ವಾಡಿಯಲ್ಲಿ ಮಾಜಿ ಬಿಜೆಪಿ ಅಧ್ಯಕ್ಷರಿಗೆ ಶ್ರದ್ಧಾಂಜಲಿ

ವಾಡಿಯಲ್ಲಿ ಮಾಜಿ ಬಿಜೆಪಿ ಅಧ್ಯಕ್ಷರಿಗೆ ಶ್ರದ್ಧಾಂಜಲಿ
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡ,ವಾಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಸದಸ್ಯರಾದ ರಾಮಚಂದ್ರರಡ್ಡಿ ಮುನಿಯಪ್ಪ ದಾಸ್ ಅವರಿಗೆ ಬಿಜೆಪಿ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ನಮ್ಮ ಪಕ್ಷದ ಧೀಮಂತ ನಾಯಕರಾಗಿ ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ, ನಮ್ಮ ಮಾಜಿ ಶಾಸಕರಾಗಿದ್ದ ವಾಲ್ಮೀಕ ನಾಯಕ ಅವರ ಜೊತೆ ಪಕ್ಷ ಸಂಘಟನೆಗೆ ಶ್ರಮಿಸಿದ್ದ ರಾಮಚಂದ್ರರಡ್ಡಿ ಅವರು ಅನಾರೋಗ್ಯದಿಂದ ಬುಧವಾರ ನಮ್ಮನ್ನು ಅಗಲಿದ್ದು ತುಂಬಾ ದುಃಖವಾಗಿದೆ ಎಂದರು.
ನಮ್ಮಲ್ಲಿ ಪಕ್ಷದ ಸಂಘಟನೆಯು ಏಳುಬೀಳುಗಳಿಂದ ಸಾಗುತ್ತಿದ್ದ ಸಂಧರ್ಭದಲ್ಲಿ ನಮ್ಮಂತ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡುತ್ತಿದ್ದರು. ಇನ್ಮೊಂದೆ
ಪಕ್ಷದ ಸಂಘಟನೆಯಲ್ಲಿ ಇವರ ಅನುಪಸ್ಥಿತಿ ಸದಾ ಕಾಡುತ್ತದೆ.
ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ನಮ್ಮಂತ ಪಕ್ಷದ ಕಾರ್ಯಕರ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿ, ಎರಡು ನಿಮಿಷ ಮೌನಾಚರಣೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ತಾಲ್ಲೂಕು ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ,ವಾಡಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್ ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ಭೀಮರಾವ ದೊರೆ,ಅಂಬದಾಸ ಜಾಧವ,ರಿಚರ್ಡ್ ಮಾರೆಡ್ಡಿ, ಮಲ್ಲಿಕಾರ್ಜುನ ಸಾತಖೇಡ,ಚಂದ್ರಶೇಖರ ಪಾಟೀಲ ಬಣಮಗಿ,
ಸತೀಶ್ ಸಾವಳಗಿ, ಬಸವರಾಜ ಪಗಡಿಕರ್,ಬಾಲರಾಜ ಪಗಡಿಕರ್,ಮಹಾದೇವ ಹಡಪದ,ಅಹಮದ್ ಪಟೇಲ್ ಸೇರಿದಂತೆ ಇತರರು ಇದ್ದರು.