ಹಾನಗಲ್ಲ ಶ್ರೀಗಳ ಪುರಾಣ: ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ತ್ಯಾಗದಿಂದ ಕೂಡಿದ ಮಹಾಪುರಾಣ — ಚರಲಿಂಗ ಮಹಾಸ್ವಾಮಿಗಳು

ಹಾನಗಲ್ಲ ಶ್ರೀಗಳ ಪುರಾಣ: ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ತ್ಯಾಗದಿಂದ ಕೂಡಿದ ಮಹಾಪುರಾಣ — ಚರಲಿಂಗ ಮಹಾಸ್ವಾಮಿಗಳು
ಕಲಬುರಗಿ, ಜುಲೈ 25:ಸಮಾಜದ ಒಳಿತಿಗಾಗಿ ತ್ಯಾಗಮಯ ಜೀವನ ನಡೆಸಿದ ಧೀಮಂತ ಯತಿ, ವಿದ್ಯಾವಂತ ಹಾಗೂ ಸಮಾಜಸೇವಕ ಹಾನಗಲ್ಲ ಶ್ರೀಗಳ ಪುರಾಣ ಕಾರ್ಯಕ್ರಮವು ವಿದ್ಯಾನಗರದ ವೆಲ್ಫೇರ್ ಸೊಸೈಟಿಯ ಆಶ್ರಯದಲ್ಲಿ ಜುಲೈ 25ರಂದು ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು, "ಹಾನಗಲ್ಲ ಕುಮಾರ ಶಿವಯೋಗಿಗಳು ಕೇವಲ ಮಠಾಧಿಪತಿ ಅಲ್ಲ, ಸಮಾಜದ ಜಾಗೃತಿಯ ಹರಿಕಾರರು. ಅಂಧಕಾರವಿರುವೆಡೆಗೆ ಬೆಳಕು ಹರಿಸಿದವರು. ಶಿಕ್ಷಣದ ಮೂಲಕ ಸಂಸ್ಕಾರ ಬೆಳೆಸಿದವರು" ಎಂದು ಪ್ರಶಂಸಿಸಿದರು.
ಗದ್ದುಗೆ ಮಠದ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಹಾನಗಲ್ಲ ಶ್ರೀಗಳ ಪುರಾಣ ಭಕ್ತಿ, ಜ್ಞಾನ, ವೈರಾಗ್ಯ ಮತ್ತು ತ್ಯಾಗದಿಂದ ಕೂಡಿದ ಪವಿತ್ರ ಪಾಠ. ಅವರು ಮಹಿಳಾ ಸಮಾನತೆಯಿಗಾಗಿ, ಗೋಸಂರಕ್ಷಣೆಗೆ, ಶುದ್ಧ ವಿಭೂತಿ ತಯಾರಿಕೆಗೆ ಹಾಗೂ ವಚನ ಸಾಹಿತ್ಯದ ಪಾಠಶಾಲೆಗಳಿಗೆ ಮಹತ್ತರ ಕೊಡುಗೆ ನೀಡಿದವರು” ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ಸಾನ್ನಿಧ್ಯವಾಹಕರಾಗಿ ಆಗಮಿಸಿ ಶ್ರೀಗಳ ದರ್ಶನ ಪಡೆದರು.
ಪ್ರಾರಂಭದಲ್ಲಿ ಮಧು ಹಿಂದೊಡ್ಡಿ, ರೇಖಾ ಅಂಡಗಿ, ತಾರಾ ಪಾಟೀಲ, ಶ್ರೀದೇವಿ ತಂಬಾಕೆ ಪ್ರಾರ್ಥನಾ ಗೀತೆಗಳನ್ನು ಗಾನಿಸಿದರು. ಡಾ. ಗುರುರಾಜ ಮುಗಳಿ ವಂದನಾರ್ಪಣೆ ಸಲ್ಲಿಸಿದರು.
ಸಭೆಗೆ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಿತಿಯ ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಉದಯಕುಮಾರ ಪಡಶೆಟ್ಟಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ ಜೊತೆಗೆ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಮತ್ತು ಮಲ್ಲಿಕಾರ್ಜುನ ತರುಣ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.