ಮಲ್ಲಣ್ಣ ಬಿ. ಪೋಲೀಸ್ ಪಾಟೀಲ ಅವರ ವೈಯ್ಯೋ ನಿವೃತ್ತಿ ಸಮಾರಂಭಕ್ಕೆ ಜರುಗಿತು

ಮಲ್ಲಣ್ಣ ಬಿ. ಪೋಲೀಸ್ ಪಾಟೀಲ ಅವರ ವೈಯ್ಯೋ ನಿವೃತ್ತಿ ಸಮಾರಂಭಕ್ಕೆ ಜರುಗಿತು

ಮಲ್ಲಣ್ಣ ಬಿ. ಪೋಲೀಸ್ ಪಾಟೀಲ ಅವರ ವೈಯ್ಯೋ ನಿವೃತ್ತಿ ಸಮಾರಂಭಕ್ಕೆ ಜರುಗಿತು 

ಗುಲ್ಬರ್ಗ: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಜಾಗೃತ ದಳದ ಸಹಾಯಕರಾದ ಮಲ್ಲಣ್ಣ ಬಿ. ಪೊಲೀಸ್ ಪಾಟೀಲ ಅವರ ವೈಯ್ಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭವು ಕೆಇಬಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಷನ್ ಉಪಾಧ್ಯಕ್ಷ ಸಂತೋಷ್ ವಡಕಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡುತ್ತಾ, *“ಪ್ರತಿಯೊಬ್ಬ ಸರ್ಕಾರಿ ನೌಕರನು ನಿವೃತ್ತಿಯ ಕೊನೆಯ ಹಂತದಲ್ಲಿ ತನ್ನ ಸೇವೆಯ ಗೌರವವನ್ನು ಗಳಿಸಬೇಕು. ಮಲ್ಲಣ್ಣ ಪಾಟೀಲ ಅವರು ತಮ್ಮ ಸೇವಾ ಕಾಲದಲ್ಲಿ ನೌಕರರ ಹಾಗೂ ಅಧಿಕಾರಿಗಳ ಪ್ರೀತಿಗೆ ಪಾತ್ರರಾದ ಅತ್ಯಂತ ಶ್ರದ್ಧಾ ನಿರತರಾಗಿದ್ದರು”* ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಜಗ್ಗಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ 659 ನೌಕರ ಸಂಘದ ಉಪಾಧ್ಯಕ್ಷ ಮನೋಹರ, ಜಾಗೃತ ದಳದ ಪಿ.ಎಸ್.ಐ. ರಾಜಕುಮಾರ ಜಾಮಗೊಂಡ, ಸಂಘದ ಮುಖಂಡರು ಬಾಬು ಕೋರೆ, ಬಿ.ಆರ್. ಬುದ್ದಾ, ಬನ್ನಪ್ಪ, ಬಾಬಾ ಸಾಹೇಬ್ ಪಾಟೀಲ, ಸಾಯಬಣ್ಣಾ ಕಾಳೆ, ಲೆಕ್ಕಾಧಿಕಾರಿ ಶ್ರೀನಿವಾಸ್, ಸಂಗಯ್ಯ ಸ್ವಾಮಿ, ಸುಬಾಷ್ ಪಪ್ಪ, ಅಮೃತ ಅಲ್ಲಾಪುರ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಮತಿ ಸುಲೋಚನ ಮಲ್ಲಣ್ಣ ಪೋ.ಪಾಟೀಲ ದಂಪತಿಗಳಿಗೆ ವೃತ್ತ ಕಚೇರಿ ಅಧಿಕಾರಿಗಳು ಮತ್ತು ನೌಕರರು ಸನ್ಮಾನ ಮಾಡಿ ಗೌರವಪೂರ್ವಕವಾಗಿ ಚೆಕ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಭೀಮರಾವ ಕೊಳ್ಳುರ, ವಿಶ್ವನಾಥ ಪಾಟೀಲ, ನಾಗರಾಜ ಅಲ್ಲಮ, ಗಜೇಂದ್ರ ಮಿಂಚ, ಶಿವಕುಮಾರ್ ಬಿರಾದರ, ರಾಜೇಂದ್ರ ಬಸ್ತಿ, ಶಿವಾನಂದ ಕಾಮನಳ್ಳಿ, ಶರಣಬಸಪ್ಪ ಅಸ್ಟಗಿ, ಬಸವರಾಜ್ ದಲ್ಲು, ಕರುಣೇಶ್ ಕಾಳೆ, ಮಾಂತಯ್ಯ ಸ್ವಾಮಿ, ಶಾಂತು ಪಾಟೀಲ, ಶಿವಕುಮಾರ ಚವಕಿಮಠ, ಸಂಪತಕುಮಾರ್ ಪಾಟೀಲ, ಕವಿಪ್ರನಿನಿ / ಜೆಸ್ಕಾಂ ನೌಕರರು ಉಪಸ್ಥಿತರಿದ್ದರು.

ಪ್ರಾರ್ಥನೆ ಗೀತೆಯನ್ನು ಶ್ರೀ ಶಂಕರ ಐಗಳಿ ನಿರ್ವಹಿಸಿದರು. ಸಾಯಬಣ್ಣಾ ಹೂಗಾರ ಅವರು ಸಮಾರಂಭದ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗುಂಡೆರಾಯ ಕುಂಬಾರ ಕೈಗೊಂಡರು, ವಂದನಾರ್ಪಣೆಯ ಕಾರ್ಯವನ್ನು ರಮೇಶ ಹತಗುಂದಿ ನಿರ್ವಹಿಸಿದರು.