ಇಂದಿನಿಂದ ರಾವೂರ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಾರಂಭ.

ಇಂದಿನಿಂದ ರಾವೂರ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಾರಂಭ.
ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವು ಇಂದು ಹೇಮರೆಡ್ಡಿ ಮಲ್ಲಮ್ಮ ಪುರಾಣದೊಂದಿಗೆ ಪ್ರಾರಂಭವಾಗಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ತಿಳಿಸಿದ್ದಾರೆ. ಏಪ್ರಿಲ್ 12 ರಿಂದ 20 ರ ವರೆಗೆ ನಿತ್ಯವೂ ಸಂಜೆ 7-30 ಗಂಟೆಗೆ ಯೋಗಿರಾಜ್ ಖಾನಾಪುರ ಅವರಿಂದ ಪುರಾಣ ನಡೆಯಲಿದೆ. ಶ್ರೀಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ನಿತ್ಯ ನಾಡಿನ ವಿವಿಧ ಪೂಜ್ಯರು ಗಣ್ಯರು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 17 ರಂದು ಪ್ರತಿಭಾ ಪುರಸ್ಕಾರ, 18 ರಂದು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 19 ರಂದು ಲಕ್ಷ್ಮಿಪುರವಾಡಿ ಗ್ರಾಮದಿಂದ ರಾವೂರ ಗ್ರಾಮಕ್ಕೆ ಸದ್ಭಾವನಾ ಪಾದಯಾತ್ರೆ, 20 ರಂದು ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿನಿಲಯ ಹಾಗೂ ಪಾಕಶಾಲೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 21ರಂದು ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, 22 ರಂದು ಸಂಜೆ 6-30 ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ. ಅಂದು ರಥೋತ್ಸವದ ಬಳಿಕ ಹಾಸ್ಯ ರಸಮಂಜರಿ ನಡೆಯಲಿದೆ ಎಂದು ಬಾಳಿ ತಿಳಿಸಿದ್ದಾರೆ.