ಸಾಹಿತ್ಯದಲ್ಲಿ 'ಸ್ವ'ತ್ವ – ಡಾವಣಗೆರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಜ್ಯ ಅಧಿವೇಶನ

ಸಾಹಿತ್ಯದಲ್ಲಿ 'ಸ್ವ'ತ್ವ ಡಾವಣಗೆರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಜ್ಯ ಅಧಿವೇಶನ
ದಾವಣಗೆರೆ: ಕಳೆದ ಎರಡು ದಿನಗಳಿಂದ ದಾವಣಗೆರೆ ನಗರದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಶಾಖೆಯ ನಾಲ್ಕನೇ ರಾಜ್ಯ ಅಧಿವೇಶನ "ಸಾಹಿತ್ಯದಲ್ಲಿ 'ಸ್ವ'ತ್ವ" ಎಂಬ ವಿಷಯಾಧಾರಿತವಾಗಿತ್ತು. ಈ ಬಾರಿಯ ಅಧಿವೇಶನವು ಕನ್ನಡ ಸಾಹಿತ್ಯದ ವೈಶಿಷ್ಟ್ಯತೆ ಮತ್ತು 'ಸ್ವತಂತ್ರ' ಚಿಂತನೆಯೆಡೆಗೆ ಹೆಚ್ಚಿನ ಗಮನ ಹರಿಸಿತು.
ಅಧಿವೇಶನದ ಸಮ್ಮೇಳನ ಅಧ್ಯಕ್ಷರಾಗಿ ಶ್ರೀ ಎಸ್. ಜಿ. ಕೋಟಿಯವರು ಕಾರ್ಯನಿರ್ವಹಿಸಿದರು. ಹೆಸರಾಂತ ವಿದ್ವಾಂಸರು ಮತ್ತು ಚಿಂತಕರು, ಡಾ. ವಿ. ರಂಗನಾಥ್ ಹಾಗೂ ಡಾ. ಶಿವಶರಣ ಗೋಡ್ರಾಳ ಅವರು ತಮ್ಮ ಅಧ್ಯಯನಮಯ ಭಾಷಣಗಳ ಮೂಲಕ ಸಾಹಿತ್ಯದ ಸ್ವಾತಂತ್ರತೆ, ಭಾರತೀಯತೆಯ ಮೌಲ್ಯಗಳು ಮತ್ತು ಸ್ಥಳೀಯ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು. ಶ್ರೀ ರಘುನಂದನಜಿಯವರು ತಮ್ಮ ಉಜ್ವಲ ಭಾಷಣದಲ್ಲಿ ಧರ್ಮ, ಸಂಸ್ಕೃತಿ ಹಾಗೂ ಭಾಷಾ ಸಂವೇದನೆಗಳ ಅನ್ವಯವನ್ನು ದಾಖಲಿಸಿದರು.
ಈ ಅಧಿವೇಶನದಲ್ಲಿ ಕಲಬುರಗಿಯ ಸಂಗಮೇಶ ಎಸ್. ಹಿರೇಮಠ ಅನೇಕ ಸಾಹಿತ್ಯಾಸಕ್ತರು, ವಿದ್ವಾಂಸರು, ವಿದ್ಯಾರ್ಥಿಗಳು ಹಾಗೂ ಲೇಖಕರು ಭಾಗವಹಿಸಿ, ವಿಚಾರ ವಿನಿಮಯದಲ್ಲಿ ತೊಡಗಿದರು. "ಸಾಹಿತ್ಯದಲ್ಲಿ 'ಸ್ವ'ತ್ವ" ಎಂಬುದು ಕೇವಲ ವಿಷಯವಷ್ಟೇ ಅಲ್ಲದೇ, ನವಚಿಂತನದೊಂದಿಗೆ ಭಾರತೀಯ ಪರಂಪರೆಯ ಸ್ಮರಣೆಗೂ ಬಲ ನೀಡಿತು.
-