ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ ಇಂದು

ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ ಇಂದು

ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ ಇಂದು

ಚಿಂಚೋಳಿ : ಇಂದು ಜೂ.10 ಮಂಗಳವಾರ ಶಾಸಕ ಡಾ. ಅವಿನಾಶ ಜಾಧವ ರವರ ನೇತೃತ್ವದಲ್ಲಿ ತಾಲೂಕ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆ ತಾಲೂಕ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯ ನೋಟಿಸ್ ಹೊರಡಿಸಲಾಗಿದೆ. 

ಸಭೆಯಲ್ಲಿ ಮುಂಗಾರು ಬಿತ್ತನೆ ಬೀಜಗಳ ಹಾಗೂ ಕೃಷಿ ಚಟುವಟಿಕೆ, ಕುಠಿತಗೊಂಡಿರುವ ಶೈಕ್ಷಣಿಕ ಗುಣಮಟ್ಟ, ಆರೋಗ್ಯ ಸೇವೆಗಳ ಸೌಲಭ್ಯ ಕುರಿತು, ಚಂದ್ರಪಂಳ್ಳಿ ಪ್ರವಾಸಿ ತಾಣವನ್ನಾಗಿಸುವ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಪಟ್ಟಣ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರನ ಸಮಸ್ಯೆ, ರಸ್ತೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ವಸತಿನಿಲಯ ಹಾಗೂ ಪಟ್ಟಣದ ಪೊಲೀಸ್ ವಸತಿ ನಿಲಯಗಳಲ್ಲಿನ ಸಮಸ್ಯೆಗಳು ಮತ್ತು ಚಂದಾಪೂರದ ಒಳಾಂಗಣ ಕ್ರೀಡಾಂಗಣದ ಕಟ್ಟಡ ಕುಸಿತ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟ ಕಾಮಗಾರಿಗಳ ಹಾಗೂ ಬಂದಿರುವ ಅನುದಾನಗಳ ಬಗ್ಗೆ ಸಭೆಯಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ನೀರಿಕ್ಷೆ ಇದೆ.