ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ರವರ ಜನ್ಮ ದಿನದ ಪ್ರಯುಕ್ತ ಸಾಧನೆಯ ಹೆಜ್ಜೆಯ ಗುರುತು ಪುಸ್ತಕ ಬಿಡುಗಡೆ ಸಮಾರಂಭ

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ರವರ ಜನ್ಮ ದಿನದ ಪ್ರಯುಕ್ತ ಸಾಧನೆಯ ಹೆಜ್ಜೆಯ ಗುರುತು ಪುಸ್ತಕ ಬಿಡುಗಡೆ ಸಮಾರಂಭ
ಕಲಬುರಗಿ: ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ರವರ ಜನ್ಮ ದಿನದ ಪ್ರಯುಕ್ತ ಸಾಧನೆಯ ಹೆಜ್ಜೆಯ ಗುರುತು ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಲಬುರಗಿ ನಗರದ ಮಧುರ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರ 72ನೇ ಜನ್ಮ ದಿನೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರ ಹುಟ್ಟು ಹಬ್ಬಕ್ಕೆ ಕಲಬುರಗಿಯ ಮಠಾಧೀಶರು ರಾಜಕೀಯ ಗಣ್ಯಾತಿಗಣ್ಯ ವ್ಯಕ್ತಿಗಳು ಕೋಲಿ ಸಮಾಜದ ಮುಖಂಡರು ಸೇರಿದಂತೆ ಅನೇಕ ಜನರು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಜನ್ಮ ದಿನದ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸುಲಫಲ್ ಮಠದ ಮಹಾಂತ ಶಿವಾಚಾರ್ಯರು, ಉದ್ಯಮಿ ಉಮೇಶ ತಳವಾರ, ಪಿ.ಐ ಕುಬೇರ ರಾಯಮಾನ್, ಮುಖಂಡರಾದ ಅರ್ಜುನ ಹಾವನೂರ, ರಮೇಶ ನಾಟೀಕಾರ, ಅರ್ಜುನ ಹಾವನೂರ, ವಿಜಯಕುಮಾರ ಹದಗಲ, ಅನೀಲ ಕೂಡಿ, ಶರಣಪ್ಪ ನಾಟೀಕಾರ, ಪವನ ವಳಕೇರಿ, ಕೃಷ್ಣ ರೆಡ್ಡಿ, ಸಂಗಮೇಶ ನಾಗನಹಳ್ಳಿ ಸೇರಿದಂತೆ ಇತರರು ಇದ್ದರು
.