ಜನ್ಮದಿನದ ಪ್ರಯುಕ್ತ ಸಾಮೂಹಿಕ ವಿವಾಹ: ಸಾಮಾಜಿಕ ಭಾವೈಕ್ಯದ ನಾದ

ಜನ್ಮದಿನದ ಪ್ರಯುಕ್ತ ಸಾಮೂಹಿಕ ವಿವಾಹ: ಸಾಮಾಜಿಕ ಭಾವೈಕ್ಯದ ನಾದ

ಜನ್ಮದಿನದ ಪ್ರಯುಕ್ತ ಸಾಮೂಹಿಕ ವಿವಾಹ: ಸಾಮಾಜಿಕ ಭಾವೈಕ್ಯದ ನಾದ

ಸಾಮೂಹಿಕ ವಿವಾಹ ಕಾರ್ಯಕ್ರಮ: ಮಾನವೀಯ ಸೇವೆಗೆ ಮಾದರಿ

ಕಲಬುರಗಿ: ನಗರದ ಮೋಘಲ್ ಫಂಕ್ಷನ್ ಹಾಲ್‌ನಲ್ಲಿ ಖಮರುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ ಅವರ ಜನ್ಮದಿನದ ಅಂಗವಾಗಿ ಭಾನುವಾರ ಸಂಜೆ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಮೌಲ್ಯಮಯ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಶ್ರೀ ಚಿ.ದೊಡಪ್ಪ ಅಪ್ಪ ಅವರು ಆಶೀರ್ವಚನ ನೀಡಿ ನವಜೋಡಿಗಳಿಗೆ ಶುಭ ಹಾರೈಸಿದರು. ಉತ್ತರ ಕ್ಷೇತ್ರದ ಶಾಸಕಿ ಹಾಗೂ ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷೆ ಕನೀಜಾ ಫಾತಿಮಾ ಅವರು ಸಾಂಸ್ಕೃತಿಕ ವಾತಾವರಣದಲ್ಲಿ ನಡೆಯುವ ಈ ರೀತಿಯ ವಿವಾಹಗಳು ಸಮಾಜದಲ್ಲಿ ಭಾವೈಕ್ಯವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕಲಬುರಗಿ ಜಿಡಿಎ ಅಧ್ಯಕ್ಷ ಮಜರ್ ಆಲಂಖಾನ್, ಹಿರಿಯ ಕಾಂಗ್ರೆಸ್ ನಾಯಕ ಅರುಣಕುಮಾರ ಪಾಟೀಲ, ಶರಣಬಸವೇಶ್ವರ ಸಂಸ್ಥಾನದ ಕುಡಿ ಡಾ.ಅಲ್ಲಮಪ್ರಭು ದೇಶಮುಖ್ ,ಮತೀನ್ ಪಟೇಲ್, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಪ್ರಮುಖರು ಹಾಗೂ ಫರಾಜ್ ಉಲ್ ಇಸ್ಲಾಂ ಅಭಿಮಾನಿಗಳು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ನವಜೋಡಿಗಳಿಗೆ ವಿವಾಹ ವ್ಯವಸ್ಥೆಯ ಭಾರವನ್ನು ತಗ್ಗಿಸಿ, ಸಾಮಾಜಿಕ ಸಮರಸ್ಯತೆ ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಆಯೋಜನೆ ಸಾಂದರ್ಭಿಕವಾಗಿದೆ ಎಂಬುದಾಗಿ ಉಪಸ್ಥಿತ ಗಣ್ಯರು ಅಭಿಪ್ರಾಯಪಟ್ಟರು.