ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತಿ ಬೆಳಗಿದ ಬಾನು ಮುಷ್ತಾಕ್: ಕುಲಪತಿ ಪ್ರೊ.ಭಾಸ್ಕರ್

ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತಿ ಬೆಳಗಿದ ಬಾನು ಮುಷ್ತಾಕ್: ಕುಲಪತಿ ಪ್ರೊ.ಭಾಸ್ಕರ್

ಚಕೋರ ವೇದಿಕೆ ಉಪನ್ಯಾಸ* - *ಕವಿಗೋಷ್ಠಿ :

 ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತಿ ಬೆಳಗಿದ ಬಾನು ಮುಷ್ತಾಕ್: ಕುಲಪತಿ ಪ್ರೊ.ಭಾಸ್ಕರ್

ಕಲಬುರಗಿ: ಧರ್ಮ, ಜಾತಿ, ಲಿಂಗ, ಸಮಾಜದಲ್ಲಿ ಹೆಣ್ಣಿನ ಕುಟುಂಬದ ಜವಾಬ್ದಾರಿ, ಒತ್ತಡಗಳನ್ನು ಮೀರಿದ ಹೆಣ್ಣಿನ ತಳಮಳ- ತಲ್ಲಣಗಳನ್ನು‌ಕಥೆಗಳ ಮೂಲಕ ಹೆಣೆದು ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತಿಯನ್ನು‌ ಬೆಳಗಿದ ಕಥೆ ಗಾರ್ತಿ ಬಾನು ಮುಷ್ತಾಕ್ ಕಥೆಗಳಲ್ಲಿ ಕಾಣುವುದು ಮುಖ್ಯ ಆಶಯವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾ ಲಯದ‌ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಅಭಿಮತ ವ್ಯಕ್ತ ಪಡಿಸಿದರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ

ಸಾಹಿತ್ಯ ವಿಚಾರ ವೇದಿಕೆ ಮತ್ತು ಕನ್ನಡ ಅಧ್ಯಯನ ಸಂಶೋಧನ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಸಹ ಯೋಗದಲ್ಲಿ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರ ಸ್ಕೃತರಾದ ಬಾನು ಮುಷ್ತಾಕ್ ಅವರ‌ ಕಥಾ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ ಮಾತನಾಡಿದ

ಹೆಣ್ಣಿಗೆ ಆಗುವ ಅನ್ಯಾಯ, ಧರ್ಮದ ರೀತಿ- ರಿವಾಜು , ಮಸಿದೆ ಪ್ರವೇಶ ಪೂಜೆ,ನಮಾಜದ ಅನೇಕ ರೀತಿಯ ಅನನ್ಯ‌ಕಥೆಗಾರರು ಎಂದು‌ ಬಣ್ಣಿಸಿದರು.

      ‌ಶರಣಬಸವ ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ಎಸ್.ಜಿ.ಡೋಳ್ಳೇಗೌಡರ ಅವರು ಅಂತಾರಾಷ್ಟ್ರೀಯ ಪ್ರಶ ಸ್ತಿ ಬಾನು ಅವರ ಮಹಿಳಾ ಚಿಂತನೆ ಕಥೆಗಳು ಮಾದರಿ ಎಂದರು.ಅಧ್ಯಕ್ಷತೆಯನ್ನು ಕುಲಪತಿ ಡಾ.ಅನೀಲಕುಮಾರ ಜಿ.ಬಿಡವೆ ವಹಿಸಿಕೊಂಡು ಮನೆಯಲ್ಲಿ ಹೆಣ್ಣು ಮಕ್ಕಳು ಗಂಡು - ಹೆಣ್ಣು ಎಂದು ನೋಡುವ ದೃಷ್ಟಿ ಬದಲಾಗಬೇಕು ಅವುಗಳಿಗೆ ಸ್ಪಂದಿಸುವ ಕಥೆ ಮುಷ್ತಾಕ್ ಇವರು ಬರೆದಿದ್ದಾ ರೆ.ನಮ್ಮ ವಿಶ್ವವಿದ್ಯಾಲಯಕ್ಕೆ ಭಾಷೆ ಮತ್ತು ಸಮಾಜದ ವಿಭಾಗಕ್ಕೆ ಅವರ ಕೃತಿ ತರಿಸಿ ಓದುವ ಹವ್ಯಾಸ ಬೆಳೆಸುವ ಕೆಲಸ ಮಾಡುವುದಾಗಿ ಹೇಳಿದರು.

         ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗ ಮುಖ್ಯಸ್ಥರಾದ ಶ್ರೀ ಟಿ.ವಿ.ಶಿವಾನಂದನ್,ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ರೆಡ್ಡಿ ಉಪಸ್ಥಿತಿ ಇದ್ದರು.

ಕವಿಗೋಷ್ಠಿಯಲ್ಲಿ ಸುರೇಶ ಬಡಿಗೇರ,ಶಾಂತಾ ಪಸ್ತಾಪೂರ,

ಡಾ.ಸಾರಿಕಾದೇವಿ ಕಾಳಗಿ,ಡಾ.ಶೀಲಾದೇವಿ ಬಿರಾದಾರ, ಡಾ‌.ಸಿದ್ಧಪ್ಪ ಹೊಸಮನಿ,ಡಾ.ಚನ್ನಮ್ಮ,ಡಾ.ಪ್ರಭಾವತಿ ಚಿತ್ತ ಕೋಟ,ಡಾ.ರಾಜಕುಮಾರ ಮಾಳಗೆ,ಡಾ‌.ಧನರಾಜ ನೀಲಾ

ಡಾ.ನಾಗಪ್ಪ ಗೋಗಿ,ಜಯಶ್ರೀ ಚಿಂತಾಮಣಿ,ರೇಣುಕಾ ಎಸ್.ಎಚ್. ಕವನ ವಾಚಿಸಿದರು.ಪ್ರಾರ್ಥನಾ ಗೀತೆ ವೈಷ್ಣವಿ‌ ಅಹಂಕಾರಿ ಹಾಡಿದರು.ಚಕೋರ ವೇದಿಕೆ ಸಂಚಸಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು, ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಡಾ.ಚನ್ನಮ್ಮ ಅಲ್ಬಾ ನಿರೂಪಿಸಿದರು.ಡಾ.ಕರೆಣ್ಣ ದೇವಾಪುರ ವಂದಿಸಿದರು.

ವರದಿ ಡಾ.ಅವಿನಾಶ S ದೇವನೂರ ಆಳಂದ