ಇಂದು ಬಾಬಾಸಾಹೇಬ್ ರ ಪುಸ್ತಕ ಬಿಡುಗಡೆ

ಇಂದು ಬಾಬಾಸಾಹೇಬ್ ರ ಪುಸ್ತಕ ಬಿಡುಗಡೆ

ಇಂದು ಬಾಬಾಸಾಹೇಬ್ ರ ಪುಸ್ತಕ ಬಿಡುಗಡೆ 

ಕಲ್ಬುರ್ಗಿ ಸಂಸ್ಕೃತಿಕ ಪ್ರತಿಷ್ಠಾನದಿಂದ ನವೆಂಬರ್ 8 ರಂದು ಸಂಜೆ 5:30ಕ್ಕೆ ನಗರದ ಕಲಾಮಂಡಳದಲ್ಲಿ ಶಿಕ್ಷಕಿ, ಯುವ ಸಾಹಿತಿ ಮಮತಾ ಜಾನೆ ಅವರ ಬಾಬಾ ಸಾಹೇಬರ ನುಡಿಮುತ್ತುಗಳು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಚ್ ಟಿ ಪೋತೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.ಪತ್ರಾಗಾರ ಇಲಾಖೆಯ ಉಪ ನಿರ್ದೇಶಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ಪುಸ್ತಕ ಕುರಿತು ಮಾತನಾಡಲಿದ್ದಾರೆ, ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು. ಡಿಡಿಪಿಐ ಸೂರ್ಯಕಾಂತ್ ಮದಾನೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ .ಲೇಖಕಿ ಮಮತಾ ಜಾನೆ ಹಾಗೂ ಪ್ರತಿಷ್ಠಾನ ಅಧ್ಯಕ್ಷ ಬಿ ಎಚ್ ನಿರಗುಡಿ ಉಪಸ್ಥಿತರಿರುವರು. ಕಾರ್ಯಕ್ರಮಕಿಂತ ಮುಂಚೆ ಜನಪದ ಕಲಾವಿದ ಸೂರ್ಯಕಾಂತ್ ಪೂಜಾರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ ತಿಳಿಸಲಾಗಿದೆ