ಗಿರಿನಾಡು ಜಿಲ್ಲೆಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಭಾರತೀಯ ಸಾಹಿತ್ಯ ರತ್ನ ರಾಷ್ಟ್ರ ಪ್ರಶಸ್ತಿ

ಗಿರಿನಾಡು ಜಿಲ್ಲೆಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಭಾರತೀಯ ಸಾಹಿತ್ಯ ರತ್ನ ರಾಷ್ಟ್ರ ಪ್ರಶಸ್ತಿ
ಯಾದಗಿರಿ:- ಕಲ್ಯಾಣ ಕರ್ನಾಟಕದ (ಯಾದಗಿರಿ) ಗಿರಿನಾಡು ಜಿಲ್ಲೆಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ರ ಒಟ್ಟು ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಅವರಿಗೆ ಜೀವಮಾನದ ಸಾಧನೆಗಾಗಿ ಅನ್ವೇಷಣೆ ಸಾಹಿತ್ಯ ಅಕಾಡೆಮಿ (ರಿ) ಬೆಂಗಳೂರು ಅವರು *ಭಾರತೀಯ ಸಾಹಿತ್ಯ ರತ್ನ ರಾಷ್ಟ್ರ ಪ್ರಶಸ್ತಿ* ಯನ್ನು ದಿನಾಂಕ ೨೦-೬-೨೦೨೫ ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಇರುವ ನಯನ ಸಭಾಂಗಣದಲ್ಲಿ ಅತಿಥಿ ಗಣ್ಯರು ನೀಡಿ ಗೌರವಿಸಲಿದ್ದಾರೆ
ಈ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಲ್.ಗುರುರಾಜ ಆಚಾರ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೇಖಕ ರಾಗಂ ಅವರು ಅಧ್ಯಕ್ಷತೆ ವಹಿಸಿಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಶ್ರೀ ದಿನೇಶ ಗುರೂಜಿ,ಹಾಗೂ ನೂರಾರು ಚಲನಚಿತ್ರಗಳ ನಿರ್ದೇಶಕರಾದ ಸಾಯಿ ಪ್ರಕಾಶ್ ಅವರು ಮಾಡಲಿದ್ದು ,ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಬೇಲೂರು ರಾಮಮೂರ್ತಿ,ಖ್ಯಾತ ಕಾದಂಬರಿಕಾರ ಕೌಂಡಿನ್ಯ , ಖ್ಯಾತ ಜ್ಯೋತಿಷಿಗಳಾದ ಶ್ರೀಮತಿ ಶಾರದಾ ಮಣಿಯವರು ಹಾಗೂ ಲೇಖಕ ಮತ್ತು ಪ್ರಶಸ್ತಿ ಪುರಸ್ಕೃತ ಡಾ.ಸಿದ್ಧರಾಮ ಹೊನ್ಕಲ್ ಭಾಗವಹಿಸಲಿದ್ದಾರೆಂದು
ಅನ್ವೇಷಣೆ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಚಲನಚಿತ್ರ ನಿರ್ದೇಶಕರು,ಲೇಖಕರು, ಕರ್ನಾಟಕ ಸರ್ಕಾರದ ಉನ್ನತ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ಆದ ಭದ್ರಾವತಿ ರಾಮಾಚಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
.