ಕೆದಾರನಾಥ್ನಲ್ಲಿ ಭೀಕರ ಹೆಲಿಕಾಪ್ಟರ್ ಪತನ: 23 ತಿಂಗಳ ಮಗು ಸೇರಿದಂತೆ ಏಳು ಮಂದಿ ದುರ್ಮರಣ

ಕೆದಾರನಾಥ್ನಲ್ಲಿ ಭೀಕರ ಹೆಲಿಕಾಪ್ಟರ್ ಪತನ: 23 ತಿಂಗಳ ಮಗು ಸೇರಿದಂತೆ ಏಳು ಮಂದಿ ದುರ್ಮರಣ
ಗೌರಿಕುಂಡ್ (ಉತ್ತರಾಖಂಡ), ಜೂನ್ 15:ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಭೀಕರ ಘಟನೆ ಸಂಭವಿಸಿದ್ದು, ಕೇದಾರನಾಥ್ ಯಾತ್ರೆಯ ಮಾರ್ಗದ ಗೌರಿಕುಂಡ್ ಬಳಿ ಇಂದು ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಹೆಲಿಕಾಪ್ಟರ್ ಪತನಗೊಂಡಿದೆ. ಈ ದುರಂತದಲ್ಲಿ 23 ತಿಂಗಳ ಮಗು ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ.
ಹೆಲಿಕಾಪ್ಟರ್ ಪತನಗೊಂಡಿದ್ದು ಆರ್ಯನ್ ಏವಿಯೇಷನ್ ಕಂಪನಿಗೆ ಸೇರಿದದ್ದು ಎನ್ನಲಾಗಿದೆ. ಹವಾಮಾನ ವೈಪರೀತತೆ ಇದಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಪತನದ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಪಡೆಗಳನ್ನು ರವಾನಿಸಲಾಗಿದ್ದು, ಶೋಧ ಕಾರ್ಯ ಮುಂದುವರಿಯುತ್ತಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಹಾಗೂ ನೋಡಲ್ ಅಧಿಕಾರಿ ರಾಹುಲ್ ಚೌಬೆ ಅವರು ಘಟನೆಯನ್ನು ದೃಢಪಡಿಸಿದ್ದಾರೆ. ಈ ದುರಂತವನ್ನು ಸ್ಥಳೀಯ ರೈತ ಮಹಿಳೆಯೊಬ್ಬರು ನೋಡಿದ್ದಾರೆ ಎಂದು ತಿಳಿದು ಬಂದಿದೆ. ಅವರು ತಮ್ಮ ಜಾನುವಾರುಗಳಿಗೆ ಮೇವು ಕೊಯ್ಯಲು ತೆರಳಿದ್ದ ವೇಳೆ ಈ ಘಟನೆ ನೆರೆಹೊರೆಯಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.
ಮೃತಪಟ್ಟವರಿಗೆ ಮಹಾರಾಷ್ಟ್ರ ಮೂಲದ ಜೈಸ್ವಾಲ್ ಕುಟುಂಬ – ರಾಜ್ಕುಮಾರ್ ಜೈಸ್ವಾಲ್, ಶ್ರದ್ಧಾ ಜೈಸ್ವಾಲ್ ಮತ್ತು ಅವರ 23 ತಿಂಗಳ ಮಗ ಕಾಶಿ ಜೈಸ್ವಾಲ್ ಸೇರಿದ್ದಾರೆ. ಅಲ್ಲದೆ, ತುಸ್ತಿ ಸಿಂಗ್, ಸ್ಥಳೀಯರು ವಿನೋದ್ ನೇಗಿ, ವಿಕ್ರಮ್ ಸಿಂಗ್ ರಾವತ್ (ಬಿಕೆಟಿಸಿ ಉದ್ಯೋಗಿ) ಮತ್ತು ಹೆಲಿಕಾಪ್ಟರ್ ನ ಪೈಲಟ್ ಕ್ಯಾಪ್ಟನ್ ರಾಜೀವ್ ಸಹ ಮೃತರ ಪಟ್ಟಿಯಲ್ಲಿ ಸೇರಿದ್ದಾರೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಎಲ್ಲಾ ಮೃತದೇಹಗಳು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.