ಹೈಕೋರ್ಟ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

ಹೈಕೋರ್ಟ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

ಹೈಕೋರ್ಟ್ ನಲ್ಲಿ ವಿಶ್ವ ಪರಿಸರ ದಿನಾಚರಣೆ 

ಕಲಬುರಗಿ: ನಗರದ ಉಚ್ಛನ್ಯಾಯಾಲಯದ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉಚ್ಛನ್ಯಾಯಾಲಯವು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ನೆರವೇರಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಮೂರ್ತಿ ಮೊಹಮದ್ ನವಾಜ್ ಅವರು ಸಸಿ ನೆಡುವ ಮುಖಾಂತರ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ರವಿ ವಿ ಹೊಸಮನಿ, ವಿ ಶ್ರೀಷಾನಂದ, ಕೆ.ಎಸ್. ಹೇಮಲೇಖಾ, ವಕೀಲರ ಸಂಘದ ಅಧ್ಯಕ್ಷ ಎಸ್.ವಿ ಪಸಾರ್, ಪ್ರಧಾನ ಕಾರ್ಯದರ್ಶಿ ಗೌರೀಶ್ ಎಸ್. ಖಾಶಂಪೂರ್, ಉಪಾಧ್ಯಕ್ಷ ಅನಂತ ಜಾಗೀರದಾರ, ಖಜಾಂಚಿ ಮಂಜುನಾಥ್ ಗಿಣ್ಣಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ನ್ಯಾಯಾಲಯದ ಸಿಬ್ಬಂದಿ ಹಿರಿಯ ವಕೀಲರು ಭಾಗವಹಿಸಿದರು. ನಂತರ ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು ಪರಿಸರ ಜಾಗ್ರತಿಕುರಿತು ಮಾತನಾಡಿದರು.