ಶಂಕರ ದಾಸಿಮಯ್ಯ

ದಿನಕ್ಕೊಂದು ವಚನ ಅನುಸಂಧಾನದ
ಕಾಯದ ಮದವಳಿದಲ್ಲದೆ ಮಾಯಾ ವಿಕಾರ ವಳಿಯದು. ಮಾಯಾ ವಿಕಾರವಳಿದಲ್ಲದೆ ಭವನಾಶವಾಗದು. ಭವ ನಾಶವಾದಲ್ಲದೆ
ಲಿಂಗ ಸಂಬಂಧವಳವಡದು.ಲಿಂಗ ಸಂಬಂಧ ವಳವಟ್ಟಲ್ಲದೆ ಸುಖವು ಸಾಧ್ಯವಾಗದು.
ಪರಮಸುಖ ಪರಿಣಾಮಕ್ಕೆ
ಮಹಾನುಭಾವಿಗಳ ಸಂಗವೇ ಬೇಕು.
ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ. ಇಂತಪ್ಪ ಮಹಾನುಭಾವದ ಮೂರ್ತಿ ಸಂಗನ ಬಸವಣ್ಣನ ಕೃಪೆಯಿಂದಲೆನಗೆ
ನಿಜವು ಕಾಣಬಂದಿತ್ತು. ಇದು ಕಾರಣ,
ನಿಜಗುರು ಶಂಕರದೇವರ ಶರಣ ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.
ಶಂಕರ ದಾಸಿಮಯ್ಯ ವಚನ ಅನುಸಂಧಾನ
ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಬಹುತೇಕ ಜನರು ಇಂದೂ ಸರಿಯಾಗಿ ಅರ್ಥ ಮಾಡಿ ಕೊಂಡಿಲ್ಲ! ಹಾಗಾಗಿ, ಅಪ್ಪ ಬಸವಾದಿ ಶರಣರ ಹೆಸರುಗಳನ್ನ ಹಾಗೂ ವಚನಗಳನ್ನು ಅಲ್ಲಲ್ಲಿ ಅಂದ್ರೆ; ಭಾಷಣ ಪ್ರವಚನ ಬರಹಗಳಲ್ಲಿ ಉಲ್ಲೇಖ ಮಾಡಿ ಒಣ ಹೆಮ್ಮೆಯಿಂದ ಶರಣರ ಸಂಕುಲ ತಾವೆಂದು ಬೀಗುತ್ತಾರೆ!! ಆದರೆ ಇವರ ಹುಂಬ ಭಾವದ ಈ ನಡೆ, ಶರಣರ ತತ್ವಗಳನ್ನು ಮತ್ತು ಸಿದ್ಧಾಂತವನ್ನು ತಿಳಿಯದೇ ಸುಮ್ಮನೇ ನುಡಿ ಆಶ್ರಯದಲ್ಲಿ ಬೀಗಿ ನಡೆಯುವ ಅಂಧಾನು ಕರಣೆಯೇ ಆಗಿದೆ!!! ಹಾಗಾದರೆ ನಿಜವಾದಂಥಾ ಲಿಂಗಾಯತ ತತ್ವದ ಪ್ರಕಾರ 'ಶರಣ'ರಾಗುವುದು ಹೇಗೆಂದು ಈ ಮೇಲಿನ ಶಂಕರ ದಾಸಿಮಯ್ಯ ಶರಣರ ವಚನ ತಿಳಿಸಿಕೊಡುತ್ತದೆ. ಅದನ್ನು ಈಗ ಅನುಸಂಧಾನ ಮಾಡಿ ವಿವರವಾಗಿ ತಿಳಿದುಕೊಳ್ಳ ಲು ಪ್ರಯತ್ನ ಮಾಡಿ ನೋಡೋಣ.
*ಕಾಯದ ಮದವಳಿದಲ್ಲದೆ ಮಾಯಾ ವಿಕಾರ ವಳಿಯದು.* *ಮಾಯಾ ವಿಕಾರವಳಿದಲ್ಲದೆ ಭವನಾಶವಾಗದು.* *ಭವನಾಶವಾದಲ್ಲದೆ*
*ಲಿಂಗ* *ಸಂಬಂಧವಳವಡದು.* *ಲಿಂಗ ಸಂಬಂಧ ವಳವಟ್ಟಲ್ಲದೆ ಸುಖವು #ಸಾಧ್ಯವಾಗದು.*
ಕಾಯವು; ಪಂಚ ಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶ ಈ ತತ್ವಗಳಿಂದ ನಿರ್ಮಿತ ವಾಗಿದ್ದು ಜೊತೆಗೆ ಸೂರ್ಯ ಚಂದ್ರ ಆತ್ಮ ಈ ಮೂರು ತತ್ವವನ್ನು ಸೇರಿದಂತೆ ಎಂಟು ತತ್ವಗಳ ಅಷ್ಟಾವರಣದಿಂದ ಆವರಿಸಿ ರೂಪಗೊಂಡಿದೆ. ಇದರಿಂದಾಗಿ ಇಲ್ಲಿ ಪ್ರತಿಯೊಂದು ತತ್ವವೂ ತನ್ನ ಗುಣ ಧರ್ಮದಲ್ಲಿಯೇ ಮಗ್ನವಾಗಿ ಮಜವಾಗಿ ರುತ್ತವೆ. ಇದನ್ನು ಶರಣರು 'ಮಾಯೆ' ಎನ್ನುವರು. ಕಾಯದ ಈ ಮಾಯಾ ಮದವ ತಿಳಿದುಕೊಂಡು ಅದನ್ನು ಅಳಿದಲ್ಲದೇ ಈ ಮಾಯೆಯ ವಿಕಾರವು ಅಳಿಯದು. ಈ ಮಾಯೆ ಅಳಿಯದೇ ಭವನಾಶ ವೂ ಆಗದು. ಯಾಕೆಂದರೆ ಈ ಪಂಚಭೂತಗಳು ಬಹಿರ್ಮುಖವಾಗಿದ್ದು, ಹೊರ ಪ್ರಪಂಚದಲ್ಲೇ ಆಸಕ್ತಿಯ ಹೊಂದಿರುವ ಕಾರಣದಿಂದಾಗಿ ಇವು ಭವ ಚಕ್ರವನ್ನು ಸುತ್ತು ಹೊಡೆಯುತ್ತಾ ಹುಟ್ಟಿ ಸಾಯುವ ಈ ಜೀವ ರಾಟಾಳ ಕಾರಣದಿಂದಾಗಿ ಭವ ನಾಶವಾಗದು. ಭವ ನಾಶವಾಗದೇ ಅಂಗ ಮತ್ತು ಲಿಂಗದ ಸಂಬಂಧವು ಸಾಧ್ಯವಾಗದು. ಈ ಲಿಂಗ ಸಂಬಂಧವನ್ನು ಅಂಗವು ಹೊಂದದೇ ಶಿವ ಸುಖವೂ ಸಾಧ್ಯವಿಲ್ಲೆಂದು ಇಲ್ಲಿ ವಚನಕಾರರು ಸ್ಪಷ್ಟವಾಗಿ ಹೇಳಿದ್ದಾರೆ.
*ಪರಮಸುಖ ಪರಿಣಾಮಕ್ಕೆ*
*ಮಹಾನುಭಾವಿಗಳ ಸಂಗವೇ ಬೇಕು.*
*ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.* *ಇಂತಪ್ಪ ಮಹಾನುಭಾವದ ಮೂರ್ತಿ ಸಂಗನ ಬಸವಣ್ಣನ* *ಕೃಪೆಯಿಂದಲೆನಗೆ*
*ನಿಜವು ಕಾಣಬಂದಿತ್ತು.* *ಇದು ಕಾರಣ,*
*ನಿಜಗುರು* *ಶಂಕರದೇವರ ಶರಣ ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.
ಇನ್ನು ಅಂತರಂಗದ ಅರಿವಿನ ಅನುಭಾವಿಕ ಶಿವ ಸುಖ ಹೊಂದಲು ಮಹಾನುಭಾವರಾದ ಶರಣರ ಸಂಗವು ಬೇಕು, ಅವರ ಸಂಗ ಇಲ್ಲದೇ ಚಂಚಲ ಮನವು ವಿಶ್ರಾಂತ ಸ್ಥಿತಿ ಹೊಂದಲಾರದೆಂದೂ ಇಲ್ಲಿ ಶಂಕರ ದಾಸಿಮಯ್ಯನವರು ಹೇಳುತ್ತಾರೆ. ತಮಗೆ ಅಪ್ಪ ಬಸವಾದಿ ಶರಣರ ಸಂಗ ಸುಖದ ಕಾರುಣ್ಯ ಸಿಕ್ಕಿದ್ದಕ್ಕೇ ಆ ಶಿವಸುಖ ತಮಗೆ ಸಿಕ್ಕಿತು ಅದಕ್ಕಾಗಿಯೇ ತಾವು ನಿಜಗುರು ಶಂಕರದೇವರ ಶರಣ ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತ ನಾದೆನಯ್ಯಾ ಎನ್ನುವ ಮೂಲಕ ಅಪ್ಪ ಬಸವಾದಿ ಶರಣರ ಸಂಗವು ಶಿವಾನುಭಾವಕೆ ಎಷ್ಟು ಮುಖ್ಯ ವಾದದ್ದು ಎನ್ನುವುದನ್ನು ಇಲ್ಲಿ ತಮ್ಮ ಈ ಮೇಲಿನ ವಚನದ ಮುಖಾಂತರ ಅತ್ಯಂತ ಸರಳ ರೀತಿಯ ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಕ್ಷಿಪ್ತ #ಪರಿಚಯ
(ಸಾಂದರ್ಭಿಕ ಚಿತ್ರ ಮಾಹಿತಿ ಅಂತರ್ಜಾಲ ಕೃಪೆ
ಶಂಕರ ದಾಸಿಮಯ್ಯ ೧೨ನೇ ಶತಮಾನದ ಶರಣ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲದವರು. ಮೂಲದಲ್ಲಿ ಬ್ರಾಹ್ಮಣರಾಗಿದ್ದ ಇವರಿಗೆ ಇಷ್ಟಲಿಂಗ ದೀಕ್ಷೆಗೂ ಮೊದಲಿಗೆ ಇವರ ಹೆಸರು ಗೋವಿಂದಭಟ್ಟ ಪತ್ನಿ ಉಮ್ಮವ್ವ ನವಿಲೆ ಯ ಜಡೆಯಶಂಕರಲಿಂಗ ಇವರ ಆರಾಧ್ಯ ದೈವ. ಈ ದೈವದ ಆಣತಿಯಂತೆ ಇವರು ನೂಲಿಗೆ ಬಣ್ಣ ಹಾಕುವ ಕಾಯಕ ಮಾಡುತ್ತ ಬಣ್ಣಗಾರರಾ ಗಿ ‘ಬಣಗಾರ ಸಮಾಜ’ದ ಮೂಲ ಗುರುವಾದವ ರೆಂದು ಹೇಳಲಾಗುತ್ತದೆ. ಮುಂದೆ ಕಾಲಾಂತರದ ಲ್ಲಿ ಈ ದಂಪತಿಗಳು ಕಲ್ಯಾಣದ ಆ ಸಮಯದಲ್ಲಿ ಅರಸನಾಗಿದ್ದ ಜಯಸಿಂಹನ ಆಹ್ವಾನದ ಮೇರೆಗೆ ಕಲ್ಯಾಣಕ್ಕೆ ಬಂದು,ಅಲ್ಲಿ ಅಪ್ಪಬಸವಾದಿ ಶರಣರ ಸಂಗದಲ್ಲಿ ಇವರ ಮನಸ್ಸು ಅರಳಿ ಹೂವಿನಂತಾ ಯ್ತೆಂದು ಹೇಳಲಾಗಿದೆ. ನಂತರದಲ್ಲಿ ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲೊಬ್ಬರು ವಚನಕಾರರಾಗಿ 'ನಿಜಗುರು ಶಂಕರದೇವ' ಅಂಕಿ ತದಲ್ಲಿ ವಚನ ರಚಿಸಿದ ಇವರ ೫ ವಚನ ಸಿಕ್ಕಿವೆ. ಅವುಗಳಲ್ಲಿ; ಬಸವಾದಿ ಶರಣರ ಸ್ತುತಿ, ಬಸವಣ್ಣ ರವತಾರದ ಕಾರಣ, ಕಾಯ ಮತ್ತು ಮಾಯೆಯ ಸಂಬಂಧ, ಕಪಟ ವೇಷದವರ ಟೀಕೆ ಇವೆಲ್ಲವೂ ಮೂಡಿ ಬಂದಿದ್ದು ಈ ವಚನಗಳು ಸರಳ ಮತ್ತು ಸ್ಪಷ್ಟತೆಯಿಂದಕೂಡಿವೆ ಈ ಶಂಕರ ದಾಸಿಮಯ್ಯ ಶರಣರ ಜೀವನದ ಕಥೆ; 'ಶಂಕರದಾಸಿಮಯ್ಯನ ರಗಳೆ', 'ಶಂಕರದಾಸಿಮಯ್ಯನ ಪುರಾಣ', 'ಬಸವ ಪುರಾಣ', ಮತ್ತು 'ಚೆನ್ನಬಸವ ಪುರಾಣ' ಹೀಗೆ ಈ ಮೊದಲಾದ ಕಾವ್ಯ ಪುರಾಣಗಳಲ್ಲಿ ನಿರೂಪಿತ ವಾಗಿದೆ. ಅಲ್ಲಿ ಇವರು ಶಿವನಿಂದ ಹಣೆಗಣ್ಣನ್ನು ಪಡೆದಿದ್ದು, ಕಲ್ಯಾಣದಲ್ಲಿ ವಿಷ್ಣುವಿಗ್ರಹ ದಹಿಸಿದ್ದು ಮುದನೂರಿನ ಜೇಡರ ದಾಸಿಮಯ್ಯ ಶರಣರ ಅಹಂಕಾರ ನಿರಸನಗೊಳಿಸಿದ್ದು ಹೀಗೆ ಇವರನ್ನು ಕುರಿತು ಬಂದಂಥ ಇತರೆ ಕೃತಿಗಳಲ್ಲೂ ಸಹಿತವೂ ಉಕ್ತವಾಗಿವೆ ಎನ್ನಲಾಗಿದೆ. 'ಬಣಗಾರ' ಸಮಾಜ ಪ್ರತಿವರ್ಷ ಶ್ರಾವಣದ ಮೊದಲ ಸೋಮವಾರ ಶಂಕರದಾಸಿಮಯ್ಯರ ಜಯಂತಿ ಆಚರಿಸುತ್ತದೆ. ಶ್ರಾವಣದ ೨ನೇ ಸೋಮವಾರ ಸುಕ್ಷೇತ್ರ ನವಲೆ ಯಲ್ಲಿ ‘ನವಿಲೆ ಶ್ರಾವಣ’ ಎಂದು ಮಹಾರುದ್ರಾಭಿ ಷೇಕ ಪೂಜೆ & ಸಮ್ಮೇಳನ ನಡೆಸುವರೆಂದು ತಿಳಿ ದು ಬರುತ್ತದೆ. ಹಾಗೆಯೇ ಇಲ್ಲಿ ಉದ್ಭವಿಸುವ ಆ ಒಂದು ಸಂಶಯಕ್ಕೆ ಈಕೆಳಗಿನ ವಿವರಣೆ ನೋಡಿ
(*#ಟಿಪ್ಪಣಿ;* ದಾಸಿಮಯ್ಯ ಈ ಹೆಸರಿನ ಐದು ಜನ ಶರಣರು ಕಂಡುಬರುತ್ತಿದ್ದು; ಅವರೆಂದ್ರೆ, ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ, ಶಂಕರ ದಾಸಿಮಯ್ಯ,ವೀರ ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಎಂದು ಇವರೆಲ್ಲರೂ ಕೂಡಾ *ಬೇರೆ ಬೇರೆ*.)
*ಅಳಗುಂಡಿ ಅಂದಾನಯ್ಯ*