ಕರಾಳ ದಿನದ 50 ವರ್ಷ – ತುರ್ತು ಪರಿಸ್ಥಿತಿಯ ಕುರಿತು ಸಾರ್ವಜನಿಕ ಚರ್ಚೆ

ಕರಾಳ ದಿನದ 50 ವರ್ಷ – ತುರ್ತು ಪರಿಸ್ಥಿತಿಯ ಕುರಿತು ಸಾರ್ವಜನಿಕ ಚರ್ಚೆ
ಕಲಬುರಗಿ:ಜೂನ್ 26, 2025 (ಗುರುವಾರ) ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯ ವತಿಯಿಂದ "ಕರಾಳ ದಿನ"ದ 50ನೇ ವರ್ಷದ ಅಂಗವಾಗಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷದ ನಡೆ ಕುರಿತು ಸಾರ್ವಜನಿಕ ಚರ್ಚೆಯು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಮಾನ್ಯ ಶ್ರೀ ಗುರುಪ್ರಕಾಶ್ ಪಾಸ್ವಾನ್ (ನವದೆಹಲಿ) ಹಾಗೂ ಉತ್ತರಪ್ರಾಂತ ಪ್ರಚಾರ ಪ್ರಮುಖ್ ಶ್ರೀ ಕೃಷ್ಣ ಜಿ ಜೋಶಿ ಭಾಗವಹಿಸಿ ತಮ್ಮ ಮನೋಗತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಸಮಾಜದ ಎಲ್ಲಾ ಕ್ಷೇತ್ರಗಳ ಪ್ರಮುಖರಾದ ವೈದ್ಯರು, ಇಂಜಿನಿಯರ್ಗಳು, ನ್ಯಾಯವಾದಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವೇದಿಕೆಯು ಮನವಿ ಸಲ್ಲಿಸಿದೆ.
ಸ್ಥಳ:
ಚೇಂಬರ್ ಆಫ್ ಕಾಮರ್ಸ್, ಸೂಪರ್ ಮಾರ್ಕೆಟ್, ಕಲಬುರಗಿ ಜೂನ್ 26, 2025 (ಗುರುವಾರ) ಮಧ್ಯಾಹ್ನ 1 ಗಂಟೆಗೆ
ಆಯೋಜಕರು:ಕಲಬುರಗಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆ
-