ನಾಡೋಜ ಡಾ.ಶಾಂತರಸ ಜನ್ಮ ಶತಮಾನೋತ್ಸವ ಅಂಗವಾಗಿ ವಿಚಾರ ಸಂಕಿರಣ: ಬಿ.ಎಚ್.ನಿರಗುಡಿ

ನಾಡೋಜ ಡಾ.ಶಾಂತರಸ ಜನ್ಮ ಶತಮಾನೋತ್ಸವ ಅಂಗವಾಗಿ ವಿಚಾರ ಸಂಕಿರಣ: ಬಿ.ಎಚ್.ನಿರಗುಡಿ

ನಾಡೋಜ ಡಾ.ಶಾಂತರಸ ಜನ್ಮ ಶತಮಾನೋತ್ಸವ ಅಂಗವಾಗಿ ವಿಚಾರ ಸಂಕಿರಣ: ಬಿ.ಎಚ್.ನಿರಗುಡಿ

ಕಲಬುರಗಿ: ನಾಡೋಜ ಡಾ. ಶಾಂತರಸ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಡಿಯಲ್ಲಿ ಏಪ್ರಿಲ್ 10ರಂದು ಬೆಳಗ್ಗೆ 10.30ಕ್ಕೆ ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ನಾಡೋಜ ಡಾ. ಶಾಂತರಸ ಅವರ ಬದುಕು ಬರಹ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರೂ ಆಗಿರುವ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್.ನಿರಗುಡಿ ಹಾಗೂ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ದರಾಮ ಹೊನ್ಕಲ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ನೆರವೇರಿಸಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆಯಲ್ಲಿ ಮುಖ್ಯ ಅತಿಥಿಗಳಾಗಿ ದಿಶಾ ಪಿ.ಯು. ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರಿ ಆಗಮಿಸಲಿದ್ದು, ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಸಾಹಿತಿ ಸಿದ್ದರಾಮ ಹೊನ್ಕಲ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಡಾ. ಚಂದ್ರಕಲಾ ಬಿದರಿ, ಬಿ.ಎಚ್. ನಿರಗುಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ಕರಿಯಪ್ಪ ಅವರು ಉಪಸ್ಥಿತರಿರಲಿದ್ದಾರೆ ಎಂದರು.

ಅದೇ ದಿನದಂದು ಮಧ್ಯಾಹ್ನ 12.30ಗಂಟೆಗೆ ಶಾಂತರಸರ ಬದುಕು-ಬರಹ ಕುರಿತು ಉಪನ್ಯಾಸ ಮಂಡನೆ ಆಗಲಿದ್ದು, ಅದರಲ್ಲಿ ಶಾಂತರಸರ ಬದುಕು ಬರಹ ಕುರಿತು ಕಥೆಗಾರರಾದ ಮಹಾಂತೇಶ ನವಲಕಲ್, ಶಾಂತರಸರ ಕಥೆ ಕಾದಂಬರಿ ಕುರಿತಾಗಿ ಡಾ. ಶೈಲಜಾ ಬಾಗೇವಾಡಿ, ಕಾವ್ಯ ಮತ್ತು ಗಜಲ್ ಕ್ಷೇತ್ರಕ್ಕೆ ಶಾಂತರಸರ ಕೊಡುಗೆ ಕುರಿತು ಡಾ. ಎಂ.ಬಿ. ಕಟ್ಟಿ, ಶಾಂತರಸರ ನಾಟಕಗಳು ಮತ್ತು ಅನುಭಾವ ಸಾಹಿತ್ಯ ಕುರಿತಾಗಿ ಮಹಿಪಾಲರೆಡ್ಡಿ ಮುನ್ನೂರು ಹಾಗೂ ಡಾ. ಶ್ರೀಶೈಲ ನಾಗರಾಳ ಅವರು ಸಮನ್ವಯ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಬಿ.ಎಚ್. ನಿರಗುಡಿ ವಿವರಿಸಿದರು.

ಮಧ್ಯಾಹ್ನ 2 ಗಂಟೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಉಪನ್ಯಾಸಕಿ ಡಾ. ಸುನಂದಾ ಸಾಲವಾಡಗಿ ಮತ್ತು ಅವರ ತಂಡದಿಂದ ಗಜಲ್ ಗಾಯನ ಜರುಗುವುದು, 2.30ಕ್ಕೆ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕವಾಡ ಅವರ ಅಧ್ಯಕ್ಷತೆಯಲ್ಲಿ ಗಜಲ್ ಕವಿಗೋಷ್ಠಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಭುಲಿಂಗ ನೀಲೂರೆ, ಡಾ. ಚಿ.ಸಿ. ನಿಂಗಣ್ಣ ಅವರು ಆಗಮಿಸಲಿದ್ದಾರೆ. ಡಾ. ಪ್ರೇಮಾ ಹೂಗಾರ, ಗೌರಿ ಪಾಟೀಲ, ಸಿದ್ಧರಾಮ ಸರಸಂಬಿ, ಡಿ.ಎಂ. ನದಾಫ್, ಡಾ. ಶೀಲಾದೇವಿ ಬಿರಾದಾರ, ಉಷಾ ಗೊಣ್ಣೂರು, ಶಿವಲೀಲಾ ಡೆಂಗಿ, ನಬಿಲಾಲ ಮಕಾನದಾರ, ಡಾ. ಮಲ್ಲಿನಾಥ ತಳವಾರ, ಎಚ್. ರಾಠೋಡ, ಪಾರ್ವತಿ ಡಿ. ಬೂದೂರು, 

ವೆಂಕಟೇಶ್ ಪಾಟೀಲ, ಜ್ಯೋತಿ ದೇವಣಗಾಂವ್, ಸುವರ್ಣಾ ರಾಠೋಡ, ಶರಣಗೌಡ ಜೈನಾಪುರ, ಕಮಲಾಕರ ಅರಳಿಗಿಡ, ಡಾ. ಭಾಗ್ಯವತಿ ಅಮರೇಶ್ವರ,

ಗಂಗಾಧರ ಬಡಿಗೇರ, ನೀಲಮ್ಮ ಬಿ. ಮಲ್ಲೆ, 

ಕನಕಪ್ಪ ವಾಗನಗೇರಾ, ಮಹಾಂತೇಶ ಗೋನಾಲ, ಬಸಮ್ಮ ಸಜ್ಜನ, ಉಮೇಶ್ ಬಾಬು, ವೀರಣ್ಣ ಕಲಿಕೇರಿ ಅವರು ಗಜಲ್ ವಾಚನ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂಜೆ 4.30 ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ವಿಶ್ರಾಂತ ಕುಲಪತಿಗಳು ಡಾ. ಡಿ.ಬಿ. ನಾಯಕ ಅವರು ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಮೇಶ ಲಂಡನಕರ್, ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕಲ್ಯಾಣರಾವ ಶೀಲವಂತ, ಬಸವಪ್ರಭು ಹೆಂಬೆರಾಳ ಅವರು ಆಗಮಿಸಲಿದ್ದಾರೆ. ಬಿ.ಎಚ್. ನಿರಗುಡಿ ಅಧ್ಯಕ್ಷತೆ ವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ದರಾಮ ಹೊನ್ಕಲ್ ಇದ್ದರು.