ರಾಜ್ಯ ಮಟ್ಟದ ಗಾಣಿಗ ಸಮಾಜದ ವಧು- ವರರ ಬೃಹತ್ ಸಮಾವೇಶ

ರಾಜ್ಯ ಮಟ್ಟದ ಗಾಣಿಗ ಸಮಾಜದ ವಧು- ವರರ ಬೃಹತ್ ಸಮಾವೇಶ
ಕಲಬುಗಿ: ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕೆಇಬಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದ ಸಹಯೋಗದಡಿ ಡಾ. ಚೌಧರಿ ಮತ್ತು ಡಾ. ಕಾಬಾ ಕಲ್ಯಾಣ ವೇದಿಕೆಯಲ್ಲಿ ತೃತೀಯ ಅಂತರ್ ರಾಜ್ಯ ಮಟ್ಟದ ಗಾಣಿಗ ಸಮಾಜದ ವಧು- ವರರ ಬೃಹತ್ ಸಮಾವೇಶವನ್ನು ವಿಜಯಪುರದ ಶ್ರೀ ವನಶ್ರೀ ಮಠದ ಡಾ. ಜಯಬಸವ ಕುಮಾರ ಸ್ವಾಮೀಜಿ ಅವರು ಉದ್ಘಾಟಿಸಿದರು.
ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್, ಸಮಾಜದ ಕಲ್ಯಾಣ ವೇದಿ ಕೆಯ ರಾಜ್ಯ ಸಂಚಾಲಕ ಡಾ. ಕೇಶವ ಎಸ್. ಕಾಬಾ, ಸಿಂದಗಿ ಮಾಜಿ ಶಾಸಕ ರಮೇಶ್ ಭೂಸನೂರು, ಹಾವೇರಿ ಮಾಜಿ ಶಾಸಕ ಶಿವರಾಜ್ ಎಸ್. ಸಜ್ಜನರ್, ಜಮಖಂಡಿ ಮಾಜಿ ಶಾಸಕ ಆನಂದ್ ಎಸ್. ನ್ಯಾಮಗೌಡ, ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಸಿಂಡಿ-ಕೇಟ್ ಸದಸ್ಯ ಶರಣಬಸಪ್ಪ ಅರಕೇರಿ, ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಪ್ರಶಾಂತ್ ಎಸ್. ಮಾನಕರ್, ಸಾಯಿನಾಥ್ ದಾಲ್ ಮತ್ತು ಶಿವಲಿಂಗೇಶ್ವರ ದಾಲ ಇಂಡಸ್ಟ್ರೀಜ್ನ ಶಿವಲಿಂಗಪ್ಪ ಬಿ. ಕಲಶೆಟ್ಟಿ, ಮುದ್ದೇಬಿಹಾಳದ ಕಲ್ಯಾಣ ವೇದಿಕೆ ರಾಜ್ಯ ಸಂಚಾಲಕ ಉಮಾಪತಿ ಚೌಧರಿ, ಹೊಸಪೇಟೆಯ ಕಲ್ಯಾಣ ವೇದಿಕೆ ರಾಜ್ಯ ಸದಸ್ಯ ಜ್ಯೋತಿ ವೀರಭದ್ರಪ್ಪ, ಶಿವಾನಂದ ದ್ಯಾಮಗೋಂಡ, ಬಸಲಿಂಗಪ್ಪಗೌಡ ವಸ್ತಾರಿ, ಸಿದ್ದಣ್ಣ ಯಂಕಚಿ, ಮನೋಜ ಸಜ್ಜನ, ಮನೋಹರ ಪೋದ್ದಾರ, ಸುರೇಶ ಪಾಟೀಲ, ಗುರುರಾಜ ಕಲಶಟ್ಟಿ, ಬಾಬುಗೌಡ ಪಾಟೀಲ, ರುದ್ರಗೌಡ ಪಾಟೀಲ, ರಾಜಶೇಖರ ಯಂಕಚಿ, ದೇವಿಂದ್ರ ಸಜ್ಜನ್, ನಿಂಗಣಗೌಡ ಪಾಟೀಲ, ಅನೀಲ ಪಾಟೀಲ, ಬಸವರಾಜ ಕಲಶಟ್ಟಿ, ಸೇರಿದಂತೆ ಸಮಾಜದ ಮುಖಂಡರು ಇದ್ದರು.