ದೇಶದ ಸ್ವಾತಂತ್ರ್ಯ ಚಳುವಳಿಗೆ ಯುವಕರನ್ನು ಒಗ್ಗೂಡಿಸುವಲ್ಲಿ ಡಾ. ಬಾಬುಜಿ ರಾಮ್ ಅವರ ಪ್ರಮುಖ ವಹಿಸಿದರು : ಸಚಿವ ಡಾ. ಎಸ್. ಪಿ.ಪಾಟೀಲ್
.ದೇಶದ ಸ್ವಾತಂತ್ರ್ಯ ಚಳುವಳಿಗೆ ಯುವಕರನ್ನು ಒಗ್ಗೂಡಿಸುವಲ್ಲಿ ಡಾ. ಬಾಬುಜಿ ರಾಮ್ ಅವರ ಪ್ರಮುಖ ವಹಿಸಿದರು : ಸಚಿವ ಡಾ. ಎಸ್. ಪಿ.ಪಾಟೀಲ್
ಜಯಂತ್ಯೋತ್ಸವ ಸಮಿತಿ ಒತ್ತಾಯದಂತೆ ಡಾ. ಬಾಬುಜಿ ಮೂರ್ತಿ ಮತ್ತು ಭವನ ನಿರ್ಮಾಣಕ್ಕೆ ಸಚಿವರಿಂದ ಸ್ಪಂದನೆ
ಚಿಂಚೋಳಿ : ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿ ಯುವಕರನ್ನು ಜೋಡಿಸುವುದರಲ್ಲಿ ಡಾ. ಜಗಜೀವನ ರಾಮ್ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಅವರು ಸುಲೇಪೇಟ ಎಸ್. ಟಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಡಾ. ಬಾಬು ಜಗಜೀವನ್ ರಾಮ್ ಅವರು ಸಚಿವರಾಗಿ, ಉಪ ಪ್ರಧಾನಿಗಳಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದವರು. ಸ್ವಾತಂತ್ರ್ಯದ ನಂತರ ದೇಶ ಕಷ್ಟದ ಪರಿಸ್ಥಿಯಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲಿಯೇ ಭತ್ತ ಬೆಳೆಯಲು ಶಕ್ತಿ ಕೊಟ್ಟವರು ಡಾ. ಬಾಬು ಜಗಜೀವನರಾಮ್ ಅವರು. ಹೀಗಾಗಿ ಅವರನ್ನು ಹಸಿರು ಕ್ರಾಂತಿ ಹರಿಕಾರರು ಎಂದು ಕರೆಯಲಾಗುತ್ತದೆ. ಸಮಾಜದ ಬಹುದಿನಗಳ ಹೋರಾಟವಾಗಿರುವ ಒಳ ಮೀಸಲಾತಿ ಜಾರಿಗಾಗಿ ದೇಶದ ಸರ್ವೋಚ್ಚ ನ್ಯಾಯಾಲಯದ ಕಾನೂನು ತೀರ್ಪು ನೀಡಿದ್ದು, ಸರಕಾರ ಕೂಡ ಒಳ ಮೀಸಲಾತಿ ಜಾರಿಗೊಳಿಸಲು ತೀರ್ಮಾನ ತೆಗೆದುಕೊಳ್ಳಲು ಗಣತಿ ಕಾರ್ಯಕೈಗೊಂಡಿದೆ. ಸರಕಾರಗಳು ಬರುತ್ತವೆ. ಹೋಗುತ್ತವೆ ಯಾವ ಸರಕಾರ ಏನು ಮಾಡಿದೆ ಎಂಬುವುದು ಕೂಡ ಸಮುದಾಯದ ಮುಖಂಡರು ಜನರಿಗೆ ತಿಳಿಸಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದ ಮೇಲೆ ಸರಕಾರ ನಡೆಯುತ್ತಿದೆ. ಎಲ್ಲಾ ಜಾತಿ ಧರ್ಮಗಳನ್ನು ಅಪ್ಪಿಕೊಂಡು ನಡೆಯುತ್ತಿದ್ದೇವೆ. ಯಾವುದೇ ಸಮಾಜವನ್ನು ಎತ್ತಿಕಟ್ಟಿ, ದೌರ್ಜನ್ಯದ ದಬ್ಬಾಳಿಕೆ ನಡೆಸಿಲ್ಲ. ಅದಕ್ಕೆ ಆಸ್ಪದ ಕೊಡುವುದು ಸರಕಾರ ಮಾಡುವುದಿಲ್ಲ. ಮೇಲು ಕೀಳು ತೋರದೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಸರಕಾರ ಮಾಡುತ್ತಿದೆ. ಸಮಾಜದ ಬೇಡಿಕೆಗಳ ಮನವಿಯಂತೆ ಡಾ. ಬಾಬುಜಿ ಮೂರ್ತಿ ಮತ್ತು ಭವನ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಮಾದಿಗ ಸಮಾಜದ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ, ಚಿಂತಕ ಅಂಬಣ್ಣಾ ಅರಳಿಕರ್ ಅವರು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಸುಲೇಪೇಟ ವಿಶ್ವಕರ್ಮ ಏಕ ದಂಡಗಿ ಮಠದ ಪೂಜ್ಯ ಶ್ರೀ ದೊಡ್ಡೇಂದ್ರ ಮಹಾ ಸ್ವಾಮಿ ವಹಿಸಿದರು.
ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿನೋದ ಓಂಕಾರ, ವಿಜಯಕುಮಾರ ಕೊರಡಂಪಳ್ಳಿ, ಮೇಘರಾಜ ರಾಠೋಡ್, ತಾಹೇರ್ ಪಟೇಲ್, ಬಸವರಾಜ ಸಜ್ಜನ, ನಾಸೀರ್, ಮಲ್ಲಿಕಾರ್ಜುನ ಗುಲಗುಂಜಿ, ಆನಂದ ಟೈಗರ್, ಡಾ. ಮಲ್ಲಿಕಾರ್ಜುನ್ ಸಾವರ್ಕರ್, ಚಾಂದ ಪಾಶಾ ಮೂಮಿನ್, ಮಾಸ್ತನ್ ಅಲಿ ಪಟ್ಟೇದಾರ, ಸುನೀಲ್ ಸಲಗರ, ಸಂಪತ್ ಬೆಳಿಚುಕ್ಕಿ, ಮಲ್ಲಿಕಾರ್ಜುನ ಮಾಳಗಿ ಅವರು ಉಸ್ಥಿತರಿದ್ದರು.