ಮಾನವ ಹತ್ಯಾಕಾಂಡ: ಸಿಪಿಐ ಖಂಡಿಸಿದೆ

ಮಾನವ ಹತ್ಯಾಕಾಂಡ ಖಂಡನೆ – ಸಿಪಿಐ ವತಿಯಿಂದ ಸೌಹಾರ್ದತಾ ದಿನ ಆಚರಣೆ
ಕಲಬುರಗಿ: ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ನಿರಂತರ ಮಾನವ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿ ಹಾಗೂ ಪ್ಯಾಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸಲು ಭಾರತ ಕಮ್ಯುನಿಷ್ಟ ಪಕ್ಷ (ಸಿಪಿಐ) ವತಿಯಿಂದ ನಗರದ ಎಸ್.ವಿ.ಪಿ. ವೃತ್ತದಲ್ಲಿ "ರಾಷ್ಟ್ರೀಯ ಸೌಹಾರ್ದತಾ ದಿನ"ವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮುಖಂಡರು, ಮನುಷ್ಯತ್ವವನ್ನೇ ಪ್ರಶ್ನಿಸುವಂತೆ ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕು ಎಂಬಾಗಿಯೂ, ಭಾರತ ಸರಕಾರವು ಪ್ಯಾಲೆಸ್ತೀನಿಗೆ ತಾತ್ಕಾಲಿಕ ಮಾನವೀಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ನೀಲಾ ಕೆ., ಆರ್.ಕೆ. ವೀರಭದ್ರಪ್ಪ, ಮಹೇಶ, ಪದ್ಮಾವತಿ, ಎಸ್.ಎಮ್. ಶರ್ಮಾ, ಲವಿತ್ರಾ, ಸುಧಾಮ ಧನ್ನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು