ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಮುಖ್ಯಮಂತ್ರಿ ಜವಾಬ್ದಾರಿ ನೀಡಬೇಕು - ಸಂಗಮೇಶ ಎನ್ ಜವಾದಿ.

ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಮುಖ್ಯಮಂತ್ರಿ ಜವಾಬ್ದಾರಿ ನೀಡಬೇಕು - ಸಂಗಮೇಶ ಎನ್ ಜವಾದಿ.

ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಮುಖ್ಯಮಂತ್ರಿ ಜವಾಬ್ದಾರಿ ನೀಡಬೇಕು - ಸಂಗಮೇಶ ಎನ್ ಜವಾದಿ. 

ಬೀದರ/ಚಿಟಗುಪ್ಪಾ : ಕರ್ನಾಟಕ ರಾಜ್ಯದ ಭವಿಷ್ಯದ ನಾಯಕರು, ಬಡವರ ಬಂಧು, ರೈತರ ಆಶಾಕಿರಣ, ವಿಜಯಪುರ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಯುವಕರ ಕಣ್ಮಣಿ, ಜನಸಾಮಾನ್ಯರ ಪ್ರೀತಿಯ ಅಕ್ಕರೆಯ ಜನನಾಯಕರಾದ ಶ್ರೀ ಎಂ ಬಿ ಪಾಟೀಲರಿಗೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು.

ಈ ಜವಾಬ್ದಾರಿ ನಿಭಾಯಿಸುವಂತಹ ಶಕ್ತಿ ಶ್ರೀ ಎಂ ಬಿ ಪಾಟೀಲರಿಗೆ ಖಂಡಿತವಾಗಿಯೂ ಇದೆ.

ಈ ಕೂಡಲೇ ಇವರನ್ನು ಆದಷ್ಟು ಬೇಗನೆ ಈ ಘನ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಸಾಹಿತಿ, ಸಾಮಾಜಿಕ ಸೇವಕರು, ಪರಿಸರವಾದಿ ಸಂಗಮೇಶ ಎನ್ ಜವಾದಿಯವರು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಗಮೇಶ ಎನ್ ಜವಾದಿ ರವರು ಕಳೆದ ಅವಧಿಗಳಲ್ಲಿ ಬಬಲೇಶ್ವರ ಕ್ಷೇತ್ರ ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಸಾಗಿಸುತ್ತಿದ್ದಾರೆ, ನಿಸ್ವಾರ್ಥದಿಂದ ಜನ

ಸೇವೆಗೈದು, ಜನಸಾಮಾನ್ಯರಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಗತಿಪರ ಚಿಂತಕರಾಗಿ, ವೈಜ್ಞಾನಿಕ ಶಿಕ್ಷಣದ ಅಭಿವೃದ್ಧಿಯ ಹರಿಕಾರರಾಗಿ, ಈದಿಗ ಆರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ವಸತಿ ಸೇರಿದಂತೆ ಹಲವು ಕ್ಷೇತ್ರಗಳ ಉನ್ನತಿಗಾಗಿ ಯೋಜನೆಗಳನ್ನು ತಂದು ಬಬಲೇಶ್ವರ ಕ್ಷೇತ್ರ ,ವಿಜಯಪುರ ಜಿಲ್ಲೆ, ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. 

ಅಂತೆಯೇ ಉತ್ತಮ ಸಂಘಟಕರಾಗಿ, 

ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವ ಕೀರ್ತಿಗೆ ಇವರಿಗೆ ಸಲ್ಲುತ್ತದೆ. ಲಿಂಗಾಯತ ಧರ್ಮದ ಪ್ರಬಲ ನಾಯಕರು ಹೌದು,ಸರ್ವ ಜನಾಂಗದ ಪ್ರೀತಿಯ ನೇತಾರರು ಹೌದು. ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿ, ಕರುನಾಡಿನಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಿದ್ದಾರೆ.

ಈಗ ನೀಡಿರುವ ಸಚಿವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ, ಜನರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ , ಬಡವರಿಗೆ, ನೊಂದವರಿಗೆ ನೆರವು ನೀಡಿ,ಜನ ಮೆಚ್ಚಿನ ಸಚಿವರಾಗಿದ್ದಾರೆ. 

ಇವರ ಸಂಘಟನಾ ಸಾಮರ್ಥ್ಯದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದು ಇಂದಿನ ಕಾಂಗ್ರೆಸ್ ಹೈಕಮಾಂಡ್ ಯಾವತ್ತೂ ಮರೆಯಬಾರದು. 

ಅದಕ್ಕಾಗಿಯೇ ಇವರು ಸೂಕ್ತ ಮತ್ತು ಯೋಗ್ಯ, ಸಮರ್ಥ ಉತ್ಸಾಹಿ ವ್ಯಕ್ತಿತ್ವದವರಾಗಿದ್ದು.

ಕರ್ನಾಟಕ ರಾಜ್ಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ 

ಸುರಕ್ಷಿತ ಕರುನಾಡಿನ ಅಭ್ಯುದಯದ ಏಳಿಗೆಗಾಗಿ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಈ ತಕ್ಷಣವೇ ಕರ್ನಾಟಕ ರಾಜ್ಯದ 

ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವ. ಮುಖಾಂತರ ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಹೈಕಮಾಂಡ್ ಸಹಕಾರ ನೀಡಬೇಕು.

ನೀಡುವುದರಿಂದ ಪಕ್ಷ ಇನ್ನುಷ್ಟು ನಾಡಿನಾದ್ಯಂತ ಬಲಿಷ್ಠವಾಗಿ ಸಂಘಟನೆ ಆಗುತ್ತದೆ. ಹಾಗೆಯೇ 

ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಸಮರ್ಥವಾಗಿ ಎದುರಿಸುತ್ತಾರೆ. 

ಕಾರಣ ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರನ್ನು ಆಯ್ಕೆ ಮಾಡಬೇಕು. ಈ ಮೂಲಕ ಉತ್ತರ ಕರ್ನಾಟಕಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು , ಪರಿಸರ ಸಂರಕ್ಷಕರಾದ ಸಂಗಮೇಶ ಎನ್ ಜವಾದಿ ಯವರು ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ರವರಿಗೆ ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಯವರೆಗೆ ಒತ್ತಾಯಿಸಿ,ವಿನಂತಿಸಿದ್ದಾರೆ.