ವಚನ ಲಿಪಿಕಾರರು ಅವಿಸ್ಮರಣೀಯರು

ವಚನ ಲಿಪಿಕಾರರು ಅವಿಸ್ಮರಣೀಯರು

ವಚನ ಲಿಪಿಕಾರರು ಅವಿಸ್ಮರಣೀಯರು

 ಪರಧರ್ಮ ಸಹಿಷ್ಣುತೆ ಸ್ವಧರ್ಮ ಆಚರಣೆ ಇರಲಿ

ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 23ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , 770 ಅಮರ ಗಣಗಳಲ್ಲಿ ಕೇವಲ 40 - 50 ಶರಣರು ಮಾತ್ರ ಇಂದು ಪ್ರಚಲಿತದಲ್ಲಿ ಇದ್ದಾರೆ, ಉಳಿದ ಶರಣರ ಪರಿಚಯ ನಮಗೆ ಇಲ್ಲದಂತಾಗಿದೆ . ಅದಕ್ಕೆ ಪ್ರಮುಖ ಕಾರಣ 12ನೇ ಶತಮಾನದಲ್ಲಿ ಇಂದಿನಂತೆ ಸುಧಾರಿತ ಮುದ್ರಣ ವ್ಯವಸ್ಥೆ ಇರಲಿಲ್ಲ ,ಲಿಪಿಕಾರರು ಮರುಪ್ರತಿಗಳನ್ನು ಮಾಡುತ್ತಿದ್ದರು. ಇದು ಕಠಿಣ ಪರಿಶ್ರಮದ ಕೆಲಸವೆಯಾಗಿತ್ತು . ಅವರ ಶ್ರಮದಿಂದಲೇ ಇಂದು ವಚನ ಸಾಹಿತ್ಯ ಉಳಿದಿದೆ . ಪ್ರಸ್ತುತ ಸಂದರ್ಭದಲ್ಲಿ ಲಭ್ಯವಿರುವ ವಚನ ಸಾಹಿತ್ಯವನ್ನು ಲಿಂಗಾಯಿತರು ಉಳಿಸಿಕೊಂಡು ಹೋಗುವ ನಿಜವಾರಸುದಾರರಾಗಬೇಕು. ಅನ್ಯಧರ್ಮದವರು ಕೂಡ ಬಸವ ಧರ್ಮದ ಅನುಯಾಯಿಗಳಾಗಿದ್ದಾರೆ. ಬಸವ ಸಂದೇಶ ಅರಿತು ಆಚರಿಸುವ ಅನುಯಾಯಿಗಳು ಇದ್ದಾರೆ. ಲಿಂಗಾಯತ ಮನೆತನದಲ್ಲಿ ಹುಟ್ಟಿದವರು ಲಿಂಗವಂತ ಆಚರಣೆಗಳನ್ನು ಮಾಡುತ್ತಿದ್ದರೆ ಅವರನ್ನು ಲಿಂಗವಂತ ಪರಂಪರೆಯ ಸಾಂಪ್ರದಾಯ ಲಿಂಗಾಯಿತರು ಎನ್ನಬಹುದಷ್ಟೇ . ಅವರೆಲ್ಲ ಜಾತಿ ಸಂಪ್ರದಾಯದ ಲಿಂಗಾಯತರು ಎಂದೆನ್ನಬಹುದು . ಲಿಂಗವಂತ ಧರ್ಮ ಸಿದ್ಧಾಂತದಂತೆ ಬದುಕುವವರು ನಿಜವಾದ ಲಿಂಗಾಯತರು. ವಿಭೂತಿ ಹಚ್ಚಿಕೊಳ್ಳುವ, ಲಿಂಗ ಕಟ್ಟಿಕೊಂಡು ದಿನಕೊಮ್ಮೆಯಾದರೂ ಲಿಂಗ ಪೂಜೆ ಮಾಡಿಕೊಳ್ಳುವ , ಕಾಯಕದಾಸೋಹ ಮಾಡುತ್ತ ಲಿಂಗವಂತ ಧರ್ಮ ಸಿದ್ಧಾಂತ ಜೀವನದಲ್ಲಿ ಅನುಸರಿಸುವವನನ್ನು ನಿಜವಾದ ಲಿಂಗಾಯತನೆನ್ನೆಲು ಸಾಧ್ಯವಿದೆ .

ಒಂದು ಕಾಲದಲ್ಲಿ ಜಗತ್ತಿನಲ್ಲಿ ಚರ್ಚುಗಳಿರಲಿಲ್ಲ ,ಆದರೆ ಯಡೆಯೂರು ಸಿದ್ದಲಿಂಗೇಶ್ವರರು ಲಿಂಗವಂತ ಧರ್ಮ ಕಾಪಾಡಲು ಊರಿಗೊಂದು ಮಠಗಳನ್ನು ಕಟ್ಟಿ ಧರ್ಮ ಪ್ರಚಾರಕ ಸ್ವಾಮಿಗಳನ್ನು ನೇಮಿಸಿದರು . ಲಿಂಗವಂತ ಧರ್ಮ ಸಿದ್ದಾಂತಗಳು ಉಳಿದು ಬೆಳೆಯಲೆಂಬುದು ಅವರ ಉದ್ದೇಶವಾಗಿತ್ತು. ಶಾಲಾ-ಕಾಲೇಜುಗಳನ್ನು ತೆರೆದು ಕೇವಲ ಔಪಚಾರಿಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದೊಂದೇ ಮಠಗಳ ಉದ್ದೇಶವಲ್ಲ , ಲಿಂಗವಂತ ಧರ್ಮ ಸಿದ್ಧಾಂತಗಳನ್ನು ಮಠಗಳು ಉಳಿಸಿ ಬೆಳೆಸಬೇಕು . ಮಠಗಳು ತನ್ನ ಕಾರ್ಯ ಮಾಡದಿದ್ದರೆ ಲಿಂಗವಂತರು ಅನ್ಯಧರ್ಮಿಗಳಿಗೆ ಮಾರುಹೋಗಿ ಧರ್ಮ ನಶಿಸಿ ಹೋಗುತ್ತದೆ . ಪರಧರ್ಮ ಸಹಿಷ್ಣುತೆ ಸ್ವಧರ್ಮ ಆಚರಣೆ ರೂಢಿಯಲ್ಲಿ ಬರಬೇಕು ಎಂದರು .

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ ಡಾ. ಗಣಪತಿ ಸಿನ್ನೂರ, ಚಂದ್ರಶೇಖರ ಮಂಗದ ಅವರು ಹಾಜರಿದ್ದರು