ನೆಲ ಕಚ್ಚಿದ ಚಿಂಚೋಳಿ ಪುರಸಭೆ ಆಡಳಿತ ವಾರ್ಡಗಳ ಗೊಳು ಕೆಳುವವರು ಯಾರು ?

ನೆಲ ಕಚ್ಚಿದ ಚಿಂಚೋಳಿ ಪುರಸಭೆ ಆಡಳಿತ  ವಾರ್ಡಗಳ ಗೊಳು ಕೆಳುವವರು ಯಾರು ?

ನೆಲ ಕಚ್ಚಿದ ಚಿಂಚೋಳಿ ಪುರಸಭೆ ಆಡಳಿತ

ವಾರ್ಡಗಳ ಗೊಳು ಕೆಳುವವರು ಯಾರು ?

ಚಿಂಚೋಳಿ : ಪುರಸಭೆ ವ್ಯಾಪ್ತಿಯ ಚಂದಾಪೂರ ವಾರ್ಡಗಳಿಗೆ ಮೂಲಭೂತ ಸೌಲಭ್ಯಗಳು ನೀಡುವಲಿ ಪುರಸಭೆ ಆಡಳಿತ ವಿಫಲವಾಗಿದ್ದು, ಪುರಸಭೆ ಆಡಳಿತ ಸಂಪೂರ್ಣ ನೆಲ ಕಚ್ಚಿದಂತೆ ಗೊಚರಿಸುತ್ತಿದೆ.

ಚಂದಾಪೂರದ ಬೆಳ್ಳಿ ಬೆಳಕು, ಆಶ್ರಯ ಕಾಲೋನಿ, ಮದೀನಾ ಕಾಲೋನಿಗಳಿಗೆ ದಿನನಿತ್ಯ ನೀರು ಪೂರೈಕೆ ಆಗುತ್ತಿಲ್ಲ. ತಮಗೆ ಮನಸ್ಸು ಬಂದಂತೆ ಆಡಳಿತ ನಡೆಸಲಾಗುತ್ತಿದೆ. ವಾರ್ಡಗಳಿಗೆ ಎರಡು-ಮೂರು ದಿನಕೊಮ್ಮೆ ನಲ್ಲಿಗಳಿಗೆ ನೀರು ಬಿಡಲಾಗುತ್ತಿದೆ. ಇದ್ದರಿಂದ ಶೌಚ್ಛಾಲಯಕ್ಕೂ ನೀರು ಇಲ್ಲದೆ ಪರದಾಡುವಂತೆ ಆಗಿದೆ. ಚಿಂಚೋಳಿಯಲ್ಲಿ ಸಾಕಷ್ಟು ನೀರಿನ ಸೌಲಭ್ಯವಿದ್ದರೂ ಕೂಡ ಪುರಸಭೆ ಆಡಳಿತ ಜನರಿಗೆ ನೀರು ಪೂರೈಸುವಲಿ ವಿಫಲವಾಗಿದೆ. ಇನ್ನೂ ಪೊಲೀಸ್ ವಸತಿ ನಿಲಯಗಳಿಗೆ ಬೀದಿ ದೀಪಗಳಿಲ್ಲ. ಕಸದ ತೊಟ್ಟಿ ಅಳವಡಿಸಿರುವುದಿಲ್ಲ. ಮತ್ತು ಕಸ ವಿಲೇವಾರಿ ವಾಹನ ಸಂಚರಿಸಿ ತ್ಯಾಜ್ಯ ಕಸ ಸಂಗ್ರಹಿಸುವ ಕ್ರಮಕೈಗೊಳದ ಪರಿಣಾಮ ಕಾಲೋನಿಯ ಗೃಹಣಿಯರು ಆವರಣದಲ್ಲಿಯೇ ತ್ಯಾಜ್ಯ ಕಸ ಬಿಸಾಡುವಂತೆ ಆಗಿದ್ಧರಿಂದ ಪರಿಸರ ಮಾಲಿನ್ಯಗೊಂಡು ಅಲ್ಲಿನ ಉತ್ತಮ ಆರೋಗ್ಯದ ಪರಿಸರ ಕದಡುವಂತ್ತಾಗಿದ್ದು, ಶುದ್ಧ ಪರಿಸರ ನಿರ್ಮಾಣಗೊಳುವುದಕ್ಕೆ ಪುರಸಭೆ ಯಾವುದೇ ಕ್ರಮಕೈಗೊಂಡಿಲ್ಲ. ಇಂತಹದೆ ಸಮಸ್ಯೆಗಳು ಚಂದಾಪೂರದ ಇತರೆ ವಾರ್ಡಗಳು ಎದುರಿಸುತ್ತಿವೆ. ಮುಖ್ಯ ರಸ್ತೆಗಳ ಬೀದಿ ದೀಪಗಳು ಕಣ್ಣಮುಚ್ಚಾಲೆ ಆಡುತ್ತಿವೆ. ಮಳೆಯಿಂದ ಚರಂಡಿ ನೀರು ರಸ್ತೆಗೆ ಬಿದ್ದು ಕೆಸರು ಮಯವಾಗಿದ್ದರೂ ಬ್ಲಿಚಿಂಗ್ ಪೌಡರ್ ಸಿಂಪಡನೆ ಮಾಡುವ ಗೊಜಿಗೆ ಪುರಸಭೆ ಮನಸ್ಸು ಮಾಡುತ್ತಿಲ. ವಿಪರಿತ ಸೊಳೆ ಕಾಟಗಳಿಂದ ತಪ್ಪಿಸಲು ಫಾಗಿಂಗ್ ನಡೆಸುತ್ತಿಲ್ಲ. ಹೀಗೆ ಪುರಸಭೆ ವ್ಯಾಪ್ತಿಯ ವಾರ್ಡಗಳಲ್ಲಿ ಹಲವಾರು ಸಮಸ್ಯೆಗಳಿಂದ ತುಂಬಿ ತುಳುಕುತ್ತಿದ್ದರು. ಆಡಳಿತ ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸದೇ ಮೌನಕ್ಕೆ ಜಾರಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿಂಚೋಳಿ ಪುರಸಭೆ ಆಡಳಿತ ಕಾರ್ಯವೈಖರಿ ನೆಲ ಕಚ್ಚಿದಂತೆ ಆಗಿದ್ದು, ಸಮಸ್ಯೆಗಳ ಗೊಳು ಕೆಳುವವರು ಯಾರು ? ಎಂಬ ಪರಿಸ್ಥಿತಿ ಜನರದಾಗಿದೆ.  

ಜಿಲ್ಲಾಧಿಕಾರಿಗಳ ಮಾತಿಗೂ ಪುರಸಭೆ ಕಿಮ್ಮತ್ತು ನೀಡುತ್ತಿಲ್ಲ :

ಸಾರ್ವಜನಿಕರ ಸಮಸ್ಯೆಗಳ ದೂರುಗಳು ಹೆಚ್ಚಾಗಿ ಬಂದ ಹಿನ್ನಲೆಯಲ್ಲಿ ಕಳೆದ ತಿಂಗಳಲ್ಲಿ ಚಿಂಚೋಳಿ ಪುರಸಭೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸೇಡಂ ಸಹಾಯಕ ಆಯುಕ್ತರು ಭೇಟಿ ನೀಡಿ 2 ಗಂಟೆಗಳ ಕಾಲ ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳಿಗೆ, ನೀರು ಪೂರೈಕೆ ಇಂಜಿನೀಯರಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಭೆ ತೆಗೆದುಕೊಂಡು ಕ್ಲಾಸ್ ತೆಗೆದುಕೊಂಡಿದರು. ಆದರೂ ಪುರಸಭೆ ಆಡಳಿತದ ಅಧಿಕಾರಿಗಳು ಎಚ್ಚೆತುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಅಧಿಕಾರಿಗಳು ಒಂದೇ ಕಡೆಗೆ ಬೇರು ಬಿಟ್ಟು ಕಾರ್ಯನಿರ್ವಹಿಸುತ್ತಿದ್ದರ ಹಿನ್ನಲೆಯಲ್ಲಿ ಯಾರ ಆದೇಶಗಳು ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂಬ ಮೊಂಡುತನ ಇವರದ್ದಾಗಿದೆ.