾನಾ, ಗೋರಖನಾಥ, ಕಿರಣ ದಾನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.