ಮೊತ್ತೊಮ್ಮೆ ಸಮಾಜದ ಅಧ್ಯಕ್ಷರಾಗಿ ಗೆದ್ದು ಬೀಗಿದ ಅನೀಲ ಹಣಮಂತಪ್ಪ ಜಮಾದಾರ

ಮೊತ್ತೊಮ್ಮೆ ಸಮಾಜದ ಅಧ್ಯಕ್ಷರಾಗಿ ಗೆದ್ದು ಬೀಗಿದ ಅನೀಲ ಹಣಮಂತಪ್ಪ ಜಮಾದಾರ

ರಾಜಕಿಯ ನಾಯಕರ ಲೆಕ್ಕಚಾರ ತಲೆಕೆಳಗಾಗಿಸಿದ ಕೋಲಿ/ಕಬ್ಬಲಿಗ ಸಮಾಜ ಅಧ್ಯಕ್ಷರ ಚುನಾವಣೆ ಫಲಿತಾಂಶ

ಮೊತ್ತೊಮ್ಮೆ ಸಮಾಜದ ಅಧ್ಯಕ್ಷರಾಗಿ ಗೆದ್ದು ಬೀಗಿದ ಅನೀಲ ಹಣಮಂತಪ್ಪ ಜಮಾದಾರ  

ಚಿಂಚೋಳಿ :ತಾಲೂಕ ಕೋಲಿ/ಕಬ್ಬಲಿಗ ಸಮಾಜದ ಅಧ್ಯಕ್ಷರ ಆಯ್ಕೆಗೊಳಿಸಲು ಪ್ರಥಮ ಬಾರಿಗೆ ಚುನಾವಣೆ ಅಖಾಡಕ್ಕೆ ಸಮಾಜ ಇಳಿದು ವೇದಿಕೆ ಕಲ್ಪಿಸಿತ್ತು. ಅದರಂತೆ ನಿಗದಿಪಡಿಸಿದ ದಿನಾಂಕದಂತೆ ರವಿವಾರ ಪಟ್ಣದ ಚಂದಾಪೂರದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಮತದಾನದ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿತ್ತು. ತಾಲೂಕಿನಲ್ಲಿ 40 ಸಾವಿರ ಜನಸಂಖ್ಯೆ ಹೊಂದಿರುವ ಕೋಲಿ/ ಕಬ್ಬಲಿಗ ಸಮಾಜದ ಅಧ್ಯಕ್ಷರ ಗಾದಿಗೇರಲು ಮೂರು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಚುನಾವಣೆಯ ಅಖಾಡಕೆ ದುಮಿಕ್ಕಿದ್ದರು. ತಮದೇ ಚುನಾವಣೆಯ ರಣತಂತ್ರಗಳೊಂದಿಗೆ ಮತದಾರರ ಮನವಲಿಸಲು ಪ್ರಯತ್ನಿಸಿದರು. ತ್ರೀಕೋನ ಸ್ಪರ್ಧೆಗೆ ಒಳಪಟ್ಟಿದ್ದ ಸ್ಪರ್ಧೆಯಲ್ಲಿ 135 ಮತಗಳ ಅಂತರದಿಂದ ಗೆಲವು ಸಾಧಿಸಿ ಎರಡನೇ ಬಾರಿಗೆ ದೊಡ್ಡ ಸಮಾಜದ ಅಧ್ಯಕ್ಷರಾಗಿ ಅನಿಲ ಹಣಮಂತಪ್ಪ ಜಮಾದಾರ ಗೆದ್ದು ನಗೆ ಬೀಗಿದರು. ಈ ಗೆಲವು ರಾಜಕೀಯ ನಾಯಕ, ಮುಖಂಡರ ಲೆಕ್ಕಚಾರಗಳು ತಲೆಕೆಳಗಾಗಿಸಿತ್ತು. ರಾಜಕೀಯ ಮುಖಂಡರ ನೀರಿಕ್ಷೆಯಂತೆ ಅಭ್ಯರ್ಥಿ ಗೆಲವು ಸಾಧಿಸದೇ ಸೋಲುಂಡುವಂತೆ ಕಬ್ಬಲಿಗ ಸಮಾಜ ಮತ ಚಲಾಯಿಸಿ ಮೊತ್ತೋಮ್ಮೆ ಅನಿಲ ಜಮಾದಾರ ಅವರಿಗೆ ಕೈ ಹಿಡಿದು, ಸೊಳಿಸಲು ರಣತಂತ್ರ ಹಿಡಿದಿದ ಎದುರಾಳಿಗಳಿಗೆ ಬಿಸಿ ಮುಟ್ಟಿಸಿತ್ತು. ಒಟ್ಟು ಸಮಾಜದ 1084 ಮತಗಳಲ್ಲಿ 988 ಮತದಾರರು ಹಕ್ಕು ಚಲಾಯಿಸಿದರು. ಮತದಾನದ ನಂತರ ನಡೆದ 4 ಸುತ್ತಿನ ಮತ ಏಣಿಕೆಯಲ್ಲಿ ಸತತವಾಗಿ ಮುನ್ನಡೆ ಪಡೆದುಕೊಂಡ ಅನಿಲ ಜಮಾದಾರ ಅವರು 459 ಮತಗಳು ಪಡೆಯುವ ಮೂಲಕ ಎದುರಾಳಿ ಅಭ್ಯರ್ಥಿಗಳಿಗೆ ಮಣಿಸುವ ಮೂಲಕ ಗೆಲವು ತಮದಾಗಿಸಿಕೊಂಡರು. ಎರಡನೇ ಅಭ್ಯರ್ಥಿ ದೌಲಪ್ಪ ಸುಣಗಾರ 324 ಮೂರನೇ ಅಭ್ಯರ್ಥಿ ವಕೀಲ ಮಲ್ಲಪ್ಪ ಸಾಯಿಬಣ್ಣ ಕೊಟಪಳ್ಳಿ 175 ಗಳು ಪಡೆದರೆ 30 ನೋಟಾ ಹಾಗೂ ತಿರಸ್ಕೃತಗೊಂಡಿವೆ ಎಂದು ಚುನಾವಣೆಯ ನೋಡಲ್ ಅಧಿಕಾರಿ ಜಯಪ್ಪ ಚಾಪೇಲ್ ತಿಳಿಸಿ, ಅನಿಲಕುಮಾರ ಹಣಮಂತಪ್ಪ ಜಮಾದಾರ ಅವರ ಗೆಲವು ಅಧೀಕೃತವಾಗಿ ಘೋಷಿಸಿದರು. ಚುನಾವಣೆಯ ಅಧಿಕಾರಿ ರಮೇಶ ದೇಗಲ್ಮಡಿ ಅವರು ಇದ್ದರು. ಚಿಂಚೋಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಂಗಮ್ಮ ಜಿನಿಕೇರಿ ಅವರು ಶಾಂತಿಯುತ ಚುನಾವಣೆ ಮತದಾನ ನಡೆಯಲು ಪೊಲೀಸ್ ಬಂದೋಬಸ್ತ್ ಒದಗಿಸಿದರು.