ವಸತಿ ಶಾಲೆಗಳ ನಿರ್ದೇಶನಾಲಯ ರಚನೆ ಮಾಡಿ ಎಂದು ಸತ್ಯಾಗ್ರಹ

ವಸತಿ ಶಾಲೆಗಳ ನಿರ್ದೇಶನಾಲಯ ರಚನೆ ಮಾಡಿ ಎಂದು ಸತ್ಯಾಗ್ರಹ
ಕರ್ನಾಟಕ ರಾಜ್ಯದ ವಸತಿ ಶಾಲೆಗಳ ನೌಕರರ ಸಂಘ (ರಿ), ಬೆಂಗಳೂರು ಇವರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ನೌಕರರ ವೃತ್ತಿ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡಿದ್ದು ಮತ್ತು ಸಂವಿಧಾನಾತ್ಮಕ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ವಿರೋಧ ಪಕ್ಷದ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ ಬೆಂಬಲ ವ್ಯಕ್ತಪಡಿಸಿದರು ಮತ್ತು ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಸಲುವಾಗಿ ರಾಜ್ಯ ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗುವುದು ಎಂದು ತಿಳಿಸಿದ್ದಾರೆ ಮತ್ತು
ಕ್ರೈಸ್ ವಸತಿ ಶಾಲೆಗಳ ನೌಕರರ ಪ್ರಮುಖ ಬೇಡಿಕೆಗಳು ಒಳಗೊಂಡಿರುತ್ತವೆ
ವಸತಿ ಶಿಕ್ಷಣ ನಿರ್ದೇಶನಾಲಯವನ್ನು ರಚಿಸುವುದು ಅಥವಾ ಎಸ್.ಸಿ., ಎಸ್.ಟಿ., ಬಿ.ಸಿ. ವಸತಿ ಶಾಲೆಗಳನ್ನು ಸಿಬ್ಬಂದಿಯೊಂದಿಗೆ ಸಂಬಂಧಿತ ಇಲಾಖೆಗಳ ವಶಕ್ಕೆ ನೀಡುವುದು.
ಖಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನ್ನು ಅನುಷ್ಠಾನಗೊಳಿಸುವುದು.
ಮರಣ ಮತ್ತು ನಿವೃತ್ತಿ ಉಪದಾನ (DCRG) ಸೌಲಭ್ಯವನ್ನು ಒದಗಿಸುವುದು.
ಮನೆ ಬಾಡಿಗೆ ಭತ್ಯೆ (HRA) ಕಡಿತದಿಂದ ವಿನಾಯಿತಿ ನೀಡುವುದು.
ಖಾಯಂ ನೌಕರರಿಗೆ 10% ವಿಶೇಷ ಭತ್ಯೆಯನ್ನು ಮಂಜೂರು
ಮಾಡುವುದು.
ಈ ಸಂದರ್ಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಶಶಿಲ್ ನಮೋಶಿ, ಶ್ರೀ ಹಣಮಂತ ನಿರಾಣಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪುರ, ಸಂಘದ ಗೌರವಾಧ್ಯಕ್ಷರಾದ ಶ್ರೀ ಮಹೇಶ್ ಚಂದ್ರ, ಅಧ್ಯಕ್ಷರಾದ ಶ್ರೀ ರವಿಚಂದ್ರ ಪಿ.ಎನ್ ಹಾಗೂ ಕಲ್ಬುರ್ಗಿಯ ವಿಭಾಗಿಯ ಉಪಾಧ್ಯಕ್ಷರು ಅನಿಲ್ ಕಾಂಬ್ಳೆ ಬೀದರ್ ಜಿಲ್ಲಾ ವಸತಿ ಸಂಘದ ಜಿಲ್ಲಾಧ್ಯಕ್ಷರು ಶ್ರೀ ದೇವಿದಾಸ ಜೋಶಿ ಮತ್ತು
ರತನ ರಾಜ, ನಾರಾಯಣ ಹೊನ್ನಾಳೆ,ಬಕ್ಕಪ್ಪ, ಪವನ ಕನ್ನ, ಶ್ರೀಮಂತ ಸಪಾಟೆ, ಶಿವಕುಮಾರ ಜಾಬಾ,ಸದಸ್ಯರು ಸೇರಿದಂತೆ ಹಲವು ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.
ವರದಿ: ಮಛಂದ್ರನಾಥ ಕಾಂಬಳೆ ಬೀದರ್