ಕನ್ನಡ ಅಭಿನಂದನ ಗ್ರಂಥಸೂಚಿ' ಮತ್ತು 'ಜಾಣ್ಣುಡಿಗಳು' ಲೋಕಾರ್ಪಣೆ

ಕನ್ನಡ ಅಭಿನಂದನ ಗ್ರಂಥಸೂಚಿ' ಮತ್ತು 'ಜಾಣ್ಣುಡಿಗಳು' ಲೋಕಾರ್ಪಣೆ

ಕನ್ನಡ ಅಭಿನಂದನ ಗ್ರಂಥಸೂಚಿ' ಮತ್ತು 'ಜಾಣ್ಣುಡಿಗಳು' ಲೋಕಾರ್ಪಣೆ

 ಹಿರಿಯ ಸಾಹಿತ್ಯಾಸಕ್ತ ವೈ.ಎನ್. ಗುಂಡೂರಾವ್ ಅವರು ಸಂಪಾದಿಸಿರುವ 'ಕನ್ನಡ ಅಭಿನಂದನ ಗ್ರಂಥಸೂಚಿ' ಮತ್ತು 'ಜಾಣ್ಣುಡಿಗಳು' ಕೃತಿಗಳ ಲೋಕಾರ್ಪಣೆ ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನೆರವೇರಿತು.

ಕೃತಿಗಳನ್ನು ಪ್ರೊ. ಜಿ. ಅಶ್ವತ್ಥನಾರಾಯಣ ಹಾಗೂ ಡಾ. ಬೈರಮಂಗಲ ರಾಮೇಗೌಡ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಸಂಗ್ರಹ ಗ್ರಂಥಗಳ ಪ್ರಕಟಣೆ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಅಮೂಲ್ಯ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಆಕಾಶವಾಣಿಯ ಉದ್ಘೋಷಕಿ ಬಿ.ಕೆ. ಸುಮತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ನೇಹ ಬುಕ್ ಹೌಸ್ನ ಬಿ. ಪರಶಿವಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.