ಮರಳು ಸಾಗಾಣಿಕೆಯನ್ನು ಪುನರ ಆರಂಭಿಸುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಒತ್ತಾಯ

ಮರಳು ಸಾಗಾಣಿಕೆಯನ್ನು ಪುನರ ಆರಂಭಿಸುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಒತ್ತಾಯ

ಮರಳು ಸಾಗಾಣಿಕೆಯನ್ನು ಪುನರ ಆರಂಭಿಸುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಒತ್ತಾಯ

ಕಲಬುರಗಿ: ಸ್ಥಗಿತಗೊಳಿಸಲಾಗಿ ಮರಳು ಸಾಗಾಣಿಕೆಯನ್ನು ಪುನರ ಆರಂಭಿಸುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಒತ್ತಾಯಿಸಿದರು. ನಗರದ ಡಿಸಿ ಕಚೇರಿಗೆ ಭೇಟಿ ನೀಡಿದ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗ, ಕಲಬುರಗಿ ನಗರದಲ್ಲಿ ಮರಳು ಸಾಗಾಣಿಕೆ ಸುಮಾರು ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ನಗರದಲ್ಲಿ ಮರಳಿನ ಬೆಲೆ ದುಪ್ಪಟ್ಟು ಆಗಿದೆ. ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೂಲಿ ಕಾರ್ಮಿಕು ಹಾಗೂ ಕಟ್ಟಡ ಕಾರ್ಮಿಕರಿದು ಮರಳು ಸಹಿತಗೊಂಡಿದ್ದರಿಂದ ಕೆಲಸವಿಲ್ಲದೆ ಪರದಾಡುವಂತಾಗಿದೆ. ಮನೆ ಮಾಲೀಕರು ಇಂಜಿನಿಯರ್ ಗಳು ಮತ್ತು ಬಿಲ್ಡರ್ಸ್ ಗಳು ಮರಳಿನ ಬೆಲೆ ಹೆಚ್ಚಾಗಿದ್ದರಿಂದ ಸೈಟ್ಗಳು ಕಟ್ಟಡ ನಿರ್ಮಾಣ ಕಾರ್ಯನಿರ್ಲಿಸಿದ್ದಾರೆ ಹೀಗಾಗಿ ಕೂಡಲೇ ಮರಳು ಸಾಗಾಣಿಕೆಗೆ ಅನುಮತಿಯನ್ನು ನೀಡಬೇಕು ಎಂದು ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಭೀಮರಾಯ ಕಂದಳ್ಳಿ, ಉಪಾಧ್ಯಕ್ಷರಾದ ಮಹಾಂತೇಶ್ ದೊಡ್ಡಮನಿ, ಶರಣು ಬಳಿಚಕ್ರ, ಅಣಯ್ಯ ಗುತ್ತೆದಾರ್, ಚಂದ್ರಕಾಂತ, ಬಾಬುರಾವ್ ದೇವರಮನಿ, ಮಹೆಬೂಬ್ ಶೇಖ್, ಅಶೋಕ ಆಲೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.