ರಾಜಸ್ವ ಕೊರತೆಯಿಂದ ರಾಜ್ಯದ ಅನುದಾನಕ್ಕೆ ಇಡೆಬಿಡೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ರಾಜಸ್ವ ಕೊರತೆಯಿಂದ ರಾಜ್ಯದ ಅನುದಾನಕ್ಕೆ ಇಡೆಬಿಡೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ರಾಜಸ್ವ ಕೊರತೆಯಿಂದ ರಾಜ್ಯದ ಅನುದಾನಕ್ಕೆ ಇಡೆಬಿಡೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯದ ತಲಾ ಆದಾಯವು ಆರು ಜಿಲ್ಲೆಗಳನ್ನು ಹೊರತುಪಡಿಸಿ ಇತರೆ ಎಲ್ಲೆಡೆ ಕುಸಿತದಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಲಾ ಆದಾಯ ಇನ್ನು ಹೆಚ್ಚಿನ ಮಟ್ಟದಲ್ಲಿ ಕಡಿಮೆಯಿದ್ದು, ಇದು ರಾಜಸ್ಥಾನ, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದ ಮಟ್ಟಕ್ಕೆ ಸಮಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ರಾಜಸ್ವ ಕೊರತೆ ಅನುಭವಿಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುವ ವ್ಯವಸ್ಥೆ ಇದ್ದರೂ, ಕಳೆದ ವರ್ಷ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಲಾಗಿಲ್ಲ. ಇದೇ ವೇಳೆ, ಕರ್ನಾಟಕದಷ್ಟೇ ನಷ್ಟದಲ್ಲಿರುವ ಕೇರಳಕ್ಕೆ ರಾಜಸ್ವ ಕೊರತೆಯನ್ನು ಭರಿಸುವ ಸಲುವಾಗಿ 38,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

15ನೇ ಹಣಕಾಸಿನ ಆಯೋಗವು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಬೇಕೆಂದು ಶಿಫಾರಸ್ಸು ಮಾಡಿದ್ದರೂ, ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿದೆ. Bengaluru Peripheral Ring Road ಪ್ರಾಜೆಕ್ಟ್‌ಗಾಗಿ ₹3,000 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ಸೇರಿದಂತೆ ಒಟ್ಟು ₹11,495 ಕೋಟಿ ಶಿಫಾರಸ್ಸುಗಳನ್ನು ಹಣಕಾಸು ಆಯೋಗ ಮಾಡಿದ್ದರೂ, ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.

“ಬೆಂಗಳೂರು ನಗರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ಮನವಿಗೆ ತಕ್ಕಂತೆ ಅನುದಾನ ನೀಡದೇ ಹೋದರೆ, ನಗರಾಭಿವೃದ್ಧಿಗೆ ಕನಿಷ್ಠ ₹1 ಲಕ್ಷ 15 ಸಾವಿರ ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ” ಎಂದು ಸಿದ್ದರಾಮಯ್ಯ ಕೇಂದ್ರದ ಎದುರು ಗುಡುಗಿದರು.