ಶಹಾಬಾದ ಪೋಲಿಸ್, ಪತ್ರಕರ್ತರಿಂದ ಉಪನ್ಯಾಸ

ಶಹಾಬಾದ ಪೋಲಿಸ್, ಪತ್ರಕರ್ತರಿಂದ ಉಪನ್ಯಾಸ

.ಶಹಾಬಾದ ಪೋಲಿಸ್, ಪತ್ರಕರ್ತರಿಂದ ಉಪನ್ಯಾಸ

ಶಹಾಬಾದ: ಪೊಲೀಸ್ ಇಲಾಖೆ ಮತ್ತು ತಾಲೂಕ ಪತ್ರಕರ್ತರ

ವತಿಯಿಂದ ಸಮಾಜ ಸುಧಾರಣೆಯಲ್ಲಿ ಪೊಲೀಸ್ ಮತ್ತು ಪತ್ರಕರ್ತರ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮ ಭಾನುವಾರ 15 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಪತ್ರಕರ್ತರಾದ ರಮೇಶ ಭಟ್, ಲೋಹಿತ್ ಕಟ್ಟಿ, ನಿಂಗಣ್ಣ ಜಂಬಗಿ ತಿಳಿಸಿದ್ದಾರೆ.

ನಗರದ ಲಕ್ಷ್ಮಿ ಗಂಜ್ ನ ಸೇಂಟ್ ಥಾಮಸ್ ಶಾಲೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ ಉದ್ಘಾಟಿಸಲಿದ್ದು, ಫಾದರ್ ಜೇರಾಲ್ಡ್ ಸಾಗರ ಸಾನಿಧ್ಯ ವಹಿಸಲಿದ್ದಾರೆ, ಉಪನ್ಯಾಸಕರಾಗಿ ಶಹಾಬಾದ ಉಪ ವಿಭಾಗ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯರಾದ ದೇವೆಂದ್ರಪ್ಪ ಕಪನೂರ, ಪಿಐ ನಟರಾಜ ಲಾಡೆ ಉಪಸ್ಥಿತರಿರುವರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಚವ್ಹಾಣ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.

ತಾಲ್ಲೂಕಿನ ಸಾಹಿತಿಗಳು, ಕನ್ನಡ ಪರ, ರೈತ ಪರ, ದಲಿತ ಪರ ಹಾಗೂ ಸಂಘಟಕರು, ಹೋರಾಟಗಾರರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸ ಬೇಕೆಂದು ಮನವಿ ಮಾಡಿದ್ದಾರೆ.

ಶಹಾಬಾದ ವರದಿ :- ನಾಗರಾಜ್ ದಂಡಾವತಿ