ಕಿರಣಕುಮಾರಗೆ ಡಾಕ್ಟರೇಟ್ ಪದವಿ

ಕಿರಣಕುಮಾರಗೆ ಡಾಕ್ಟರೇಟ್ ಪದವಿ
ಆಳಂದ: ತಾಲ್ಲೂಕಿನ ಭೂಸನೂರ ತಾಂಡಾದ ಕಿರಣಕುಮಾರ ಗುಲಾಬ ರಾಠೋಡ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
“Study of Peristaltic Mechanism of a Non-Newtonian Fluid in a Channel Tube” ಎಂಬ ಮಹಾಪ್ರಬಂಧವನ್ನು ಅವರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಈ ಮಹಾಪ್ರಬಂಧಕ್ಕೆ ಡಾ. ಕೆ.ವಿ. ಪ್ರಸಾದ್ ಅವರು ಮಾರ್ಗದರ್ಶಕರಾಗಿದ್ದರು.
ಕಿರಣಕುಮಾರರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಊರಿನವರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಡಾ. ಅವಿನಾಶ ಎಸ್. ದೇವನೂರ.