ಕಲಬುರಗಿ: ಹಿರಿಯ ನ್ಯಾಯಾಧೀಶ ವಿಶ್ವನಾಥ ಮೂಗತಿ ನಿಧನ
ಕಲಬುರಗಿ: ಹಿರಿಯ ನ್ಯಾಯಾಧೀಶ ವಿಶ್ವನಾಥ ಮೂಗತಿ ನಿಧನ
ಕಲಬುರಗಿ:ಕಲಬುರಗಿ ಮೂರನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾಗಿದ್ದ ಶ್ರೀ ವಿಶ್ವನಾಥ ಮೂಗತಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಅವರು ವರ್ಗಾವಣೆಯಾಗಿ ಕಲಬುರಗಿ ನ್ಯಾಯಾಲಯದಲ್ಲಿ ಸೇವೆ ನಿರ್ವಹಿಸುತ್ತಿದ್ದರು.
ಮೂಲತಃ ಬೇಳಗಾವಿಯಿಂದ ಆಗಮಿಸಿದ್ದ ನ್ಯಾಯಾಧೀಶರಿಗೆ ಇಂದು ಬೆಳಗ್ಗೆ ಕಲಬುರಗಿ ನ್ಯಾಯಾಲಯದಲ್ಲಿ ಎದೆ ನೋವು ನಿಂದ ತೀವ್ರ ಹೃದಯಾಘಾತ ಸಂಭವಿಸಿದ್ದು, ತುರ್ತು ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ದುಃಖದ ಸುದ್ದಿಯಿಂದ ಇಡೀ ವಕೀಲ ಸಮುದಾಯ ಆಘಾತಕ್ಕೊಳಗಾಗಿದ್ದು, ನ್ಯಾಯಾಲಯದ ನಿತ್ಯ ಕರ್ತವ್ಯಗಳನ್ನು ನಿರ್ವಹಿಸಲು ಆಗಮಿಸಿದ್ದ ವಕೀಲರು ಈ ಅಕಾಲಿಕ ನಿಧನದ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. “ಅವರು ಸಧ್ಯೆ ಕಲಬುರಗಿಗೆ ಬಂದು ಸೇವೆ ಆರಂಭಿಸಿದ್ದವರು, ಅತ್ಯಂತ ವಿನಮ್ರ ಹಾಗೂ ಕಾನೂನು ಪ್ರಜ್ಞೆಯುಳ್ಳ ನ್ಯಾಯಾಧೀಶರಾಗಿದ್ದರು” ಎಂದು ಹಲವರು ಸಂತಾಪ ವ್ಯಕ್ತಪಡಿಸಿದರು.
ಅವರ ನಿಧನಕ್ಕೆ ಕರ್ನಾಟಕ ವಕೀಲರ ಸಾಹಿತ್ಯ ಪರಿಷತ್ತಿನ ಹಾಗೂ ವಕೀಲರಾದ ಅಂಬಾರಾಯ ನೊಲಕರ್, ಬಾಬುರಾವ್ ಜಾದವ್, ಪ್ರಶಾಂತ ನಾಲವಾರ, ಕಲಬುರಗಿ ಹೈಕೋರ್ಟ್ ನ್ಯಾಯಾಧೀಶರು , ಕಲಬುರಗಿ ಜಿಲ್ಲಾ ನ್ಯಾಯಾಧೀಶರು , ವಕೀಲರಾದ ಶರಣಗೌಡ ಪಾಟೀಲ ಮುಡಬೂಳ, ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ವಕೀಲರ ಸಂಘವು ಇಂದು ತಮ್ಮ ಎಲ್ಲಾ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ, ನ್ಯಾಯಾಧೀಶರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದೆ.
-