"ಒಳ ಮೀಸಲಾತಿ ಜಾತಿ ಸಮೀಕ್ಷೆ: ಹೆಚ್ ಸಮುದಾಯದವರಿಗೆ 'ಹೊಲೆಯ' ಎಂದು ನಮೂದಿಸಬೇಕೆಂದು ಸುಬೇದಾರ ರೇವಣಸಿದ್ದಪ್ಪ ಆಗ್ರಹ"

ಮೇ 5 ರಿಂದ 3 ಹಂತದ ಒಳ ಮೀಸಲಾತಿ ಜಾತಿ ಸಮೀಕ್ಷೆಗೆ ಮನೆಗಳಿಗೆ ಅಧಿಕಾರಿಗಳ ಭೇಟಿ 

ಹೆಚ್ ಸಮುದಾಯಕ್ಕೆ ಸೇರಿದವರು ಜಾತಿ ಕಾಲಂನಲ್ಲಿ ‘ಹೊಲೆಯ’ ಎಂದು ನಮೂದಿಸಿ : ರೇವಣಸಿದ್ದಪ್ಪ ಸುಬೇದಾರ ಆಗ್ರಹ 

ಚಿಂಚೋಳಿ : ಇದೇ ಮೇ 5 ರಿಂದ 17 ರವರೆಗೆ ಸರಕಾರ ಕೈಗೊಂಡಿರುವ ಒಳ ಮೀಸಲಾತಿ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ (ಹೆಚ್)ಸಮಾಜಕ್ಕೆ ಒಳಪಟ್ಟ ಜನಾಂಗದವರು ಪಾಲ್ಗೊಂಡು ಮೂಲ ಜಾತಿ ‘ಹೊಲೆಯ’ ಎಂದು ನಮೂದಿಸಿ, ಸಂಖ್ಯಾಬಲವನ್ನು ಹೆಚ್ಚಿಸಬೇಕೆಂದು ಪರಿಶಿಷ್ಟ ಜಾತಿ (ಹೆಚ್) ಸಮಾಜದ ತಾಲೂಕ ಸಂಚಾಲಕ ರೇವಣಸಿದ್ದಪ್ಪ ಸುಬೇದಾರ ಅವರು ಮನವಿ ಮಾಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಗೌತಮ್ ಬೊಮ್ಮನಳ್ಳಿ, ಮಾರುತಿ ಗಜಂಗಿರಿ, ಆನಂದ ಟೈಗರ ಅವರು ಮಾತನಾಡಿ, ಸರಕಾರ ಒಳ ಮೀಸಲಾತಿ ಜಾರಿಗಾಗಿ ಮೇ 5 ರಿಂದ 17,23 ರವರೆಗೆ ಮೂರು ಹಂತದ ಜಾತಿ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆಗಾಗಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಹೊಲೆಯ (ಹೆಚ್) ಸಮುದಾಯಕ್ಕೆ ಸೇರಿರುವ ಜನಾಂಗದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಹೊಲೆಯ’ ಎಂದು ನಮೂದಿಸಬೇಕು. ಅಧಿಕಾರಿಗಳು ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಮನೆಯಲ್ಲಿದ್ದು ಮೂಲ ಜಾತಿ ‘ಹೊಲೆಯ’ ಎಂದು ನಮೂದಿಸದೇ ಇದ್ದಲ್ಲಿ ಜಾತಿಗೆ ಮೀಸಲಾತಿ ಪಡೆದುಕೊಳ್ಳುವಲ್ಲಿ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಬೇರೆ ಬೇರೆ ರಾಜ್ಯಗಳಿಗೆ ಒಲಸೆ ಹೋದವರನ್ನು ಮರಳಿ ಗ್ರಾಮ, ಪಟ್ಟಣಕ್ಕೆ ಕರೆಸಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಂಡು ಮೂಲ ಜಾತಿಯನ್ನು ನಮೂದಿಸಿ, ಪರಿಶಿಷ್ಟ ಜಾತಿ ‘ಹೊಲೆಯ’ (ಹೆಚ್) ಸಮುದಾಯದ ಸಂಖ್ಯಾಬಲದ ಶಕ್ತಿ ಹೆಚ್ಚಳದಲ್ಲಿ ಕಡಿಮೆಗೊಳದಂತೆ ಪ್ರಜ್ಞಾವಂತ ಅಕ್ಷರಸ್ಥರು ಗ್ರಾಮೀಣ ಭಾಗದಲ್ಲಿರುವ ಸಮುದಾಯದವರನ್ನು ಅರಿವು ಮೂಡಿಸಿ ಜಾತಿ ಸಮೀಕ್ಷೆಯಲ್ಲಿ ‘ಹೊಲೆಯ’ ಜಾತಿಯ ಸಂಖ್ಯಾ ಬಲ ಹೆಚ್ಚಳವಾಗುವಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಕೇವಲ ಪರಿಶಿಷ್ಟ ಜಾತಿಗಳು ವಾಸಿಸುವ ಓಣಿಗಳಿಗೆ ತೆರಳದೆ, ಕೆಲವರು ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಹೀಗಾಗಿ ಅಧಿಕಾರಿಗಳು ಸಾಮೋಹಿಕವಾಗಿ ಎಲ್ಲಾ ಓಣಿಗಳಿಗೆ ತೆರಳಿ ಜಾತಿ ಸಮೀಕ್ಷೆ ನಡೆಸಬೇಕು ತಾಲೂಕ ಸಮತಿ ಆಗ್ರಹಿಸಿದೆ.  

ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಶ್ರೀಮಂತ ಕಟ್ಟಿಮನಿ, ಅಮರ ಲೋಡನೂರ್, ರಾಜಶೇಖರ ಹೊಸಮನಿ, ಮಾರುತಿ ಕೊಳ್ಳೂರ, ಸೂರ್ಯಕಾಂತ, ಚೇತನ ನಿರಾಳ್ಕರ್ ಅವರು ಉಪಸ್ಥಿತರಿದರು.