ಪ್ರಕಾಶಕರ ಪ್ರಥಮ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಪ್ರಕಾಶಕರ ಪ್ರಥಮ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಕಲಬುರಗಿ: ಕೊಪ್ಪಳ ಜಿಲ್ಲಾ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಾಹಿತಿ ವೀರಣ್ಣ ನಿಂಗೋಜಿ ಅವರು ಆಮಂತ್ರಣ ಬಿಡುಗಡೆ ಮಾಡಿ ಮಾತನಾಡಿ ಸಪ್ನಾ ಮಾದರಿಯ ಸಿದ್ಧಲಿಂಗೇಶ್ವರ ಇಂದು ಬಹು ಪ್ರಸಿದ್ದಿ ಹೊಂದಿದೆ. ಸಾವಿರಾರು ಲೇಖಕರು ಇವರಿಂದ ಹೊರಹೊಮ್ಮಿದ್ದಾರೆ ಇವರ ಪ್ರಕಾಶನದ ಕಾರ್ಯದಲ್ಲಿ ತ್ರಿವಿಕ್ರಮನಂತೆ ಕೆಲಸಕ್ಕೆ ತಕ್ಕಂತೆ ಪ್ರಕಾಶಕರ ಸಮ್ಮೇಳನ ಅಧ್ಯಕ್ಷರಾಗಿದ್ದು ಎಲ್ಲರೂ ಗೌವಿಸಿದಂತೆ ಈ ಆಮಂತ್ರಣ ನೋಡಿದರೆ ಎಲ್ಲ ರನ್ನು ಒಳಗೊಂಡಿದ್ದಾರೆ ಇದು ಮುಖ್ಯವೆಂದರು.
ಸಿದ್ಧಲಿಂಗೇಶ್ವರ ಬುಕ್ ಮಹಲ್ ದಲ್ಲಿ ಏರ್ಪಡಿಸಿದ
ಹಿರಿಯ ಪುಸ್ತಕೋದ್ಯಮಿ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಸವರಾಜ ಜಿ.ಕೊನೇಕ ಅವರಿಗೆ ಅಧಿಕೃತ ಆಹ್ವಾನ
ಪತ್ರ ನೀಡಿ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಇವರ ಪರಂಪರೆಯನ್ನು ಇಬ್ಬರು ಮಕ್ಕಳಾದ ಸಿದ್ಧಲಿಂಗ ಮತ್ತು ಶರಣು ಆ ಪರಂಪರೆಯನ್ನು ಮುಂದುವರಿಸಿದ್ದಾರೆಂದರು.
ಪೀಠಾಧಿಪತಿ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ ನಮ್ಮ ಮಠದಲ್ಲಿ ಅನೇಕ ಸಮ್ಮೇಳನ ಪ್ರಥಮ ಮಾಡಿದ್ದೇವೆ.ಹಿಂದೆ ಸಮ್ಮೇಳನಾಧ್ಯಕ್ಷರಾದವರು ಪ್ರಥಮದ ಬಗ್ಗೆ ಮಾತನಾಡುವರು ಮುಂದೆ ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ.ಪ್ರಕಾಶಕರ ಸಮ್ಮೇಳನ ನಾವು ಮಾಡುತ್ತಿರುವುದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆ,ಎಷ್ಟೋ ಕೃತಿ ಅಧ್ಯಯನ ಮಾಡಿದ್ದಾರೆ, ಅವರ ಕೃತಿಗಳನ್ನು ಪ್ರಕಾಶಕರೇ ಮುದ್ರಿಸಿದ್ದಾರೆ.ಲೇಖಕ - ಪ್ರಕಾಶಕರಾದವರು ಒಂದೇ ನಾಣ್ಯದ ಮುಖ.ಹೀಗಾಗಿ ನಮ್ಮ ಮಠದಿಂದ ಪ್ರಕಾಶಕರನ್ನು ಗೌರವಿಸುವ ಸಲುವಾಗಿ ಡಾ.ಬಸವರಾಜ ಕೊನೇಕ ಶರಣರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದೇವೆಂದರು.
ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ನಿರಂತರವಾದ ಪುರಸ್ಕೃತರು ವ್ಯಾಪಾರ,ಈ ಭಾಗದ ವಿದ್ಯಾರ್ಥಿಗಳು,ಉಪನ್ಯಾಸಕರಿಗೆ,ಪಠ್ಯವನ್ನು ಒದಗಿಸಿ ಉಪಕರಿಸಿದವರು,ಮುಂದೆ ಈ ಪ್ರದೇಶಕ್ಕೆ ಒತ್ತು ನೀಡಿ ಯುವ,ಹಿರಿಯ,ಸಮಕಾಲೀನ ಲೇಖಕ, ಲೇಖಕಿಯರಿಗೆ ಜಾತ್ಯಾತೀತವಾಗಿ ಎಲ್ಲಾ ಪ್ರತಿಭಾನ್ವಿತರ ಗುರುತಿಸಿಇಂದು ಮೂರು ಸಾವಿರದ ಏಳನೂರು ವಿವಿಧ ಪ್ರಕಾರದ ಪುಸ್ತಕ ಪ್ರಕಟಿಸಿದ್ಧು ಸಾಮಾನ್ಯ ಸಂಗತಿಯಲ್ಲ ಅವರೊಬ್ಬ ಪುಸ್ತಕ ಸಂಸ್ಕೃತಿಯ ಭೀಷ್ಮರಾಗಿದ್ದಾರೆಂದು ಹಿರಿಯ ಸಾಹಿತಿ ಮತ್ತು ಸಮ್ಮೇಳನ ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು
ಸಾಹಿತಿ ಪತ್ರಕರ್ತ ಮಾಣಿಕ ಭುರೆ ಬಸವರಾಜ ಕೊನೇಕ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಅವರ ಸೇವೆ ಈ ಭಾಗ ಮರೆಯುವಂತಿಲ್ಲ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಮಾತನಾಡಿ ಮೊದಲು ಕೊನೇಕ ಅವರು ಮಾನವೀಯತೆ ಮನುಷ್ಯ. ಅವರ ಪುಸ್ತಕ ಸಂಸ್ಕೃತಿ ಪಯಣ ಇಂದಿನದಲ್ಲ.ಅವರು ಪಟ್ಟ ಪರಿಶ್ರಮ,ಪಾಡು ಹಾಡಾಗಿ ಸಿದ್ಧಲಿಂಗೇಶ್ವರ ಮತ್ತು ಶರಣಬಸವೇಶ್ವರರ ಆರಾಧಕರಾಗಿ,ಪುಸ್ತಕ ಲೋಕದ ಆರಾಧಕರಾದವರು.ಅವರು ಬೆಳೆದಂತೆ ದೊಡ್ಡವರಾದಂತೆ ಬಾಗಿದವರು.ಅವರಿಗೆ ಇನ್ನೂ ಸರರ್ಕಾರದ ಉನ್ನತ ಪ್ರಶಸ್ತಿ ಲಭಿಸಲಿ ಎಂದರು.
ಅಧಿಕೃತ ಆಹ್ವಾನ ಸ್ವೀಕರಿಸಿದ ಡಾ.ಬಸವರಾಜ ಕೊನೇಕ ಅವರು ನನಗೆ ನಿಜಕ್ಕೂ ಸಂತಸ ತಂದಿದೆ.ನನ್ನ ಸೇವೆ ಗುರುತಿಸಿದ ಉರಿಲಿಂಗಪೆದ್ದಿ ಮಠಕ್ಕೆ ನಾನು ಚಿರ ಋಣಿ.
ಸಣ್ಣ ಮಠವಾದರು ದೊಡ್ಡ ಕೆಲಸ ಮಾಡಿದೆ.ಇದಕ್ಕೆ ಸಿದ್ಧಲಿಂಗೇಶ್ವರ ಮತ್ತು ಶರಣಬಸವರ ಆಶೀರ್ವಾದ ಎಂದು ಭಾವಿಸಿದ್ದೇನೆ.ಇದು ನನಗೆ ಮಾತ್ರವಲ್ಲ ಕರ್ನಾಟಕ ದ ಸಮಸ್ತ ಪ್ರಕಾಶಕರಿಗೆ ಸಂದ ಗೌರವ ಎಂದು ಭಾವಿಸಿದ್ದೇನೆಂದರು.
ಸಿದ್ಧಲಿಂಗ ಕೊನೇಕ,ಜಯದ್ರತ, ಸರೋಜಾ,ಸಾಕ್ಷಿ ಜಿ. ಇತರರು ಉಪಸ್ಥಿತಿ ಇದ್ದರು.ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು,ಡಾ.ಸಿದ್ದಪ್ಪ ಹೊಸಮನಿ ನಿರೂಪಿಸಿದರು ಡಾಕಪ್ಪ ಎಂ.ಡಿ ವಂದಿಸಿದರು.
ವರದಿ ಡಾ. ಅವಿನಾಶ.S. ದೇವನೂರ
