ಜಮೀನು ಕಬ್ಬಾ: ವಾರುಸುದಾರರಿಗೆ ವಹಿಸಿಕೊಡಲು ಆಗ್ರಹಿಸಿ ಧರಣಿ

ಜಮೀನು ಕಬ್ಬಾ: ವಾರುಸುದಾರರಿಗೆ ವಹಿಸಿಕೊಡಲು ಆಗ್ರಹಿಸಿ ಧರಣಿ

ಜಮೀನು ಕಬ್ಬಾ: ವಾರುಸುದಾರರಿಗೆ ವಹಿಸಿಕೊಡಲು ಆಗ್ರಹಿಸಿ ಧರಣಿ

ಕಲಬುರಗಿ: ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದ ಸರ್ವೆ ನಂ.8ರಲ್ಲಿ ಶಾಂತಪ್ಪ ಸಿಂಗೆ ಅವರಿಗೆ 4 ಎಕರೆ 20 ಗುಂಟೆ ಜಮೀನು ಮಂಜೂರಾಗಿದ್ದು, ಈ ಜಮೀನನ್ನು ಕೆಲವರು ಪಿಸಿಟಿಸಿಎಲ್ ಕಾಯ್ದೆ ಉಲ್ಲಂಘನೆ ಮಾಡಿ ಜಮೀನನ್ನು ಕಾನೂನು ಬಾಹಿರವಾಗಿ ಕಬ್ಬಾ ಮಾಡಿ ಪಹಣಿ ಪತ್ರದಲ್ಲಿ ನಮೂದಿಸಿದ್ದು, ಕೂಡಲೇ ಈ ಜಮೀನನ್ನು ಅದರ ವಾರಸ್ಸುದಾರರಿಗೆ ವಹಿಸಿಕೊಡಬೇಕು,

ಹತ್ತಾರು ವರ್ಷಗಳಿಂದ ಕಾನುನು ಬಾಹಿರವಾಗಿ ಜಮೀನು ಸ್ವಾಧೀನ ಪಡಿಸಿಕೊಂಡು ಅದರ ಫಲ ಉಂಡ ವ್ಯಕ್ತಿಗಳಿಂದ 25 ಲಕ್ಷ ಪರಿಹಾರ ಒದಗಿಸಬೇಕು, ಪಹಣಿ ಪತ್ರದಲ್ಲಿ ಜಮೀನನ್ನು ಕಾನೂನುಬಾಹಿರವಾಗಿ ಬದಲಾವಣೆ ಮಾಡಿದ ಸಂಬAಧಿತ ಇಲಾಖೆ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಸಿಟಿಜನ್ಸ್ ಫೋರಂ ಫಾರ್ ಪೀಸ್ ಆಂಡ್ ಜಸ್ಟೀಸ್ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.ಸಿಟಿಜನ್ಸ್ ಫೋರಂ ಫಾರ್ ಪೀಸ್ ಆಂಡ್ ಜಸ್ಟೀಸ್ ಸಂಚಾಲಕ ಎಂ.ಬಿ.ಸಜ್ಜನ್, ಸಹ ಸಂಚಾಲಕರಾದ ನಾಗಯ್ಯಸ್ವಾಮಿ, ಕಲ್ಯಾಣಿ ಸಿಂಗೆ, ಮಹಾದೇವ, ವೆಂಕಟ್, ಖಾಜಾಸಾಬ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು

.