ಅಧಿಕಾರಿಯ ವರ್ಗಾವಣೆ ನಿಯಮ ಬದಲಾವಣೆ ಮಾಡದೇ, ಹಳೆಯ ನಿಯಮದಂತೆ ಜಾರಿ ಮಾಡಬೇಕು : ಸಂಜುಕುಮಾರ ಕಳಸ್ಕರ್ ಆಗ್ರಹ

ಅಧಿಕಾರಿಯ ವರ್ಗಾವಣೆ ನಿಯಮ ಬದಲಾವಣೆ ಮಾಡದೇ, ಹಳೆಯ ನಿಯಮದಂತೆ ಜಾರಿ ಮಾಡಬೇಕು : ಸಂಜುಕುಮಾರ ಕಳಸ್ಕರ್ ಆಗ್ರಹ
ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ನಿಯಮ ಬದಲಾವಣೆ ಮಾಡದೇ, ಹಳೆಯ ನಿಯಮದಂತೆ ಜಾರಿ ಮಾಡಬೇಕೆಂದು ಡಾ. ಬಿ.ಆರ್.ಅಂಬೇಡ್ಕರ ಸೇವಾ ಸಂಘ, ಸುಲೇಪೇಟ್ ಅಧ್ಯಕ್ಷ ಸಂಜುಕುಮಾರ ಕಳಸ್ಕರ್ ಆಗ್ರಹಿಸಿದ್ದಾರೆ
ಹಳೆಯ ನಿಯಮದಂತೆ ಅಂದರೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರು ತೆಗೆದುಕೊಂಡ ನಿರ್ಣಯದಂತೆ. ಒಂದೇ ತಾಲೂಕಿನಲ್ಲಿ ನಿರಂತರವಾಗಿ 7 ವರ್ಷ ಸೇವೆ ಸಲ್ಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನ ಬೇರೆ ತಾಲೂಕಿಗೆ ಅಥವಾ ಜಿಲ್ಲೆಗೆ ವರ್ಗಾವಣೆ ಯಾಗುವ ನಿಯಮ ಜಾರಿಗೆ ತಂದಿದ್ದರು. ಏಕೆಂದರೆ ಪಿ.ಡಿ.ಓ ಹುದ್ದೆ ಸೃಷ್ಟಿಯಾದಾಗಿನಿಂದಲೂ 2010-11 ನೇ ಸಾಲಿನಿಂದಲೂ ಕೆಲವು ಪ್ರಭಾವಿ ಪಿ.ಡಿ.ಓ.ಗಳು ಒಂದೇ (ಜಿಲ್ಲಾ ಕೇಂದ್ರ ಸ್ಥಾನ) ತಾಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೇಗೆಂದರೆ ಅದೇ ತಾಲೂಕಿನ ಆಯಾಕಟ್ಟಿನ ಗ್ರಾಮ ಪಂಚಾಯತಗಳನ್ನು ಆಯ್ಕೆ ಮಾಡಿಕೊಂಡು, ಒಂದೇ ತಾಲೂಕಿನಲ್ಲಿಯೇ ನಿರ್ದಿಷ್ಟ ಕೆಲವು ಗ್ರಾಮಪಂಚಾಯತಗಳಲ್ಲಿಯೇ ತಮ್ಮನ್ನು ತಾವೇ ವರ್ಗಾವಣೆಗೊಳಿಸಿಕೊಳ್ಳುತ್ತಾ, ಸರ್ಕಾರದ ಗಮನಕ್ಕೆ ಬರದೇ ಸರ್ಕಾರಕ್ಕೆ ಚೆಳ್ಳೆ ಹಣ್ಣು ತಿನ್ನಿಸುತ್ತಾ, ಕಾರ್ಯನಿರ್ವಹಿಸುತ್ತಿರುವಂತಹ ಪಿಡಿಓಗಳ ಸತ್ಯ ಅರಿತುಕೊಂಡAತಹ ಮಾನ್ಯ ಸಚಿವರು ಸದರಿ ಇಲಾಖೆಗೆ ಬದಲಾವಣೆ ತರುವ ನಿಟ್ಟಿನಲ್ಲಿ ಕೈಗೊಂಡAತಹ 07 ವರ್ಷ ಒಂದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳನ್ನು ಬೇರೆ ತಾಲೂಕಿಗೆ ಅಥವಾ ಜಿಲ್ಲೆಗೆ ವರ್ಗಾವಣೆ ಮಾಡುವ ನಿಯಮ ತಂದಿರುವುದು ಸ್ವಾಗತಾರ್ಹವಾದುದ್ದು.
ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿ ಉಳ್ಳಂತಹ ಪಿಡಿಓಗಳ ಒತ್ತಡಕ್ಕೆ ಮಣಿದು ಸದರಿ ನಿಯಮದ ಬದಲಾಗಿ ಒಂದೇ ಗ್ರಾ.ಪಂ.ಯಲ್ಲಿ 05 ವರ್ಷ ಸೇವೆ ಸಲ್ಲಿಸಿರುವ ಪಿಡಿಓಗಳನ್ನು ಅದೇ ತಾಲೂಕಿನಲ್ಲಿಯೇ ಸ್ಥಳ ನಿಯುಕ್ತಿಗೊಳಿಸಲು ತಂದತಹ ತಿದ್ದುಪಡಿ ಆದೇಶವು ಸರಿಯಾಗಿರುವುದಿಲ್ಲ.
ಹೀಗಾಗಿ ಮಾನ್ಯ ಸಚಿವರು ಯಾರದೇ ಒತ್ತಡಕ್ಕೆ ಮಣಿಯದೇ ಈ ಮೊದಲು ಕೈಗೊಂಡAತಹ 07 ವರ್ಷ ಒಂದೇ ತಾಲೂಕಿನಲ್ಲಿ ಕಾರ್ಯನಿರ್ವಹಿಸಿತ್ತಿರುವ ಪಿಡಿಓಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವಂತಹ ನಿಯಮವನ್ನು ಮರು ಜಾರಿಗೆ ತಂದು ಪಿಡಿಓಗಳ ವರ್ಗಾವಣೆ ಪ್ರಕ್ರಿಯೆ ಮಾಡಬೇಕಾಗಿ ಮಾನ್ಯರಲ್ಲಿ ಆಗ್ರಹ ಪಡಿಸುತ್ತೇವೆ. ಒಂದು ವೇಳೆ ಈ ರೀತಿ ಮಾಡದೇ ಹೋದರೆ ಜಿಲ್ಲಾದ್ಯಾಂತ/ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.