ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಜಯದೇವಿ ಗಾಕವಾಡರಿಗೆ ಸನ್ಮಾನ

ಕಲ್ಯಾಣ ಕರ್ನಾಟಕ ಪ್ರಾಧ್ಯಾಪಕರ ಸಂಘದಿಂದ ಸನ್ಮಾನ
ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಜಯದೇವಿ ಗಾಕವಾಡರಿಗೆ ಸನ್ಮಾನ
ಕಲಬುರಗಿ: ನಾಡಿನ ಹೆಸರಾಂತ ಕವಯತ್ರಿ, ಕಾದಂಬರಿ ಗಾರ್ತಿ,ಕಥೆಗಾರ್ತಿ,ಗಜಲ್ ಗಾರ್ತಿ,ಸೃಜನಶೀಲ, ಸಂವೇದ ನಾಶೀಲ ಸಾಹಿತಿ,ಉತ್ತಮ ಪ್ರಾಧ್ಯಾಪಕರಾದ ಡಾ.ಜಯ ದೇವಿ ಗಾಯಕವಾಡ ಅವರನ್ನು ಬರುವ ೨೮ ಮತ್ತು ೨೯ ರಂದು ರಾಯಚೂರಿನಲ್ಲಿ ಜರುಗುವ ಅಖಿಲ ಭಾರತ ೧೧ ನೇ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ
ಮಾಡಿದ್ದು ಈ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಮಹಿಳಾ ಸಾಹಿತಿಗೆ ದೊರೆತ ಗೌರವವಾಗಿದೆ.ಡಾ.ಜಯದೇ ವಿ ಮೇಡಂ ಅವರು ಚಿಕ್ಕ ವಯಸ್ಸಿನಿಂದಲೇ ಭಾಷಣವನ್ನು ಮಾಡುತ್ತ ಜನ ಮಾನಸದಲ್ಲಿ ಉಳಿದಿದ್ದಾರೆ. ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದು ಅವರ ಪರಿಶ್ರಮ, ಸತತ ಸಾಧನೆಗೆ ಹಿಡಿದ ಕನ್ನಡಿ, ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ಪ್ರತಿಭಾನ್ವೇಷಣೆ ಗುರುತಿಸಿದ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಅರ್ಜುನ ಗೊಳಸಂ ಗಿ ಮತ್ತು ಅವರ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಕಲ್ಯಾಣ ಕರ್ನಾಟಕ ಪ್ರಾಧ್ಯಾಪಕರ ಸಂಘ ದ ಅಧ್ಯಕ್ಷ ಡಾ.ಶರಣಪ್ಪ ಸೈದಾಪೂರ ಅಭಿಮತ ವ್ಯಕ್ತ ಮಾಡಿದರು.ಡಾ.ಶ್ರೀಮಂತ ಹೊಳ್ಕರ್,ಡಾ.ಮಲ್ಲಿಕಾ ಅರ್ಜುನ ಶೆಟ್ಟಿ, ಡಾ.ಸಂಗೀತಾ ಎಸ್.ಸೈದಾಪೂರ ಇದ್ದರು.