ಪ್ರಚಲಿತ ವಿದ್ಯಮಾನಗಳಿಗೆ ಕವಿಗಳು ಸ್ಪಂದಿಸಲಿ: ಡಾ.ಜಯದೇವಿ ಗಾಯಕವಾಡ ಕರೆ

ಪ್ರಚಲಿತ ವಿದ್ಯಮಾನಗಳಿಗೆ ಕವಿಗಳು ಸ್ಪಂದಿಸಲಿ: ಡಾ.ಜಯದೇವಿ ಗಾಯಕವಾಡ ಕರೆ
ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸ ಕಾವ್ಯ ಪ್ರಕಾರಗಳು ಇಲ್ಲಿ ಹುಟ್ಟಿದ್ದು ಗಜಲ್,ಶಾಯಿರಿ,ಹಾಯಿಕು, ರುಬಾಯಿ,ತಾಂಕಾ,ತನಗ,ಮೊದಲಾದ ಕಾವ್ಯಗಳು ಜನಪ್ರಿ ಯವಾಗಿವೆ ಇಂತಹ ಕಾವ್ಯ ರಚಿಸುವಾಗ ಕವಿಗಳು ಪ್ರಚಲಿತ ವಿದ್ಯಮಾನಗಳ ಕುರಿತು ಸ್ಪಂದಿಸುವ ಸಮಾಜ ಮುಖಿಗಳಾಗಲಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ- ಕವಯತ್ರಿ ಡಾ.ಜಯದೇ ವಿ ಗಾಯಕವಾಡ ಕರೆ ನೀಡಿದರು.
ತಾಲೂಕು ಪಂಚಾಯತ ಸಭಾಂಗಣದಲ್ಲಿ ಕುಕನೂರಿನ ತಾಯಿ ಪ್ರಕಾಶನ ಮತ್ತು ತಿರುಳ್ಗನ್ನೆ ಸಸಾಹಿತಿಗಳ ಸಹಕಾರ ಸಂಘ ಏರ್ಪಡಿಸಿದ ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿಯ ವರ ಎರಡು ಕೃತಿ ಬಿಡುಗಡೆ ಮತ್ತು ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬುದ್ಧ,ಬಸವ,ಅಂಬೇಡ್ಕ ರ್ ಚಿಂತನೆಯನ್ನು ಓದಿ,ಕನ್ನಡ ಕಾವ್ಯ ಪರಂಪರೆಯನ್ನು ಅಭ್ಯಾಸ ಮಾಡಿ ಕಾವ್ಯ ರಚಿಸಲು ಹೇಳಿದರು.ಬ್ಯಾಳಿಯವ ರು ನಾನು ಬರೆದ ಹಾಯಿಕು ಮತ್ತು ರುಬಾಯಿ ಬರೆಯಲು ಪ್ರೇರಕ ಗುರುಗಳು ಎಂದರು. ಕವಿಗೋಷ್ಠಿಯಲ್ಲಿ ಸಾಕ್ಷಿ ಗವಿಸಿದ್ಧಪ್ಪ, ಅರುಣಾ ನರೇಂದ್ರ, ಡಾ.ಶೀಲಾದೇವಿ ಎಸ್. ಬಿರಾದಾರ,ಎಸ್.ಎಂ.ಕಂಬಾಳಿಮಠ,ಅನ್ನಪೂರ್ಣ ಮನ್ನಾ ಪೂರ,ಗಂಗಾಧರ ಆವಟೆರ,ವಿರೇಶ ಕುರಿ,ಪುಷ್ಪಲತಾ ಏಳು ಬಾವಿ,ಮಹೇಶ ಮನ್ನಾಪೂರ,ಶಿವಪ್ರಸಾದ ಹಾದಿಮನಿ, ಮೊದಲಾದವರು ಕಾವ್ಯ ವಚಿಸಿದರು.
ನಿವೃತ್ತ ಡಿಡಿಪಿಐ ಬಿ.ಜಿ.ಕರಿಗಾರ,ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಂದಾರ,,ಕೆ.ಬಿ.ಬ್ಯಾಳಿ ಉಪಸ್ಥಿತಿ ಇದ್ದರು.ಗಂಗಾಧರ ಆವಟೆ ನಿರೂಪಿಸಿದರು ಕಳಕಪ್ಪ ಕುಂಬಾರ ವಂದಿಸಿದರು.
ವರದಿ ಡಾ .ಅವಿನಾಶ S ದೇವನೂರ ಆಳಂದ