ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ

ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ

ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ:

ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ 

ಶಹಾಬಾದ : - ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ, ಹಾಗಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ ಎಂದು ಮಾದಿಗ ಸಮಾಜದ ಯುವ ಮುಖಂಡ ಕಿರಣ ಕೋರೆ ಹೇಳಿದರು

ಅವರು ನಗರದ ಜಗದಂಭಾ ಮಂದಿರದ ಆವರಣದಲ್ಲಿ ಶಹಾಬಾದ ತಾಲ್ಲೂಕಿನ ಮಾದಿಗ ಸಮಾಜದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಗೊಳಿಸಿ ಮಾತನಾಡಿದರು. 

ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ, ಈ ದಿಸೆಯಲ್ಲಿ ಮಾದಿಗ ಸಮಾಜದ ತಾಲ್ಲೂಕ ಸಮಿತಿ ರಚಿಸಲಾಗಿದೆ, ಆದ್ದರಿಂದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗೆ ಸಮುದಾಯದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ತಾಲ್ಲೂಕ ಮಾದಿಗ ಸಮಾಜದ ಪದಾಧಿಕಾರಿಗಳು :

ಅಧ್ಯಕ್ಷರಾಗಿ : ವಿಕ್ರಮ ಮಾಲಗತ್ತಿ, ಗೌರವಾಧ್ಯಕ್ಷರಾಗಿ : ಕಿರಣ ಕೋರೆ, ಕಾರ್ಯಧ್ಯಕ್ಷರಾಗಿ : ಶರಣು ಪಗಲಾಪುರ, ಮನೋಹರ ಮೇತ್ರಿ, ನಾಗರಾಜ್ ಮುದ್ನಾಳ, ಬಸವರಾಜ ತುಮಕೂರ, ಪ್ರಧಾನ ಕಾರ್ಯದರ್ಶಿಯಾಗಿ : ರವಿ ಬೆಳಮಗಿ, ಮಲ್ಲೇಶಿ ಸೈದಾಪುರ, ಶ್ರೀಧರ ಕೊಲ್ಲೂರ, ನಾರಾಯಣ ಕಂದಕೂರ, ಉಪಾಧ್ಯಕ್ಷರಾಗಿ : ಅಮರ ಕೋರೆ, ಪ್ರಮೋದ್ ಮಲ್ಹಾರ, ಲಕ್ಷ್ಮಿಕಾಂತ ಬಳಿಚಕ್ರ, ಜಯರಾಮ ಭಂಡಾರಿ ಜೊತೆಗೆ 10 ಜನ ಸಹಕಾರದರ್ಶಿಗಳು ಹಾಗೂ 10ಜನ ಸಂಘಟನಾ ಕಾರ್ಯದರ್ಶಿಗಳಾಗಿ ಖಜಾಂಚಿಯಾಗಿ :ಸಂತೋಷ ಹುಲಿಯವರನ್ನ ಆಯ್ಕೆ ಮಾಡಲಾಗಿದೆ, ಕಾನೂನು ಸಲಹೆಗಾರರಾಗಿ : ಶರಣಪ್ಪ ಭಂಡಾರಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ, ಈ ಸಭೆಯಲ್ಲಿ ತಾಲ್ಲೂಕಿನ ಮಾದಿಗ ಸಮಾಜದ ಭಾಂದವರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು ಎಂದು ಅಧ್ಯಕ್ಷ ವಿಕ್ರಮ ಮಾಲಗತ್ತಿ, ಕಾರ್ಯದರ್ಶಿ ನವೀನ ಸಿಪ್ಪಿ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

ಶಹಾಬಾದ್ ವರದಿ ನಾಗರಾಜ್ ದಂಡಾವತಿ