ದಂತ ವೈದ್ಯಕೀಯ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದೆ ಡಾ ಶಿವಶರಣ ಕೆ

ದಂತ ವೈದ್ಯಕೀಯ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದೆಡಾ ಶಿವಶರಣ ಕೆ
ಕಲಬುರ್ಗಿ ಜು25: ಇತ್ತಿಚಿನ ದಿನಗಳಲ್ಲಿ ದಂತವೈದ್ಯಶಾಸ್ತ್ರವು ಹೆಚ್ಚು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆಯುತ್ತಿದೆ ಹೀಗಾಗಿ ದಂತವೈದ್ಯರ ಬೇಡಿಕೆಯು ಹೆಚ್ಚಾಗಿದೆ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾದ ಡಾ ಶಿವಶರಣ ಕೆ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಡೆಂಟಲ್ ಕೌನ್ಸಿಲ್, ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಡಿಯಲ್ಲಿ ಬಿಯಾಂಡ್ ದ ಸಿಲೇಬಸ್ ರಾಜ್ಯ ಮಟ್ಟದ ಸೆನ್ಸಟೈಜೆಶನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಹೊಸ ಹೊಸ ಆಕರ್ಷಕ ಬದಲಿ ದಂತಗಳ ಮಾದರಿಗಳು ಬರುತ್ತಿದ್ದು ದಂತರೋಗಿಗಳು ಇತ್ತಿಚಿನ ದಿನಗಳಲ್ಲಿ ಚೌಕಾಸಿ ಮುಖಾಂತರ ದಂತಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವದರಿಂದ ದಂತ ಸೇವೆಗಳ ಮೇಲಿನ ವೆಚ್ಚಗಳು ಪ್ರಪಂಚದಾದ್ಯಂತ ಗಣನಿಯವಾಗಿ ಹೆಚ್ಚಿವೆ ಎಂದು ಹೇಳಿದರು.
ಆಸ್ಪತ್ರೆ ಅಂತ ನಾವು ಸರಳವಾಗಿ ಹೇಳುತ್ತೇವೆ ಆದರೆ ಆ ಶಬ್ಧಕ್ಕೆ ಪರಿಪೂರ್ಣ ವ್ಯಾಖ್ಯಾನವಿಲ್ಲ, ಆದರೆ ಆರೈಕೆಯನ್ನು ಅನಾರೋಗ್ಯ ಪೀಡಿತ ಮತ್ತು ಗಾಯಗೊಂಡ ರೋಗಿಗಳನ್ನು ಒಳರೋಗಿಗಳಾಗಿ ಪರಿಗಣಿಸುವ ಸಂಸ್ಥೆ ಎಂದು ವರ್ಗೀಕರಿಸಿವ ಸಂಸ್ಥೆಯಾಗಿದೆ ಎಂದು ಹೇಳಿದರು.
WHO ಆಸ್ಪತ್ರೆಯ ಬಗ್ಗೆ ಈ ರೀತಿ ವ್ಯಾಖ್ಯಾನ ಮಾಡುತ್ತದೆ
ಆಸ್ಪತ್ರೆಯು ಸಾಮಾಜಿಕ ಮತ್ತು ವೈದ್ಯಕೀಯ ಸಂಸ್ಥೆಯ ಅವಿಭಾಜ್ಯ ಅಂಗವಾಗಿದೆ, ಇದರ ಕಾರ್ಯಗಳು ಜನಸಂಖ್ಯೆಗೆ ಚಿಕಿತ್ಸಕ ಮತ್ತು ತಡೆಗಟ್ಟುವಿಕೆ ಎರಡರಲ್ಲೂ ಸಂಪೂರ್ಣ ಆರೋಗ್ಯ ಆರೈಕೆಯನ್ನು ಒದಗಿಸುವುದು,
ಆರೋಗ್ಯ ಕಾರ್ಯಕರ್ತರು/ಕಾರ್ಯಕರ್ತರ ತರಬೇತಿ ಮತ್ತು ಜೈವಿಕ-ಸಾಮಾಜಿಕ ಸಂಶೋಧನೆಯನ್ನು ನಡೆಸುವುದು ಸಂಸ್ಥೆ ಎಂದು ಹೇಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ ದಂತವೈದ್ಯಶಾಸ್ತ್ರದಲ್ಲಿ ದಂತ ವೈದ್ಯರ ಸಂವಹನವು ರೋಗಿಯ ಆರೈಕೆ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ:
ರೋಗಿಗಳೊಂದಿಗೆ ವಿಶ್ವಾಸ ಮತ್ತು ಬಾಂಧವ್ಯವನ್ನು ನಿರ್ಮಿಸುತ್ತದೆ.
ರೋಗಿಯ ತೃಪ್ತಿ ಮತ್ತು ಅನುಸರಣೆಯನ್ನು ಹೆಚ್ಚಿಸುತ್ತದೆ.
ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಶ್ರೀ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಡೆಂಟಲ್ ಕಾಲೇಜು ಸಂಚಾಲಕರಾದ ಡಾ ಅನಿಲಕುಮಾರ ಪಟ್ಟಣ ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ,ಡಾ ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್,ಡಾ ಕಿರಣ್ ದೇಶಮುಖ್, ನಿಶಾಂತ್ ಎಲಿ,ಡಾ ಗುರುಲಿಂಗಪ್ಪ ಪಾಟೀಲ್, ಕಾಲೇಜು ಪ್ರಾಚಾರ್ಯ ಡಾ ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ ವಿರೇಂದ್ರ ಪಾಟೀಲ್, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾದ ಡಾ ಶಿವಶರಣ, ಡಾ ಪ್ರಶಾಂತ್, ಡಾ ಜಕಾವುಲ್ ಖಾನ್, ಡಾ ವಿನಮ ಹಿರೇಮಠ,ಡಾ ಚಂದ್ರಕಾಂತ ಪಾಟೀಲ್ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು