ಕಿರಣಕುಮಾರಗೆ ಡಾಕ್ಟರೇಟ್ ಪದವಿ

ಕಿರಣಕುಮಾರಗೆ ಡಾಕ್ಟರೇಟ್ ಪದವಿ

ಕಿರಣಕುಮಾರಗೆ ಡಾಕ್ಟರೇಟ್ ಪದವಿ  

ಆಳಂದ: ತಾಲ್ಲೂಕಿನ ಭೂಸನೂರ ತಾಂಡಾದ ಕಿರಣಕುಮಾರ ಗುಲಾಬ ರಾಠೋಡ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.

Study of Peristaltic Mechanism of a Non-Newtonian Fluid in a Channel Tube” ಎಂಬ ಮಹಾಪ್ರಬಂಧವನ್ನು ಅವರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಈ ಮಹಾಪ್ರಬಂಧಕ್ಕೆ ಡಾ. ಕೆ.ವಿ. ಪ್ರಸಾದ್ ಅವರು ಮಾರ್ಗದರ್ಶಕರಾಗಿದ್ದರು.

ಕಿರಣಕುಮಾರರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಊರಿನವರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಡಾ. ಅವಿನಾಶ ಎಸ್. ದೇವನೂರ.