ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ: ಶಾಸಕ ಪ್ರಭು ಚವ್ಹಾಣ

ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ: ಶಾಸಕ ಪ್ರಭು ಚವ್ಹಾಣ

4.50 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ: ಶಾಸಕ ಪ್ರಭು ಚವ್ಹಾಣ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೆ.8ರಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮತ್ತು ಭೂಮಿ ಪೂಜೆ ನೆರವೇರಿಸಿದರು.

ಕಮಲನಗರದಲ್ಲಿ 2 ಕೋಟಿ ವೆಚ್ಚದ ಅಗ್ನಿಶಾಮಕ ಕಛೇರಿ, ಮದನೂರ ಹಾಗೂ ಚಾಂದೋರಿಯಲ್ಲಿ 50 ಲಕ್ಷ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸೋರಳ್ಳಿ ತಾಂಡಾದಲ್ಲಿ 55 ಲಕ್ಷ, ಶಂಕರ ತಾಂಡಾದಲ್ಲಿ 55.60 ಲಕ್ಷ, ಜೀರ್ಗಾ(ಕೆ)ನಲ್ಲಿ 13.90 ಲಕ್ಷ ಮೊತ್ತದ ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣ, ಮಹಾದೇವ ಪಾಟಿ ತಾಂಡಾದಲ್ಲಿ 6.50 ಲಕ್ಷ, ರಾಜೇಂದ್ರ ನಾಯಕ್ ತಾಂಡಾದಲ್ಲಿ 6 ಲಕ್ಷ ಮೊತ್ತದ ಸಿಸಿ ರಸ್ತೆಗಳು, ಸಂಗಮ್ ನಲ್ಲಿ 14.50 ಲಕ್ಷ ವೆಚ್ಚದ ಶಾಲಾ ದುರಸ್ತಿ ಕಾಮಗಾರಿ ಹಾಗೂ ಮುರ್ಕಿ ವಾಡಿಯಲ್ಲಿ 5.90 ಲಕ್ಷದ ಸಿಸಿ ಚರಂಡಿ ನಿರ್ಮಾಣ ಸೇರಿದಂತೆ ಸುಮಾರು 4.50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿ, ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಾಗಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಸಾರ್ವಜನಿಕರ‌ ಹಿತದೃಷ್ಟಿಯಿಂದ ಅತಿ ತುರ್ತಾಗಿರುವ ಕಾಮಗಾರಿಗಳನ್ನು ಕೈಗೊಂಡಿದ್ದು, ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಲೋಪವಾಗಬಾರದು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಔರಾದ ಪ್ರದೇಶದ ಜನರ ಹಿತಾಸಕ್ತಿಯೇ ನನಗೆ ಮುಖ್ಯ. ಪ್ರತಿ ಗ್ರಾಮಕ್ಕೂ ಅಭಿವೃದ್ಧಿಯ ಲಾಭ ತಲುಪುವಂತೆ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕ್ಷೇತ್ರದಲ್ಲಿ ಸಾಕಷ್ಟು ನಷ್ಟವಾಗಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು ಶೀಘ್ರ ಅತೀವೃಷ್ಠಿ ಪ್ರದೇಶವೆಂದು ಘೋಷಿಸಿ ಪರಿಹಾರಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದೇನೆ. ರೈತರು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬಾರದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಔರಾದ(ಬಿ) ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಮುಖಂಡರಾದ ಕಿರಣ ಪಾಟೀಲ ಹಕ್ಯಾಳ, ಬಸವರಾಜ ಪಾಟೀಲ ಕಮಲನಗರ, ಮಲ್ಲಿಕಾರ್ಜುನ ದಾನಾ, ನಾಗನಾಥ ಚಿಕ್ಲೆ, ಶಿವಾಜಿರಾವ ಪಾಟೀಲ ಮುಂಗನಾಳ, ಅನೀಲ ಬಿರಾದಾರ, ಬಾಬುರಾವ ತೋರ್ಣಾವಾಡಿ, ಶಿವರಾಜ ಅಲ್ಮಾಜೆ, ಶಿವು ಝುಲ್ಫೆ, ಶಿವಕುಮಾರ ವಡ್ಡೆ, ನಾಗೇಶ ಪತ್ರೆ, ರಂಗರಾವ ಜಾಧವ, ಅಶೋಕ ಹಲಮಂಡಗೆ, ಪ್ರಕಾಶ ಮೇತ್ರೆ, ಪ್ರಕಾಶ ಜೀರ್ಗೆ, ಮಲ್ಲಪ್ಪ ನೇಳಗೆ, ಶಿವರಾಜ ಖಳೂರೆ, ಮಾದಪ್ಪ ಗಂಗಾ ಸೇರಿದಂತೆ ಇತರರಿದ್ದರು.