ಕಥೆಗಾರ್ತಿ ಬಾನು ಮುಷ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ...ಡಾ.ಎಂ.ಎಸ್.ಶಿರವಾಳ

ಕಥೆಗಾರ್ತಿ ಬಾನು ಮುಷ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ...ಡಾ.ಎಂ.ಎಸ್.ಶಿರವಾಳ

ಕಥೆಗಾರ್ತಿ ಬಾನು ಮುಷ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ...ಡಾ.ಎಂ.ಎಸ್.ಶಿರವಾಳ

ಸುರಪುರ (ಯಾದಗಿರಿ):-ಕಥೆಗಾರ್ತಿ ಬಾನು ಮುಷ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ.ಎಂದು ಡಾ.ಎಂ.ಎಸ್.ಶಿರವಾಳ* ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅವರು

ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು ರಂಗಂಪೇಟೆಯ ರಾಷ್ಟ್ರೀಯ ಸೇವಾ ಶಿಬಿರದಲ್ಲಿ ಚಕೋರ ಸಾಹಿತ್ಯ ವೇದಿಕೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ಪಡೆದ ಬಾನು ಮುಸ್ತಾಕ್ ಅವರ ಕಥೆಗಳ ಕುರಿತು ಮಾತನಾಡಿದರು.

ಸುರಪುರ ತಾಲೂಕಿನ ಕರ್ನಾಟಕ ಅನುದಾನಿತ ಫ್ರೌಢ ಶಾಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಜರುಗಿತು. ಹಿರಿಯ ಸಂಶೋಧಕರಾದ ಡಾ.ಎಂ ಎಸ್ ಶಿರವಾಳ ಅವರು ಮುಂದುವರಿದು ಯುವ ಜನತೆ ಕಾವ್ಯ ಕಟ್ಟುವ ಪಕ್ವತೆಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯ ಹೆಚ್ಚೆಚ್ಚು ಓದುವದರ ಮೂಲಕ ಮತ್ತು ಬರೆಯುವುದರ ಮೂಲಕ ಬೆಳೆಯಬೇಕು ಎಂದು ಕರೆ ನೀಡಿದರು.

ಆರಂಭದಲ್ಲಿ ಆಶಯ ನುಡಿ ಆಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ಧರಾಮ ಹೊನ್ಕಲ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯೋಜನೆಗಳು, ಚಕೋರ ಕಾರ್ಯಕ್ರಮದ ಮೂಲಕ ಇಂತಹ ಮಹತ್ವದ ಸಾಹಿತಿಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಜನಸಾಮಾನ್ಯರಿಗೆ ಮುಟ್ಟಿಸಿ ಸಾಹಿತ್ಯಾಸಕ್ತಿ ಮೂಡಿಸಲಾಗುತ್ತಿದೆ ಎಂದು ಬಾನು ಮುಷ್ತಾಕ್ ಅವರ ಕಥೆಗಳ ಆಶಯ ಕುರಿತು, ಕಥೆಯ ರಚನೆಯ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣಗೌಡ ಪಾಟೀಲ್ ಜೈನಾಪುರ ಅವರು ಬಾನು ಮುಷ್ತಾಕ್ ರ ಎದೆಯ ಹಣತೆ ಹಾಗೂ ಹಸಿನಾ ಸಂಕಲನದ ಅನೇಕ ಕಥೆಗಳು ಇಂದು ವಿಶ್ವದ ಗಮನ ಸೆಳೆದು ಕನ್ನಡದ ಕೀರ್ತಿ ಹೆಚ್ಚಿಸಿವೆ ಎಂದು ಅವರ ಕಥೆಗಳ ಪಾತ್ರಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ನಾಗಣ್ಣ ಪುಜಾರಿಯವರು ಇಂತಹ ಕಾರ್ಯಕ್ರಮಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಳ್ಳುವ ಮೂಲಕ ಯುವ ಸಮೂಹಕ್ಕೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಈ ಮುಂಚೆ ನಮಗೆ ಸಾಹಿತ್ಯ ಅಕಾಡೆಮಿ ಎಲ್ಲೋ ಇದೆ ಅನಿಸುತ್ತಿತ್ತು.ಈಗ ಅದು ನಮ್ಮ ಮನೆಬಾಗಿಲಿದೆ ಬರುತ್ತಿರೋದು ಅಭಿಮಾನದ ವಿಷಯ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಹೊಂದಿದ್ದ ಉಪನ್ಯಾಸಕರಾದ ಡಾ.ಈಶ್ವರಪ್ಪ ಎನ್ ತಳವಾರ, ಶಂಕರಪ್ಪನವರು ಹಾಗೂ ಡಾ.ಉಮಾದೇವಿ ಮಟ್ಟಿಯವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.ಉಪನ್ಯಾಸಕರಾದ ಶ್ರೀ ದೊಡ್ಡಮನಿ ಅವರು ಕಾರ್ಯಕ್ರಮ ನಿರೂಪಿಸಿದರು.. ವಿದ್ಯಾರ್ಥಿಗಳಾದ ರೇಖಾ,ಹೇಮಾ,ಪ್ರಿಯಾಂಕ ಪ್ರಾರ್ಥಿಸಿದರು. ಇಂಗ್ಲಿಷ್ ಉಪನ್ಯಾಸಕರಾದ ಡಾ.ಚಂದ್ರಶೇಖರ ಜಿ.ಡೋಲೆ ವಂದಿಸಿದರು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು