ಯೋಗ ಪ್ರಕೃತಿ ಕೊಡುಗೆ. ಜಾವಾದಿ

ಯೋಗ ಪ್ರಕೃತಿ ಕೊಡುಗೆ. ಜಾವಾದಿ

ಯೋಗ ಪ್ರಕೃತಿ ಕೊಡುಗೆ. ಜಾವಾದಿ 

ಯೋಗ ಪುರಾತನ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿ ನೀಡಿದ ಅತ್ಯಂತ ಪ್ರಮುಖ ಮತ್ತು ಅತಿ ಮಹತ್ವಪೂರ್ಣವಾದ ಕೊಡುಗೆಯಾಗಿದೆ. ಇದು ಮನುಷ್ಯನನ್ನು ತನ್ನ ಜೀವನದುದ್ದಕ್ಕೂ ಪ್ರಕೃತಿಯೊಂದಿಗೆ ಸಂಪರ್ಕಿಸಿ, ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಜೀವನವನ್ನು ಸುಂದರವಾಗಿಡುತ್ತದೆ. ಇದು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಮಟ್ಟಗಳಂತಹ ಎಲ್ಲಾ ಆಯಾಮಗಳನ್ನು ಹತೋಟಿಯಲ್ಲಿಡುತ್ತದೆ. ಶಾರೀರಿಕ, ಮಾನಸಿಕ ಮಟ್ಟದ ಸೂಕ್ಷ್ಮತೆಯನ್ನು ಒದಗಿಸುತ್ತದೆ. ಮಾನವನ ದೇಹದ ವಿಭಿನ್ನ ತೊಂದರೆಗಳ ಅಸ್ತಿತ್ವವನ್ನು ಸುಧಾರಿಸಿ, ಆರೋಗ್ಯವನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಳ್ಳಲು ಸದಾ ಕಾಲ ಸಹಾಯ ಮಾಡಿ,ಕಾಪಾಡುತ್ತದೆ. 

ಯೋಗವು ದೇಹವನ್ನು ಆತ್ಮದೊಂದಿಗೆ ಒಂದುಗೂಡಿಸುವ ಅದ್ಭುತವಾದ ನೈಸರ್ಗಿಕ ಶಕ್ತಿ. ಇದು ಮಾನವನಿಗೆ ಆಂತರಿಕ ಶಾಂತಿಯನ್ನು ಪಡೆಯುವ ಶ್ರೇಷ್ಠ ಸಾಧನ.ಅಂತೆಯೇ ಮಾನವನ ಮನಸ್ಸಿನ ಮೇಲೆ ಬೀರುವ ಉತ್ತಮ ವಿಶ್ರಾಂತಿ ಪರಿಣಾಮವು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಪಡೆಯದು ಖುಷಿಯಿಂದ ಜೀವನವನ್ನು ನಡೆಸಬಹುದು. 

ಅದಕ್ಕಾಗಿಯೇ ಕೇವಲ ದೈಹಿಕ ವ್ಯಾಯಾಮದ ಅಭ್ಯಾಸಕ್ಕಿಂತ ಹೆಚ್ಚಾಗಿ, ಯೋಗವು ಅನಂತ ಸಾರ್ವತ್ರಿಕ ಪ್ರಜ್ಞೆ ಅಥವಾ ಚೈತನ್ಯದೊಂದಿಗೆ ವೈಯಕ್ತಿಕ ಸ್ವಯಂ ಅಥವಾ ಪ್ರಜ್ಞೆಯ ಒಟ್ಟುಗೂಡುವಿಕೆಯಾಗಿದೆ. ಯೋಗವು ಮನಸ್ಸಿನ ಸ್ವಭಾವದ ವಿಚಾರಣೆಯ ವಿಧಾನವಾಗಿದೆ. ಇದು ಅಭ್ಯಾಸ ಮತ್ತು ನೇರ ಅನುಭವವನ್ನು ಒತ್ತಿ ಹೇಳುತ್ತದೆ. ಯೋಗವು ದೇಹ, ಮನಸ್ಸು ಮತ್ತು ಚೇತನದ ಬೆಳವಣಿಗೆಗೆ ಸಮನ್ವಯಗೊಳಿಸುವ ವ್ಯವಸ್ಥೆಯನ್ನು ಆಧರಿಸಿದ ಪ್ರಾಚೀನ ಕಲೆಯಾಗಿದೆ. ಯೋಗವು ಉನ್ನತ ಮಟ್ಟದಲ್ಲಿ ವ್ಯಕ್ತಿತ್ವದ ವಿಕಸನವನ್ನು ಸೂಚಿಸುತ್ತದೆ. ಇದು ಯೋಗ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ವಿವಿಧ ಅಭ್ಯಾಸಗಳು ಮತ್ತು ತಂತ್ರಗಳನ್ನು ಒಳಗೊಂಡಿದೆ.ಇನ್ನು

ಯೋಗವು ದೇಹ ಮತ್ತು ಮನಸ್ಸು ಹೆಚ್ಚು ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಇದು ದೇಹದ ಕೀಲುಗಳು, ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜುಗಳಲ್ಲಿ ನಯಗೊಳಿಸುವಿಕೆಯನ್ನು ಸುಧಾರಿಸುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ ಎಲ್ಲಾ ಆಂತರಿಕ ಅಂಗಗಳು ಮತ್ತು ಗ್ರಂಥಿಗಳನ್ನು ಮಸಾಜ್ ಮಾಡುವ ದೈಹಿಕ ಚಟುವಟಿಕೆಯ ಏಕೈಕ ರೂಪವೆಂದರೆ ಯೋಗ. ಇದರ ಪರಿಣಾಮವಾಗಿ ಅನೇಕ ರೋಗಗಳು ಕಡಿಮೆಯಾಗುತ್ತವೆ. ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವ ಯಾರಾದರೂ ತಮ್ಮ ಜೀವನಶೈಲಿಯಲ್ಲಿ ಶಾಶ್ವತ ಸುಧಾರಣೆಯನ್ನು ಖಂಡಿತವಾಗಿಯೂ ಪಡೆಯುತ್ತಾರೆ.

ಅಲ್ಲದೇ ಇದು ಮನಸ್ಸನ್ನು ಶಾಂತಿಯುತವಾಗಿ 

ಏಕಾಗ್ರತೆಯಲ್ಲಿ ಇಡುತ್ತದೆ ಮತ್ತು ಸದಾ ಕಾಲ ಜೀವನಕ್ಕೆ ಚೈತನ್ಯ ಒದಗಿಸುತ್ತದೆ. ಹಾಗೆಯೇ ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಸದಾ ಸಹಾಯ ಮಾಡುತ್ತಾ ಉಸಿರಾಟ ಶಕ್ತಿ ಸುಧಾರಿಸುತ್ತದೆ. ಸ್ನಾಯುವಿನ ಶಕ್ತಿ ಮತ್ತು ದೇಹದ ಟೋನ್ ಅನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಯೋಗದ ನಿಯಮಗಳು :  

ಯೋಗ ಮಾಡಲು ಪ್ರಾರಂಭಿಸುತ್ತಿದ್ದರೆ ಕಷ್ಟಕರವಾದ ಆಸನಗಳು ಮತ್ತು ವ್ಯಾಯಾಮಗಳೊಂದಿಗೆ ಪ್ರಾರಂಭಿಸಬೇಡಿ. 

ಯೋಗ ಇದನ್ನು ಬೆಳಿಗ್ಗೆ ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಮೊದಲು ಮಾಡಬೇಕು. ಆಹಾರ ಸೇವಿಸಿದ ನಂತರ ಯೋಗವನ್ನು ಎಂದೆಂದಿಗೂ ಮಾಡಬಾರದು. ಯೋಗವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು.

ಯೋಗ ಮಾಡುವಾಗ ಸರಿಯಾಗಿ ಉಸಿರನ್ನು ಬಿಡಬೇಕೋ ಅಥವಾ ಉಸಿರಾಡಬೇಕೋ ಎಂದು ತಿಳಿದಿರಬೇಕು.ಯೋಗ ಮಾಡುವ ಸುಮಾರು 2 ರಿಂದ 3 ಗಂಟೆಗಳ ಮೊದಲು ಏನನ್ನೂ ತಿನ್ನಬಾರದು. ಯೋಗ ಮಾಡಿದ ಸುಮಾರು ಅರ್ಧ ಗಂಟೆಯ ನಂತರವೇ ಏನನ್ನಾದರೂ ತಿನ್ನಬೇಕು. ಆರಂಭಿಕ ದಿನಗಳಲ್ಲಿ ಯೋಗ ಮಾಡುವಾಗ ದೇಹದ ಭಾಗಗಳನ್ನು ಬಲವಂತವಾಗಿ ಹೇರಬಾರದು.ಶಿಸ್ತುಬದ್ಧವಾಗಿ ಯೋಗ ಮಾಡಬೇಕು. ಯೋಗದ ಅಭ್ಯಾಸವನ್ನು ತಾಳ್ಮೆಯಿಂದ ಮಾಡಬೇಕು ಮತ್ತು ತ್ವರಿತ ಫಲಿತಾಂಶಗಳನ್ನು ಬಯಸಬಾರದು.ಮೊಟ್ಟಮೊದಲು ಯೋಗ ಪ್ರಾರಂಭಿಸುವಾಗ ಯೋಗ ತಜ್ಞರಿಂದ ಮಾರ್ಗದರ್ಶನ, ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಯೋಗ ಮಾಡುವುದು ಬಹಳ ಸೂಕ್ತ ಮತ್ತು ಸಮರ್ಪಕ.

ಯೋಗದ ಉಪಯೋಗಗಳು : ಮೊದಲನೇದಾಗಿ ಮಾನವನ ಚಂಚಲತೆ ಕೊನೆಗೊಳಿಸುತ್ತದೆ. ಏಕಾಗ್ರತೆ ಹಾಗೂ ಶಾಂತತೆಯನ್ನು ತರುತ್ತದೆ.

ಸ್ನಾಯುವಿನ ನಮ್ಯತೆಯನ್ನು ಸುಧಾರಿಸಿ

ದೇಹದ ಭಂಗಿ ಮತ್ತು ಜೋಡಣೆಯನ್ನು ಸರಿಪಡಿಸುತ್ತದೆ.

ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಒದಗಿಸಿ,

ಆಂತರಿಕ ಅಂಗಗಳನ್ನು ಬಲಪಡಿಸುತ್ತದೆ.

ಆಸ್ತಮಾಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದೆ ಹಾಗೂ 

ಮಧುಮೇಹಕ್ಕೆ ರಾಮಬಾಣವಾಗಿದೆ. ಜೊತೆಗೆ 

ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ತ್ವಚೆಯ ಹೊಳಪಿನಲ್ಲಿ ಸದಾ ಕಾಲ ಸುಂದರವಾಗಿಡುತ್ತದೆ. 

ಶಕ್ತಿ ಮತ್ತು ತ್ರಾಣವನ್ನು ಉತ್ತೇಜಿಸಿ 

ಮನಸ್ಸು ಮತ್ತು ಚಿಂತನೆ ನಿಯಂತ್ರಣಕ್ಕೆ ತಂದು ನೆಮ್ಮದಿ ನೀಡುತ್ತದೆ. ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ಹೋಗಲಾಡಿಸಿ ಮನಸ್ಸನ್ನು ಶಾಂತವಾಗಿರಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡಿ ರಕ್ತ ಪರಿಚಲನೆ ಮತ್ತು ಸ್ನಾಯುಗಳ ವಿಶ್ರಾಂತಿಗೆ ಸಹಾಯ ಒದಗಿಸುತ್ತದೆ ಮತ್ತು 

ತೂಕ ಇಳಿಕೆಗೆ ಸಹಕಾರಿಯಾಗಿದೆ.ರಕ್ತಪರಿಚಲನಾ ವ್ಯವಸ್ಥೆ, ಜೀರ್ಣಕಾರಿ ಪ್ರಕ್ರಿಯೆ ಮತ್ತು ನರ ಮತ್ತು ಅಂತಃಸ್ರಾವಕ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಮನುಷ್ಯನ ಸೋಮಾರಿತನವನ್ನು ಓಡಿಸಿ, ಚೈತನ್ಯ ಮತ್ತು ಆರೋಗ್ಯಕರ ಬದುಕು ನೀಡುತ್ತದೆ. ಯೋಗಾಭ್ಯಾಸದಿಂದ ಅಸ್ತಮಾ, ರಕ್ತದೊತ್ತಡ, ಮಧುಮೇಹ ಮತ್ತು ಕೀಲು ನೋವಿನ ಅಪಾಯವು ಸಾಕಷ್ಟು ಕಡಿಮೆಮಾಡುತ್ತದೆ.

ಯೋಗ ಮಾಡುವುದರಿಂದ ಮಾನವನ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳೂ ಹುಟ್ಟುವುದಿಲ್ಲ. ಹಾಗೆಯೇ ಮನುಷ್ಯ ಧನಾತ್ಮಕವಾಗಿ ಮಾತ್ರ ಯೋಚಿಸುತ್ತಾನೆ.

ಯೋಗ ಮಾಡುವ ವ್ಯಕ್ತಿಯು ಯಾವಾಗಲೂ ಒತ್ತಡದಿಂದ ಮುಕ್ತನಾಗಿ ಸಂತೋಷವಾಗಿರುತ್ತಾನೆ. ಅಲ್ಲದೆ

ಯೋಗವು ಮನುಷ್ಯನನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುವುದಲ್ಲದೆ ಅವನಲ್ಲಿ ಉತ್ತಮ ಚಿಂತನೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಹಾಗೆ ನೋಡಿದರೆ ಇಂದಿನ ಓಡಾಟದ ಬದುಕಿನಲ್ಲಿ ವಿಜ್ಞಾನದ ಪ್ರಗತಿಯಿಂದಾಗಿ ಮಾನವನ ಬದುಕು ಯಂತ್ರಗಳ ಮೇಲೆ ಅವಲಂಬಿತವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು ಸವಾಲಿಗಿಂತ ಕಡಿಮೆಯಿಲ್ಲ ಎನ್ನುವುದಂತೂ ನಿಜ. ಅದಕ್ಕಾಗಿಯೇ

ಯೋಗವು ಮನುಷ್ಯನನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುವುದಲ್ಲದೆ ಅವನಲ್ಲಿ ಉತ್ತಮ ಚಿಂತನೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.

ಯೋಗವು ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಲು ಮತ್ತು ಮಾನವರ ಮನಸ್ಸು ಮತ್ತು ಭಾವನೆಗಳ ಮೇಲೆ ನಿಯಂತ್ರಣವನ್ನು ಪಡೆಯಲು ಅತ್ಯಂತ ಉಪಯುಕ್ತವಾದ ಬಹುಶಿಸ್ತಿನ ಸಾಧನವಾಗಿದೆ. ಸ್ವಯಂ ಪರಿವರ್ತನೆ ಮತ್ತು ದೈಹಿಕ ಯೋಗಕ್ಷೇಮಕ್ಕೆ ಇದು ಅತ್ಯಂತ ಜನಪ್ರಿಯ ಸಾಧನವಾಗಿ,ಮನಸ್ಸು ಮತ್ತು ದೇಹದ ಸಮಗ್ರ ಆರೋಗ್ಯಕ್ಕೆ ಚೇತನ್ ಮಾಹಾ ಶಕ್ತಿಯಾಗಿದೆ.ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸ್ಥಾಪಿಸುವುದು ಯೋಗದ ಪ್ರಮುಖ ಗುರಿಯಾಗಿ ಕೆಲಸ ಮಾಡುತ್ತದೆ. ಹೀಗೆ ಈ ಎಲ್ಲಾ ಮೇಲಿನ ರೀತಿ ಯೋಗದ ಉಪಯೋಗಗಳು ಪಡೆದುಕೊಂಡು ಮಾನವ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬಹುದು. 

ಆತ್ಮ ತೃಪ್ತಿ ಯೋಗ: ಮನುಷ್ಯ ಎಷ್ಟೆಲ್ಲ ಬೆಳೆದರೂ, ಎಷ್ಟೆಲ್ಲ ಸಾಧನೆ ಮಾಡಿದರು, ವಿಶೇಷವಾಗಿ ಆಧುನಿಕ ಯುಗದ ಈಗಿನ ಕಾಲದಲ್ಲಿಯೂ ಮನುಷ್ಯನು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ್ದರೂ ಮತ್ತು ಅನೇಕ ರೀತಿಯ ರೋಗಗಳನ್ನು ಗೆದ್ದಿದ್ದರೂ ಸಹ ಅದು ಅವನಿಗೆ ಸಾಕಷ್ಟು ಮಾನಸಿಕವಾಗಿ ಘಾಸಿಗೊಳಿಸಿ, ಅಶಾಂತಿಯಲ್ಲಿಟ್ಟಿದೆ ಎನ್ನುವುದಂತೂ ಸತ್ಯ. ಅದಕ್ಕಾಗಿಯೇ ಮಾನವರಿಗೆ ಆತ್ಮ ತೃಪ್ತಿ ಅನ್ನುವುದು ದೂರದ ಮಾತಾಗಿದೆ. ಆದಕಾರಣ ಈಗಲಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುವಂತ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ. ಅದಕ್ಕಾಗಿಯೇ ಪ್ರಸ್ತುತ ವಾತಾವರಣದಲ್ಲಿ, ಯೋಗವು ಮಾನವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಗಾಗಿಯೇ 

ಆರೋಗ್ಯವಂತ ವ್ಯಕ್ತಿಯು ತನ್ನ ಜೀವನದಲ್ಲಿ ಬಹಳಷ್ಟು ಲಾಭವನ್ನು ಗಳಿಸಬಹುದು ಆದರೆ ಆರೋಗ್ಯಕರ ಪೂರ್ಣ ಜೀವನವನ್ನು ನಡೆಸಲು ನಿಯಮಿತ ಯೋಗವು ತುಂಬಾ ಅಗತ್ಯವಾಗಿರುವ ಕಾರಣದಿಂದ ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದು ಸೂಕ್ತವಾಗಿದೆ. ಇನ್ನು 

ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಬಿಪಿ, ಶುಗರ್, ಹಾರ್ಟ್ ಸಮಸ್ಯೆ, ಅಸ್ತಮಾ ಸಮಸ್ಯೆಗಳು ಸೇರಿದಂತೆ ಇನ್ನಿತರ ರೋಗಗಳಿಂದ 

ನರಳುತ್ತಿದ್ದಾರೆ. ಇದಕ್ಕೆಲ್ಲ ಉತ್ತಮ ಪರಿಹಾರ ಎಂದರೆ ಯೋಗ. ಈ ಯೋಗವು ದಿನನಿತ್ಯ 

ಸುಮಾರು 20 ರಿಂದ 30 ನಿಮಿಷಗಳ ಕಾಲ ಯೋಗವನ್ನು ಮಾಡುವ ಮೂಲಕ ನೂರಾರು ಸಮಸ್ಯೆಗಳನ್ನು ಬರೆದಂತೆ ನೋಡಿಕೊಳ್ಳಬಹುದು. ಈ ತನ್ಮೂಲಕ ಆತ್ಮ ತೃಪ್ತಿ ಜೀವನ ನಡೆಸಬಹುದಾಗಿದೆ.

ಆರೋಗ್ಯಯುತ ಜೀವನಕ್ಕೆ ಯೋಗ ರಾಮಬಾಣದಂತೆ ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ 21ನೇ ಶತಮಾನದಲ್ಲಿ ಯೋಗಕ್ಕೆ ಬಹು ಬೇಡಿಕೆ ಇದೆ. ಹೆಚ್ಚು ಮಹತ್ವಪೂರ್ಣ ಪಡೆದುಕೊಂಡಿದೆ.

ಕೊನೆಯ ಮಾತು : ಯಂತ್ರಗಳ ಅವಲಂಬನೆ ಮತ್ತು ಕಾರ್ಯನಿರತತೆಯಿಂದಾಗಿ ಇಂದು ಮಾನವ ದೇಹವು ಒತ್ತಡ, ಆಯಾಸ ಸೇರಿದಂತೆ ಇನ್ನಿತರ ರೋಗಗಳ ಗೂಡಾಗಿದೆ. ಮಾನವ ಇಂದು ಎಲ್ಲಾ ರೀತಿಯ ಸೌಕರ್ಯಗಳನ್ನು ಗಳಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ರೋಗಿಯಾಗಿದ್ದಾನೆ. ಈ ರೋಗವನ್ನು ಹೊಡೆದೋಡಿಸಲು ಸೂಕ್ತವಾದಂತ ಚಿಕಿತ್ಸೆ ಎಂದರೆ ಅದುವೇ ಯೋಗ, ಈ ಯೋಗದಿಂದ ಮಾನವ ತನ್ನ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ತಿಲಾಂಜಲಿ ಹೇಳಿ ಭಯಮುಕ್ತ ಜೀವನವನ್ನು ನಡೆಸಲು ಸಾಧ್ಯವಾಗಬಹುದಾಗಿದೆ.

ಲೇಖಕರು : ಸಂಗಮೇಶ ಎನ್ ಜವಾದಿ

ಬರಹಗಾರರು, ಪರಿಸರ ಸಂರಕ್ಷಕರು, ಹೋರಾಟಗಾರರು.

9663809340.